ಕ್ಷುಲ್ಲಕ ವಿಚಾರಕ್ಕೆ ಗಲಾಟೆ: ಕರಿಮಣಿ ಮಾಲೀಕನನ್ನೇ ಮುಗಿಸಿದಳಾ ಪತ್ನಿ!?
ಚಿಕ್ಕಬಳ್ಳಾಪುರ:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ವಾಸುದೇವನಹಳ್ಳಿಯಲ್ಲಿ ಮನೆಯ ಹೊರಗಡೆ ಮಲಗಿದ್ದ ಗಂಡನ ಕುತ್ತಿಗೆಯಲ್ಲಿ ಚಾಕು ಇರಿದು ಕೊಲೆ ಮಾಡಲಾಗಿದ್ದು ಹೆಂಡತಿ ಮೇಲೆ ಗುಮಾನಿ ಮೂಡಿದೆ.
ಈರಣ್ಣ ಕೊಲೆಯಾದ ದುರ್ದೈವಿ. ಕಳೆದ ರಾತ್ರಿ ಈರಣ್ಣ ಹಾಗೂ ಪಾರ್ವತಮ್ಮ ನಡುವೆ ಜಗಳ ನಡೆದಿತ್ತಂತೆ. ನಂತರ ಮನೆಯ ಹೊರಭಾಗದಲ್ಲಿ ಎಂದಿನಂತೆ ಮಲಗಿದ್ದವ ಬೆಳಿಗ್ಗೆ ಎದ್ದು ನೋಡಿದ್ರೆ ಶವವಾಗಿ ಪತ್ತೆಯಾಗಿದ್ದಾನೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಪಾರ್ವತಮ್ಮನ ಗಂಡನನ್ನ ಕೊಲೆ ಮಾಡಿದಳಾ ಎಂಬುದರ ಬಗ್ಗೆಯೂ ಪೊಲೀಸರು ವಿಚಾರಣೆ ಸಹ ನಡೆಸಿದ್ದಾರೆ. ಇಲ್ಲ ಬೇರೆ ಯಾರಾದರೂ ಕೊಲೆ ಮಾಡಿದರಾ…? ಅನ್ನೋ ಆಯಾಮದಲ್ಲೂ ತನಿಖೆ ಮುಂದುವರೆಸಿದ್ದಾರೆ.