No menu items!
12.3 C
Munich
Thursday, April 30, 2026

10 ನೂತನ ಸಚಿವರಿಗೆ ಖಾತೆ ಹಂಚಿಕೆಯಾದ್ರೂ ಮುಂದುವರೆದ ಕ್ಯಾತೆ..!

Must read

ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಶಾಸಕರ ಪೈಕಿ 10 ಮಂದಿಗೆ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿದೆ. ಮೊನ್ನೆ ಮೊನ್ನೆಯಷ್ಟೇ ಆ ‘ಅರ್ಹ’ರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ರು. ಆದರೆ, ಖಾತೆ ಹಂಚಿಕೆಯಾಗಿರಲಿಲ್ಲ. ಇದೀಗ ಖಾತೆ ಹಂಚಿಕೆಯಾಗಿದೆ. ಅದರ ಬೆನ್ನಲ್ಲೇ ಕ್ಯಾತೆ ಕೂಡ ಹೆಚ್ಚಿದೆ..!
ರಮೇಶ್ ಜಾರಕಿಹೊಳಿಗೆ ಬಯಸಿದ್ದಂತೆ ಜಲಸಂಪನ್ಮೂಲ ಖಾತೆ ನೀಡಲಾಗಿದೆ. ಇನ್ನುಳಿದಂತೆ ಎಸ್​​ ಟಿ ಸೋಮಶೇಖರ್​ಗೆ ಸಹಕಾರ, ಬಿ ಸಿ ಪಾಟೀಲ್​ಗೆ ಅರಣ್ಯ ಇಲಾಖೆ, ಶಿವರಾಂ ಹೆಬ್ಬಾರ್​​ಗೆ ಕಾರ್ಮಿಕ, ಸುಧಾಕರ್​ಗೆ ವೈದ್ಯಕೀಯ, ಶ್ರೀಮಂತ್ ಪಾಟೀಲ್​​ಗೆ ಜವಳಿ, ನಾರಾಯಣ ಗೌಡಗೆ ಪೌರಾಡಳಿತ ಮತ್ತು ತೋಟಗಾರಿಕೆ, ಆನಂದ್ ಸಿಂಗ್​ಗೆ ಆಹಾಗರ ಮತ್ತು ನಾಗರಿಕ, ಗೋಪಾಲಯ್ಯಗೆ ಸಣ್ಣ ಕೈಗಾರಿಕೆ, ಭೈರತಿ ಬಸವರಾಜ್​ಗೆ ನಗರಾಭಿವೃದ್ಧಿ ( ಬೆಂಗಳೂರು ಅಭಿವೃದ್ಧಿ ಹೊರತುಪಡಿಸಿ) ಖಾತೆ ದೊರೆತಿದೆ. ಆದರೆ, ಈ ಎಲ್ಲಾ ಸಚಿವರಿಗೂ ತಾವು ಬಯಸಿದ ಖಾತೆ ಸಿಕ್ಕಿಲ್ಲ. ಆದ್ದರಿಂದ ಬಹುತೇಕರು ಕ್ಯಾತೆ ತೆಗೆದಿದ್ದಾರೆ. ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article