ಆಟ ಶುರು ಮಾಡಿರೋ ಶಮಂತ್ ಸಾಂಗ್ ಗೆ ಮನೆ ಮಂದಿ ಚಪ್ಪಾಳೆ

Date:

ಬಿಗ್‍ಬಾಸ್ ಮನೆಯಲ್ಲಿ ಶಮಂತ್ ವೀಕ್ ಕಂಟೆಸ್ಟೆಂಟ್ ಎಂದು ಹೇಳುತ್ತಿದ್ದ ಸ್ಪರ್ಧಿಗಳಿಗೆ ಬ್ರೋಗೌಡ ಇದೀಗ ಮನರಂಜನೆ ನೀಡುವ ಮೂಲಕ ಉತ್ತರ ನೀಡುತ್ತಿದ್ದಾರೆ. ಹಲವು ಟ್ಯಾಲೆಂಟ್ ಹೊಂದಿದ್ದರೂ ಇಷ್ಟು ದಿನ ಮೌನವಾಗಿದ್ದ ಶಮಂತ್ ಸದ್ಯ ಬಿಗ್ ಮನೆಯಲ್ಲಿ ಕಳೆದ ವಾರದಿಂದ ತಮ್ಮ ಆಟ ಶುರುಮಾಡಿದ್ದಾರೆ.

ಹೌದು, ನಿನ್ನೆ ಶಮಂತ್ ಈಜುಕೊಳದ ಬಳಿ ಮನೆ ಸದಸ್ಯರ ಮುಂದೆ ‘ನಾಳೆ ಏನು ಆಯ್ತಾದೆ ಅಂತ ಯಾರಿಗ್ ಗೊತ್ತಾಣ್ಣ,…’ ಎಂದು ಸಾಂಗ್‍ವೊಂದನ್ನು ಹಾಡಿದ್ದಾರೆ. ವಿಶೇಷವೇನಪ್ಪಾ ಅಂದರೆ ಈ ಸಾಂಗ್‍ನ ಮಧ್ಯದಲ್ಲಿ ಅರವಿಂದ್ ಅಂದ್ರೆ ಕ್ಲಾಸೂ, ಪ್ರಶಾಂತ್ ಬಂದ್ರೆ ಕೇಸು, ರಘು ಹಾರ್ಟ್ ಸಿಕ್ಸಟಿನೂ, ರಾಜೀವ್ ಖಾಲಿ ಪ್ರೋಟಿನ್, ದಿವ್ಯಾ ಯೆಸೂ ಬೇಕು, ದಿವ್ಯಾ ಯೂ ಸೇಫು, ಶುಭ ಅಂದ್ರೆ ಜಂಪು, ನಿಧಿ ಬಣ್ಣ ಕೆಂಪು, ಮಂಜು ಎಂರ್ಟಟೈನರೂ, ವಿಶ್ವ ಒಬ್ಬ ಸಿಂಗರ್, ವೈಷು ಅಡುಗೆ ಸೂಪರೂ, ಚಕ್ರಿ ಒಬ್ಬ ರೈಟರೂ ಎಂದು ಮನೆಯ ಎಲ್ಲಾ ಸ್ಪರ್ಧಿಗಳನ್ನು ಬಣ್ಣಿಸಿದ್ದಾರೆ.

ಅಷ್ಟೇ ಅಲ್ಲದೇ ಸಾಂಗ್‍ನ ಕೊನೆಯ ಸಾಲಿನಲ್ಲಿ ‘ವಿನ್ನರೂ ಯಾರು ಅಂತ ಡಿಸೈಡ್ ಆಗ್ಬೇಡಿ ಪಕ್ಕದಲ್ಲೇ ಕೂತಿರಬಹುದು ಹುಷಾರಾಗಿ..’ ಎಂದು ಚಮಕ್ ಕೂಡುವಂತೆ ಸಾಂಗ್ ಹಾಡಿದ್ದಾರೆ. ಈ ವೇಳೆ ಕೊನೆಯ ಸಾಲನ್ನು ಕೇಳಿ ಅಚ್ಚರಿಯಿಂದ ಮನೆಮಂದಿಯೆಲ್ಲಾ ಜೋರಾಗಿ ಕಿರುಚುತ್ತಾ ಚಪ್ಪಾಳೆಯನ್ನು ತಟ್ಟುತ್ತಾರೆ.

ಒಟ್ಟಾರೆ ಇಷ್ಟು ದಿನ ಶಮಂತ್ ಆ್ಯಕ್ಟಿವ್ ಆಗಿಲ್ಲ ಎಂದು ಹೇಳಿದವರು ನಿನ್ನೆ ಶಮಂತ್ ಸಾಂಗ್ ಕೇಳಿ ಸೂಪರ್, ಲವ್ಲಿ, ಫೆಂಟಾಸ್ಟಿಕ್ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮನೆಮಂದಿಗಷ್ಟೇ ಅಲ್ಲದೇ ಇಷ್ಟು ದಿನ ಕಾಯುತ್ತಿದ್ದ ವೀಕ್ಷಕರಿಗೂ ಶಮಂತ್ ಮನರಂಜನೆಯ ಕಚಗುಳಿ ನೀಡಿದ್ದಾರೆ ಎಂದೇ ಹೇಳಬಹುದು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...