ಮೇಷ: ಈ ರಾಶಿಯವರು ಗಣೇಶ ಹಬ್ಬದಂದು ವಕ್ರತುಂಡ ಗಣೇಶನನ್ನು ಪೂಜಿಸಬೇಕು. ಇದರಿಂದ ಎಲ್ಲಾ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುತ್ತೀರಿ . ಈ ದಿನ ‘ಓಂ ಗಂ ಗಣಪತಯೇ ನಮಃ’ ಮಂತ್ರವನ್ನು 108 ಬಾರಿ ಪಠಿಸಬೇಕು. ಗುಲಾಬಿ ಅಥವಾ ಕೆಂಪು ಬಣ್ಣದ ಗಣೇಶನನ್ನು ಮನೆಗೆ ತರಬೇಕು. ಗಣೇಶನಿಗೆ ಲಡ್ಡುಗಳನ್ನು ಅರ್ಪಿಸಿ ಸ್ವೀಕರಿಸಬೇಕು.
ವೃಷಭ : ಗಣೇಶ ಚತುರ್ಥಿಯಂದು ಮನೆಗೆ ತಿಳಿ ಹಳದಿ ವಿನಾಶಕ ಗಣೇಶನ ವಿಗ್ರಹವನ್ನು ತರಬೇಕು. ನಂತರ ಗಣಪತಿಗೆ ಪ್ರಿಯವಾದ ತೆಂಗಿನಕಾಯಿ ಲಡ್ಡು ಮತ್ತು ಮೋದಕವನ್ನು ಅರ್ಪಿಸಬೇಕು. ‘ಓಂ ಹ್ರೀಂ ಗ್ರೀಂ ಹರಿ’ ಮಂತ್ರವನ್ನು 108 ಬಾರಿ ಪಠಿಸದರೆ ವೃಷಭ ರಾಶಿಯವರಿಗೆ ಉಳಿತಾಗುತ್ತದೆ .
ಮಿಥುನ : ಈ ರಾಶಿಯವರು ಗಣೇಶ ಚತುರ್ಥಿಯಂದು ತಿಳಿ ಹಸಿರು ಬಣ್ಣದ ಗಣೇಶನ ವಿಗ್ರಹವನ್ನು ಮನೆಗೆ ತಂದು ಪೂಜಿಸಬೇಕು. ಬಳಿಕ ಗಣೇಶನಿಗೆ ಮೋದಕವನ್ನು ಅರ್ಪಿಸಬೇಕು. ಗಣೇಶನಿಗೆ ಪ್ರತಿದಿನ ಹೆಸರು ಬೇಳೆಯ ಲಡ್ಡುಗಳನ್ನು ಅರ್ಪಿಸಿ ನಂತರ ಅದನ್ನು ಪ್ರಸಾದದ ರೂಪದಲ್ಲಿ ವಿತರಿಸಬೇಕು. ಈ ದಿನ ಶ್ರೀ ಸುಕ್ತವನ್ನು ಪಠಿಸಬೇಕು ಮತ್್ತು 108 ಬಾರಿ ‘ಓಂ ಶ್ರೀ ಶ್ರೀಯಾಯ ನಮಃ’ ಮಂತ್ರವನ್ನು ಜಪಿಸಬೇಕು.
ಕಟಕ: ಈ ರಾಶಿಯವರು ಗಣೇಶ ಹಬ್ಬದಂದು ಬಿಳಿ ಬಣ್ಣದ ಗಣಪತಿ ವಿಗ್ರಹವನ್ನು ಪೂಜಿಸಬೇಕು. ಈ ದಿನ ನೀವು ಗಣೇಶನಿಗೆ ಮೋತಿಚೂರ್ ಲಡ್ಡುಗಳನ್ನು ಮತ್ತು ಮೋದಕವನ್ನು ಅರ್ಪಿಸಬೇಕು. ಲಕ್ಷ್ಮಿ ಮತ್ತು ಗಣೇಶ ಇಬ್ಬರನ್ನು ಪೂಜಿಸುವುದು ಅತ್ಯಂತ ಶುಭದಾಯಕ. ನಂತರ ‘ಓಂ ಏಕಾದಂತಾಯ’ ಮಂತ್ರವನ್ನು 108 ಬಾರಿ ಪಠಿಸಿ.
ಸಿಂಹ : ಈ ರಾಶಿಯವರು ಶಕ್ತಿ ವಿನಾಯಕ ಗಣೇಶನನ್ನು ಪೂಜಿಸಬೇಕು. ಕಲ್ಲು ಸಕ್ಕರೆಯಿಂದ ತಯಾರಿಸಿದ ಲಡ್ಡುಗಳನ್ನು ಗಣೇಶನಿಗೆ ಅರ್ಪಿಸಿ. ‘ಶಕ್ತಿವಿನಾಯಕ ಗಣೇಶ ಗಣೇಶ ಓಂ ಏಕಾದಂತಾಯ ನಮಃ’ ಮಂತ್ರವನ್ನು 108 ಬಾರಿ ಜಪಿಸಬೇಕು. ಸಾಧ್ಯವಾದರೆ ಸ್ವಲ್ಪ ಗೋಧಿಯನ್ನು ಅಗತ್ಯವಿರುವ ಭಕ್ತರಿಗೆ ನೀಡಬೇಕು.
ಕನ್ಯಾ: ಈ ರಾಶಿಯವರು ಗಣೇಶ ಹಬ್ಬದಂದು ಹರಿದ್ರಾ ಗಣೇಶನನ್ನು ಪೂಜಿಸಿ, ವಿವಿಧ ಬಗೆಯ ಹಣ್ಣುಗಳನ್ನು, ಕಿತ್ತಳೆ ಬಣ್ಣದ ಲಡ್ಡುಗಳನ್ನು ಹಾಗೂ ಪಾಯಸವನ್ನು ಅರ್ಪಿಸಬೇಕು. ಗಣೇಶನಿಗೆ ಪಾಯಸವನ್ನು ಅರ್ಪಿಸಿದ ನಂತರ ಅದನ್ನು ಪ್ರಸಾದದ ರೂಪದಲ್ಲಿ ಮೊದಲು ಮನೆಯ ಹಿರಿಯ ವ್ಯಕ್ತಿಗೆ ನೀಡಬೇಕು.
ತುಲಾ : ಗಣೇಶ ಚತುರ್ಥಿಯಂದು ಬಿಳಿ ಬಣ್ಣದ ಗಣೇಶನನ್ನು ಅಥವಾ ತನ್ನ ಕೈಗಳಿಂದ ಶುಭ ಹಾರೈಸುತ್ತಿರುವ ಗಣೇಶನ ವಿಗ್ರಹವನ್ನು ಪೂಜಿಸಬೇಕು. ಮತ್ತು ಲಡ್ಡು ಅರ್ಪಿಸಬೇಕು. ‘ವಶಮಾನಯ ಸ್ವಾಹಾ’ ಮಂತ್ರವನ್ನನು 108 ಬಾರಿ ಪಠಿಸಿ ಪೂಜೆಯ ನಂತರ ಹಸಿರು ಹುಲ್ಲನ್ನು ಹಸುವಿಗೆ ನೀಡಬೇಕು.
ವೃಶ್ಚಿಕ : ಈ ರಾಶಿಯವರು ಕಡು ಕೆಂಪು ಬಣ್ಣದ ಗಣಪತಿಯ ವಿಗ್ರಹವನ್ನು ಅಥವಾ ಲಂಬೋದರ ಗಣೇಶನ ವಿಗ್ರಹವನ್ನು ಪೂಜಿಸಬೇಕು. ಗಣೇಶನಿಗೆ ಈ ದಿನ ಒಣದ್ರಾಕ್ಷಿ ಮತ್ತು ಎಳ್ಳಿನಿಂದ ತಯಾರಿಸಿದ ಲಡ್ಡುಗಳನ್ನು, ಮೋದಕವನ್ನು ಅರ್ಪಿಸಬೇಕು. ಬಡ ಮಕ್ಕಳಿಗೆ ಪುಸ್ತಕ ಮತ್ತು ಪೆನ್ಸಿಲ್ ಸೇರಿದಂತೆ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಇನ್ನಿತರ ವಸ್ತುಗಳನ್ನು ದಾನ ಮಾಡಬೇಕು.
ಧನು : ಈ ರಾಶಿಯವರು ಗಣೇಶ ಹಬ್ಬದಂದು ಹಳದಿ ಬಣ್ಣದ ಗಣೇಶನನ್ನು ಹಳದಿ ಬಣ್ಣದ ಹೂವುಗಳಿಂದ ಪೂಜಿಸಬೇಕು. ಅಥವಾ ವಿನಾಶಕ ರೂಪದ ಗಣೇಶನನ್ನು ಪೂಜಿಸಬೇಕು. ಹೆಸರು ಬೇಳೆ ಲಡ್ಡುಗಳನ್ನು ಗಣೇಶನಿಗೆ ಅರ್ಪಿಸಿ.
ಮಕರ : ಈ ರಾಶಿಯವರು ಗಣೇಶ ಹಬ್ಬಬ ಈ ದಿನ ತಿಳಿ ನೀಲಿ ಬಣ್ಣದ ಗಣೇಶನನ್ನು ಪೂಜಿಸಬೇಕು. ಉಮಾಪುತ್ರಾಯ ಗಣೇಶ ರೂಪವನ್ನು ಪೂಜಿಸಬೇಕು. ಮೋದಕವನ್ನು ಅಥವಾ ಬೇಸನ್ ಲಡ್ಡುಗಳನ್ನು ಅರ್ಪಿಸಬೇಕು. 108 ಬಾರಿ ‘ಓಂ ವಿಕಟಾಯ ನಮಃ’ ಮಂತ್ರವನ್ನು ಜಪಿಸಬೇಕು.
ಕುಂಭ : ಈ ರಾಶಿಯವರು ಕಡು ನೀಲಿ ಗಣಪತಿಯ ವಿಗ್ರಹವನ್ನು ಪೂಜಿಸಬೇಕು. ಅಥವಾ ಸರ್ವೇಶ್ವರಾಯ ರೂಪದ ಗಣೇಶನ ವಿಗ್ರಹವನ್ನು ಪೂಜಿಸಬೇಕು. ಎಳ್ಳುಂಡೆಯನ್ನು ಗಣೇಶನಿಗೆ ಅರ್ಪಿಸಿ, ಪ್ರಸಾದವಾಗಿ ವಿತರಿಸಬೇಕು. 108 ಬಾರಿ ‘ಓಂ ಸರ್ವೇಶ್ವರಾಯ ನಮಃ’ ಮಂತ್ರವನ್ನು ಪಠಿಸಬೇಕು.
ಮೀನ : ಹರಿದ್ರಾ ಗಣೇಶನ ವಿಗ್ರಹವನ್ನು ಅಥವಾ ಹಳದಿ ಬಣ್ಣದ ಗಣಪತಿ ವಿಗ್ರಹವನ್ನು ಪೂಜಿಸಬೇಕು. ಕೆಂಪು ಬಣ್ಣದ ಹೂವುಗಳಿಂದ ಗಣೇಶನನ್ನು ಪೂಜಿಸಿ, ಮೋದಕವನ್ನು ಅರ್ಪಿಸಬೇಕು. ಅದನ್ನು ಪ್ರಸಾದವಾಗಿ ಮಕ್ಕಳಿಗೆ ನೀಡಬೇಕು.