ಟಿಪ್ಪು ಹಿಂದೂಗಳ ರಕ್ತ ಹರಿಸಿದ ನೆಲದಿಂದಲೇ ರಾಹುಲ್ ಯಾತ್ರೆ ಶುರುವಾಗಿದೆ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ಗೆ ಇಂದಿನಿಂದ ರಾಹುಕಾಲ ಆರಂಭವಾಗಿದೆ ಎಂದು ಟೀಕಿಸಿದೆ. ಸುಲ್ತಾನ್ ಬತ್ತೇರಿಯಿಂದ ರಾಹುಲ್ ಗಾಂಧಿ ಯಾತ್ರೆ ಆರಂಭ ಹಿನ್ನೆಲೆಯಲ್ಲಿ ಟಿಪ್ಪು ನಡೆಸಿದ ಮಾರಣ ಹೋಮ ಕುರಿತು ವೀಡಿಯೋ ಸಹ ರಿಲೀಸ್ ಮಾಡಿದೆ. ಟಿಪ್ಪು ಮತಾಂಧತೆಗೆ ಹಿಂದೂಗಳ ರಕ್ತ ಹರಿಸಿರುವ ನೆಲ ಸುಲ್ತಾನ್ ಬತ್ತೇರಿ. ಇಲ್ಲಿಂದಲೇ ರಾಹುಲ್ ಯಾತ್ರೆ ರಾಜ್ಯಕ್ಕೆ ಪ್ರವೇಶ ಮಾಡುತ್ತಿರುವುದು. ಕಾಂಗ್ರೆಸ್ನ ಹಿಂದೂ ವಿರೋಧಿ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ. ದೇಶ ವಿಭಜಕ ಕಾಂಗ್ರೆಸ್, ದೇಶ ಒಡೆದ ಕುಟುಂಬದ ಕುಡಿ. ದೇಶ ಒಡೆದ ಮುತ್ತಜ್ಜನ ಪಾಪ ಕಳೆಯಲು ಮರಿಮೊಮೊಮ್ಮಗ ನಾಟಕದ ಯಾತ್ರೆ ನಡೆಸುತ್ತಿದ್ದಾರೆ. ಅಖಂಡ ಭಾರತ ಒಪ್ಪದ ಕಾಂಗ್ರೆಸಿಗರು ತುಕ್ಡೆ-ತುಕ್ಡೆ ಗ್ಯಾಂಗಿನ ಪೋಷಕರು, ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ಪ್ರಧಾನಿ ಹುದ್ದೆ ತಪ್ಪಿಸಿದ್ರು, ಅಧಿಕಾರಕ್ಕಾಗಿ ದೇಶ ವಿಭಜಸಿದ ನೆಹರು, ಕಾಶ್ಮೀರವನ್ನೇ ಪ್ರತ್ಯೇಕವಾಗಿಟ್ಟರು ಈಗ ಭಾರತ ಜೋಡೋ ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದೆ.