ಈ ಇಬ್ಬರು ಸಹೋದರರನ್ನು ಒಮ್ಮೆ ನೋಡಿದ್ರೆ, ನೀವು ಕೂಡ ಒಂದು ಕ್ಷಣ ಮೌನವಾಗಿ ಬಿಡ್ತೀರ.. ಐಐಟಿ ಕೋಚಿಂಗ್ ಸೆಂಟರ್ನಲ್ಲಿ ವಿದ್ಯಾಭ್ಯಾಸ ಮಾಡ್ತಾ ಇರೋ ಈ ಇಬ್ಬರು ಸಹೋದರರಲ್ಲಿ ಒಬ್ಬ ಅಂಗವೈಕಲ್ಯ.. ಪೊಲಿಯೋ ಕಾಯಿಲೆಯಿಂದ ಬಳಲುತ್ತಿರೋ ಕೃಷ್ಣಾ ಎಂಬಾತನಿಗೆ ಆಸರೆಯಾಗಿರೋದು ಸ್ವತಃ ತನ್ನ ತಮ್ಮ..! ಆಶ್ಚರ್ಯದ ಸಂಗತಿ ಎಂದರೆ ಅಣ್ಣ ಇರೋ ಸ್ಥಳದಲ್ಲಿ ತಮ್ಮ, ತಮ್ಮ ಇರೋ ಜಾಗಕ್ಕೆ ಅಣ್ಣ ಎಲ್ಲೂ ಕಾಣಿಸಿಕೊಳ್ಳದ ಇಂದಿನ ಜನರೇಷನ್ನಲ್ಲಿ ತನ್ನ ಅಣ್ಣನಿಗೆ ಬೆನ್ನೆಲುಬಾಗಿ ನಿಂತಿದ್ದಾನೆ ತಮ್ಮ ಬಸಂತ್.. ಇಬ್ಬರೂ ವಿದ್ಯಾವಂತರಾಗಿದ್ದು ತಮ್ಮ ಬಸಂತ್ ಮತ್ತು ಅಣ್ಣ ಕೃಷ್ಣ ಇಬ್ಬರೂ ಪ್ರತಿಷ್ಟಿತ ಐಐಟಿ ಯಲ್ಲಿ ಅಡ್ಮಿಷನ್ ಪಡೆದಿದ್ದಾರೆ. ಈ ಮೂಲಕ ಇಂಜಿನೀಯರಿಂಗ್ನಲ್ಲಿ ಸೀಟು ಗಿಟ್ಟಿಸಿಕೊಳ್ಳೊ ಬಯಕೆಯಲ್ಲಿದ್ದಾರೆ. ಆದರೆ ಈ ಇಬ್ಬರು ಸಹೋದರರು ಓದುತ್ತಿರೋದು ಬೇರೆ ಬೇರೆ ಶಾಲೆಗಳಲ್ಲಿ. ಇನ್ನು ಅಣ್ಣನಿಗೆ ಐಐಟಿ ತರಬೇತಿ ಶಾಲೆಗೆ ತಮ್ಮ ಬಸಂತ್ ತನ್ನನ ಹೆಗಲ ಮೇಲೆ ಹೊತ್ತುಕೊಂಡು ಬಂದು ಬಿಡುತ್ತಾನಂತೆ ನೋಡಿ.. ಅಷ್ಟೇ ಅಲ್ಲ ಅಣ್ಣನ ಪ್ರತೀ ಚಟುವಟಿಕೆಯಲ್ಲೂ ತಮ್ಮನ ಸಹಕಾರ ಇದ್ದೇ ಇದೆ ನೋಡಿ.. ಇಬ್ಬರೂ ತರಬೇತಿ ಶಾಲೆಯಲ್ಲಿ ಒಟ್ಟಿಗೆ ವ್ಯಾಸಾಂಗ ಮಾಡ್ತಾ ಇರೋ ಈ ಸಹೋದರರು ಕಳೆದ ಮೂರು ವರ್ಷಗಳಿಂದ ಕೋಟಾದಿಂದ ಐಐಟಿ ತರಬೇತಿ ಶಾಲೆಯಲ್ಲಿ ಅಡ್ಮಿಷನ್ ಪಡೆದುಕೊಂಡಿದ್ದಾರೆ. ಮನೆಯಿಂದ ಹೊರಡುವಾಗ ಇಬ್ಬರೂ ಒಟ್ಟಿಗೆ ಶಾಲೆಗೆ ಬರುತ್ತಾರೆ ಹೋಗುತ್ತಾರೆ.. ಬಸಂತ್ ತಾನೆಲ್ಲೇ ಹೋದರು ತನ್ನ ಅಣ್ಣ ಕೃಷ್ಣನನ್ನು ತನ್ನ ಹೆಗಲ ಮೇಲೆ ಹೊತ್ತು ತಿರುಗುತ್ತಾನೆ ನೋಡಿ.. ಈ ಇಬ್ಬರು ಸಹೋದರರ ಪ್ರೀತಿ, ಮಮತೆ ಪ್ರತಿಯೊಬ್ಬರಿಗೂ ಮಾದರಿ ಎನ್ನುತ್ತಾರೆ ಅಲ್ಲಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು.
Like us on Facebook The New India Times
POPULAR STORIES :
“ಅಣ್ಣಾ ಕಿಸಾನ್ ಬಾಬುರಾವ್ ಹಜಾರೆ” ಈ ಬಾರಿಯ ಕಪಿಲ್ ಶರ್ಮಾ ಶೋನಲ್ಲಿ..!
ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?
ಪೆಪ್ಸಿ ಆ್ಯಡ್ನಲ್ಲಿ ವಿರಾಟ್ನ ದ್ವಂದ್ವ ನಿಲುವು..!
ಜಿಯೋ ಎಫೆಕ್ಟ್: ಬಿಎಸ್ಎನ್ಎಲ್ ಗ್ರಾಹಕರಿಗೆ ಉಚಿತ ಅನ್ಲಿಮಿಟೆಡ್ ವಾಯ್ಸ್ ಕಾಲ್..!
ಆನ್ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!
ಐಫೋನ್-7 ಮೋಬೈಲ್ನ ಕೋಕ ಕೋಲದಲ್ಲಿ ಹಾಕಿ ಫ್ರೀಜರ್ನಲ್ಲಿ ಇಟ್ಟ ಮುಂದೇನಾಯ್ತು ಗೊತ್ತಾ.?