ಸರಿಯಾಗಿ ಕೆಲಸ ಮಾಡೋಕೆ ಆಗ್ತಿಲ್ವಾ..? ಈ ಸ್ಟೋರಿ ನೋಡಿ

Date:

ಆಫೀಸ್ನಲ್ಲಿ ಯಾವುದೇ ಕೆಲಸ ಮಾಡಲು ಮನಸ್ಸಿಲ್ಲ. ಕೆಲಸದ ಮೇಲೆ ಫೋಕಸ್ ಮಾಡಲು ಸಾಧ್ಯವಾಗ್ತಿಲ್ಲ. ಕೆಲಸ ಮಾಡುವ ಸ್ಥಳದಲ್ಲಿ ಪ್ರತಿ ಸಲ ಆಯಾಸ, ಸುಸ್ತು. ತಲೆನೋವು, ಕಾನ್ಸ್ಟ್ರೆಟ್ ಸಮಸ್ಯೆ ಹೆಚ್ಚು ಎದುರಿಸುತ್ತೇವೆ ಎಂಬುದು ಬಹುತೇಕ ಉದ್ಯೋಗಿಗಳ ಗೋಳು..! ಕೆಲವೊಂದು ಸಲ ಕೆಲಸದ ಒತ್ತಡ ಬರ್ನ್ ಔಟ್ ಮಾಡಿ ಬೀಡುತ್ತದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲಸ ಮಾಡುವ ಸ್ಥಳದಲ್ಲಿ ಇಂಥ ಸಂದರ್ಭ ಎದುರಾಗುವ ಸಾಧ್ಯತೆ ಹೆಚ್ಚು. ಆಗ ವಿಶ್ರಾಂತಿ ಪಡೆಯಲು, ಸ್ವಲ್ಪ ಹೊತ್ತು ಚೇತರಿಸಿಕೊಳ್ಳಲು ಉದ್ಯೋಗಿಗಳು ಬಯಸುತ್ತಾರೆ. ಆದ್ರೆ ಅದು ಸಾಧ್ಯವಾಗಲ್ಲ. ಯಾಕಂದ್ರೆ ಕೆಲಸ ಅರ್ಧಕ್ಕೆ ಬಿಟ್ಟು ಸಂಪೂರ್ಣ ವಿರಾಮ ತೆಗೆದುಕೊಳ್ಳಲು ಆಗದೇ ಇರಬಹುದು. ಆದ್ರೆ ಯೋಚನೆ ಮಾಡಬೇಕಿಲ್ಲ. ಕೆಲಸದ ಒತ್ತಡ ಎಷ್ಟೇ ಇದ್ರೂ, ಬರ್ನ್ ಔಟ್ ಸಮಸ್ಯೆಯಿಂದ ಹೊರ ಬರಬಹುದು.

ಹೌದು……….ಕೆಲಸ ಒತ್ತಡದ ಮಧ್ಯೆ ಆ್ಯಕ್ಟಿವ್ ಆಗಿ ಕೆಲಸ ಮಾಡಬೇಕಂದ್ರೆ ಒಂದು ಸರ್ಕಸ್ ಇದ್ದಂತೆ. ಆದ್ರೆ ಕೆಲಸ ಮಾಡುವ ಸ್ಥಳದಲ್ಲಿ ಸುಲಭ ಹಾಗೂ ತ್ವರಿತ ಟ್ರಿಕ್ಸ್ ಫಾಲೋ ಮಾಡಿದ್ರೆ ಆರೋಗ್ಯದಿಂದ ಇರಬಹುದು ಗೊತ್ತಾ?. ಕೆಲಸ ಮಾಡುವ ಸ್ಥಳದಲ್ಲಿ ಉದ್ಯೋಗಿಗಳಿಗೆ ಬೇಗ, ಸುಲಭವಾಗಿ ಕೆಲಸ ಮಾಡಲು ಕಷ್ಟವಾಗಬಹುದು. ಆಗ ಯೋಚಿಸಬೇಕಾಗಿಲ್ಲ. ಬಾಕಿ ಉಳಿದಿರುವ ಹಾಗೂ ಮಾಡಬೇಕೆಂದಿರುವ ಕೆಲಸದ ಬಗ್ಗೆ ಪಟ್ಟಿ ಮಾಡಿ. ಸಣ್ಣ ಅಥವಾ ದೊಡ್ಡ ಲಿಸ್ಟ್ ಇದ್ದರೂ ಪರವಾಗಿಲ್ಲ. ಮಾಡಬೇಕಾಗಿರುವ ಕೆಲಸದ ಬಗ್ಗೆ ಲಿಸ್ಟ್ ಮಾಡಿದ್ರೆ ಅರ್ಧ ಕೆಲಸ ಮುಗಿದಂತೆ. ಈ ರೀತಿ ಮಾಡುವುದರಿಂದ ಉತ್ಪಾದನಾ ಶಕ್ತಿ ಹೆಚ್ಚುತ್ತದೆ. ಅಲ್ಲದೇ ಮಿದುಳಿಗೂ ಹೆಚ್ಚು ಕೆಲಸ ಕೊಡುವ ಅಗತ್ಯವಿರುವುದಿಲ್ಲ.

ಆರೋಗ್ಯಕರ ತಿಂಡಿ ಸೇವನೆ
ಕೆಲಸ ಮಾಡುವ ಸ್ಥಳದಲ್ಲಿ ಆ್ಯಕ್ಟಿವ್ ಆಗಿ ಇರಲು ಆರೋಗ್ಯಕರ ತಿಂಡಿ, ಸ್ನ್ಯಾಕ್ಸ್ ಕೂಡಾ ಅಷ್ಟೇ ಮುಖ್ಯವಾಗಿರುತ್ತೆ.. ಕೆಲಸ ಮಾಡುವ ಸ್ಥಳದಲ್ಲಿ ಹೆಚ್ಚಿನವರು ಫ್ಯಾಟಿ ಫುಡ್ ಸೇವಿಸುತ್ತಾರೆ. ಆದ್ರೆ ಇದು ಅನಾರೋಗ್ಯ ತಂದೊಡ್ಡುತ್ತವೆ. ಕೆಲಸದ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ. ಫ್ಯಾಟಿ, ಜಿಡ್ಡಿನಂಶ ಹೆಚ್ಚಿರುವ ಆಹಾರದ ಬದಲು, ಬಾದಾಮಿ, ಕ್ಯಾರೆಟ್, ಸೇಬು ಹಣ್ಣು ತಿಂದರೆ ರಿಫ್ರೆಶ್ ಆಗಿರಬಹುದು. ಅಲ್ಲದೇ ಮತ್ತಷ್ಟು ಕೆಲಸ ಮಾಡಲು ನೀವು ಉತ್ತೇಜಿತರಾಗಬಹುದು.
ವಾಕ್:
ಆಫೀಸ್ನಲ್ಲಿ ಒಂದೇ ಸ್ಥಳದಲ್ಲಿ, ಕೂತು ಕೆಲಸ ಮಾಡುತ್ತಿದ್ದರೆ, ಸುಸ್ತು, ಫೀವರ್ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಕೂತಲ್ಲೇ ಕೂತು ಮೈ ಜಡವಾಗಿರುತ್ತದೆ. ಕೆಲಸದ ಮಧ್ಯೆ 10 ನಿಮಿಷಗಳ ಕಾಲ ಹೊರಗೆ ತೆರಳಿ, ವಾಕ್ ಮಾಡಿ. ಇದ್ರಿಂದ ಸ್ವಲ್ಪ ತಾಜಾ ಗಾಳಿ ಪಡೆಯಬಹುದು. ಇದು ನಿಮ್ಮ ಮೂಡ್ನ್ನು ಫ್ರೆಶ್ ಆಗಿರಿಸುತ್ತದೆ.

ಪಾಸಿಟಿವ್ ಥಿಂಕಿಂಗ್
ಪ್ರತಿ ಕೆಲಸದ ಕೊನೆಯಲ್ಲೂ ಪಾಸಿಟಿವ್ ದೃಷ್ಠಿಕೋನ ಉಳಿಸಿಕೊಳ್ಳಲು ಪ್ರಯತ್ನಿಸಿ. ಮಾಡುತ್ತಿರುವ ಕೆಲಸದಲ್ಲಿ ನಂಬಿಕೆ ಇರಬೇಕು. ಬಹಳಷ್ಟು ಜನ ಉದ್ಯೋಗಿಗಳು ತಾವು ಮಾಡುತ್ತಿರುವ ಕೆಲಸದಲ್ಲಿ ನಂಬಿಕೆ ಇರುವುದಿಲ್ಲ. ಇದ್ರಿಂದ ಜಾಬ್ ಬರ್ನ್ ಔಟ್ ಸಮಸ್ಯೆ ಎದುರಿಸುವ ಸಾಧ್ಯತೆ ಹೆಚ್ಚು. ಮಾಡುತ್ತಿರುವ ಕೆಲಸದಲ್ಲಿ ನಂಬಿಕೆ, ಶ್ರದ್ಧೆ, ಆಸಕ್ತಿ ಇದ್ದರೆ ಒತ್ತಡವನ್ನು ನಿರ್ವಹಿಸುವುದು ಸುಲಭವಾಗುತ್ತೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...