ಚಂದ್ರಶೇಖರ ಸ್ವಾಮೀಜಿ ವಿರುದ್ದ FIR ದಾಖಲು: ವಿಚಾರಣೆಗೆ ಹಾಜರಾಗುವಂತೆ ನೋಟಿಸ್

Date:

ಚಂದ್ರಶೇಖರ ಸ್ವಾಮೀಜಿ ವಿರುದ್ದ FIR ದಾಖಲು: ವಿಚಾರಣೆಗೆ ಹಾಜರಾಗುವಂತೆ ನೋಟಿಸ್

ಬೆಂಗಳೂರು: ಭಾರತದಲ್ಲಿ ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂಬ ವಿವಾದಿತ ಹೇಳಿಕೆಗೆ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಸ್ವಾಮೀಜಿ ವಿರುದ್ಧ FIR ದಾಖಲಾಗಿತ್ತು. ಜೊತೆಗೆ ಸೈಯದ್ ಅಬ್ಬಾಸ್ ನೀಡಿದ ದೂರಿನ ಅನ್ವಯ ಉಪ್ಪಾರಪೇಟೆ ಠಾಣೆ ಪೊಲೀಸರು ಚಂದ್ರಶೇಖರ್ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆಗೆ ಮುಂದಾಗಿದ್ದಾರೆ. ಬಿಎನ್ಎಸ್ 299 ಅಡಿ ಎಫ್ಐಆರ್ ದಾಖಲು ಮಾಡಿದ್ದು, ಚಂದ್ರಶೇಖರ ಸ್ವಾಮೀಜಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಡಿಸೆಂಬರ್ 2 ರಂದು ಪೊಲೀಸ್ ಠಾಣೆಗೆ ಖುದ್ದು ಹಾಜರಾಗುವಂತೆ ನೊಟೀಸ್‌ನಲ್ಲಿ ಸ್ವಾಮೀಜಿಗೆ ಸೂಚನೆ ನೀಡಿದ್ದಾರೆ.
ಇನ್ನು ಸ್ವಾಮೀಜಿ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಎಚ್ಚೆತ್ತ ಸ್ವಾಮೀಜಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಚಂದ್ರಶೇಖರ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದರು. ಮುಸಲ್ಮಾನರೂ ಸಹ ಈ ದೇಶದ ಪ್ರಜೆಗಳೇ. ಎಲ್ಲರಂತೆ ಅವರಿಗೂ ಮತದಾನದ ಹಕ್ಕು ಇರುತ್ತದೆ. ನಾನು ಬಾಯಿ ತಪ್ಪಿ ನೀಡಿದ ಹೇಳಿಕೆಯಿಂದ ಮುಸಲ್ಮಾನ ಸಹೋದರರಿಗೆ ಬೇಸರವಾಗಿದ್ದರೆ, ಅದಕ್ಕಾಗಿ ಹೃತ್ಪೂರ್ವಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಅಂತ ಹೇಳಿದ್ದರು.

Share post:

Subscribe

spot_imgspot_img

Popular

More like this
Related

ಯುವಶಕ್ತಿ, ನಾರಿ ಶಕ್ತಿ, ರೈತರಿಗೆ ಆದ್ಯತೆ ನೀಡಿದ ಬಜೆಟ್: ಬಿ.ವೈ. ವಿಜಯೇಂದ್ರ ಶ್ಲಾಘನೆ

ಯುವಶಕ್ತಿ, ನಾರಿ ಶಕ್ತಿ, ರೈತರಿಗೆ ಆದ್ಯತೆ ನೀಡಿದ ಬಜೆಟ್: ಬಿ.ವೈ. ವಿಜಯೇಂದ್ರ...

ಏ.1ರಿಂದ ಹೊಸ ಕಾಯ್ದೆ ಜಾರಿ: ಅನಿವಾಸಿಗಳಿಗೆ MAT ವಿನಾಯಿತಿ, ಕನಿಷ್ಠ ತೆರಿಗೆ ದರದಲ್ಲಿ ರಿಲೀಫ್

ಏ.1ರಿಂದ ಹೊಸ ಕಾಯ್ದೆ ಜಾರಿ: ಅನಿವಾಸಿಗಳಿಗೆ MAT ವಿನಾಯಿತಿ, ಕನಿಷ್ಠ ತೆರಿಗೆ...

Budget 2026 Expectations: ಮಹಿಳೆ–ಯುವಕರ ಮೇಲೆ ಫೋಕಸ್, ಉದ್ಯೋಗಕ್ಕೆ ಹೊಸ ದಾರಿ

Budget 2026 Expectations: ಮಹಿಳೆ–ಯುವಕರ ಮೇಲೆ ಫೋಕಸ್, ಉದ್ಯೋಗಕ್ಕೆ ಹೊಸ ದಾರಿ ನವದೆಹಲಿ:...

ಕೇಂದ್ರ ಬಜೆಟ್ 2026–27: 7 ಹೈಸ್ಪೀಡ್ ರೈಲು ಕಾರಿಡಾರ್ ಘೋಷಣೆ – ಬೆಂಗಳೂರಿಗೆ ಬುಲೆಟ್ ರೈಲು

ಕೇಂದ್ರ ಬಜೆಟ್ 2026–27: 7 ಹೈಸ್ಪೀಡ್ ರೈಲು ಕಾರಿಡಾರ್ ಘೋಷಣೆ –...