ಸಾಲ ಕೊಡಿಸುವುದಾಗಿ ಕೋಟ್ಯಂತರ ರೂ ವಂಚನೆ: ಉದ್ಯಮಿಗಳೇ ಈತನ ಟಾರ್ಗೆಟ್..!

Date:

ಸಾಲ ಕೊಡಿಸುವುದಾಗಿ ಕೋಟ್ಯಂತರ ರೂ ವಂಚನೆ: ಉದ್ಯಮಿಗಳೇ ಈತನ ಟಾರ್ಗೆಟ್..!

ಮಂಗಳೂರು: ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ರೋಷನ್ ಸಲ್ಡಾನಾ ವಿರುದ್ಧ ಮಂಗಳೂರು ಪೊಲೀಸರು ಗಂಭೀರ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ವಿಚಾರಣೆ ವೇಳೆ ಹಲವು ಅಂಶಗಳು ಬೆಳಕಿಗೆ ಬರುವುದರ ಜೊತೆಗೆ, ಪೊಲೀಸರು ಈತನ ವಂಚನೆಯ ಮಾಯಾಜಾಲವನ್ನು ಭೇದಿಸುತ್ತಿದ್ದಾರೆ. ರೋಷನ್ ಸಲ್ಡಾನಾ ಭಾರತದ ವಿವಿಧ ರಾಜ್ಯಗಳ ಉದ್ಯಮಿಗಳನ್ನು ಲಕ್ಷಾಂತರ ರೂಪಾಯಿಗೆ ವಂಚಿಸಿದ್ದಾನೆ. ವಿಚಾರಣೆ ವೇಳೆ ಆತನ ಬಾಯಿಂದಲೇ ಸ್ಫೋಟಕ ಮಾಹಿತಿ ಹೊರಬಿದ್ದಿವೆ.
ವಂಚನೆಗೆ ಒಳಗಾದ ಉದ್ಯಮಿಗಳು
• ಮಹಾರಾಷ್ಟ್ರದ ಉದ್ಯಮಿಗೆ ₹5 ಕೋಟಿ ರೂಪಾಯಿ ವಂಚನೆ
• ಮತ್ತೊಬ್ಬ ಮಹಾರಾಷ್ಟ್ರದ ಉದ್ಯಮಿಗೆ ₹10 ಕೋಟಿ
• ಅಸ್ಸಾಂನ ಉದ್ಯಮಿಗೆ ₹20 ಲಕ್ಷ ರೂಪಾಯಿ ವಂಚನೆ
ಈ ವಂಚಿತ ಉದ್ಯಮಿಗಳು ಈಗ ಮಂಗಳೂರಿನ ಸಿಐಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ಮತ್ತಷ್ಟು ಗಂಭೀರತೆಯನ್ನು ಹೊಂದಿದೆ.
ಹಣ ಪ್ರೀಜ್ ಮಾಡಿಸಿದ ಪೊಲೀಸ್ ಇಲಾಖೆ
• ಮಹಾರಾಷ್ಟ್ರದ ಉದ್ಯಮಿಗೆ ಸಂಬಂಧಿಸಿದ ₹3.5 ಕೋಟಿ,
• ಅಸ್ಸಾಂನ ಉದ್ಯಮಿಗೆ ಸಂಬಂಧಿಸಿದ ₹20 ಲಕ್ಷ ಹಣವನ್ನು ಫ್ರೀಜ್ ಮಾಡಿಸಿದ್ದಾರೆ.
ಲಕ್ಸುರಿ ಜೀವನಶೈಲಿ – ವಜ್ರದ ಉಂಗುರ ವಶ
ವಂಚನೆದಿಂದ ಸಂಪಾದಿಸಿದ್ದ ಹಣವನ್ನು ಆರೋಪಿ ಬಡವರ ಹಿತಕ್ಕಾಗಿ ಬಳಸಿದ್ದೆ ಎನ್ನುವುದು ದೂರದ ಕನಸು. ತನಿಖೆಯಲ್ಲಿ ಬಂದ ಮಾಹಿತಿಯಂತೆ, ರೋಷನ್ ಸಲ್ಡಾನಾ ₹2.75 ಕೋಟಿಗಳ ಮೌಲ್ಯದ ವಜ್ರದ ಉಂಗುರ ಧರಿಸಿದ್ದ. ಮಂಗಳೂರು ಪೊಲೀಸರು ಈ ವಜ್ರದ ಉಂಗುರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ನವರಾತ್ರಿ ನಾಲ್ಕನೇ ದಿನದಲ್ಲಿ ಕೂಷ್ಮಾಂಡಾ ದೇವಿಯನ್ನು ಆರಾಧನೆ ಮಾಡುತ್ತಾರೆ.

ನವರಾತ್ರಿ ನಾಲ್ಕನೇ ದಿನದಲ್ಲಿ ಕೂಷ್ಮಾಂಡಾ ದೇವಿಯನ್ನು ಆರಾಧನೆ ಮಾಡುತ್ತಾರೆ. ದೇವಿಯ ಹಿನ್ನಲೆ ಕೂಷ್ಮಾಂಡಾ ದೇವಿಯೇ...

ಭೈರಪ್ಪ ಅವರದ್ದು ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ: ನಟ ಅನಂತನಾಗ್‌ ಭಾವುಕ

ಭೈರಪ್ಪ ಅವರದ್ದು ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ ಎಂದು ನಟ ಅನಂತನಾಗ್‌ ಭಾವುಕರಾದರು. ನವರಾತ್ರಿಯ...

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...