ಸುಮ್ನೆ ಬೌಲಿಂಗ್ ಮಾಡ್ತೀಯ? ಇಲ್ಲ , ಬೇರೆಯವರಿಗೆ ಬೌಲಿಂಗ್ ಕೊಡ್ಲಾ ಎಂದ ಧೋನಿ….!

Date:

ಹೇ, ಸುಮ್ನೆ ಬೌಲಿಂಗ್ ಮಾಡ್ತೀಯ? ಇಲ್ಲ, ಬೇರೆಯವರಿಗೆ ಬೌಲಿಂಗ್ ಕೊಡ್ಲಾ? ಹೀಗಂತ ಮಹೇಂದ್ರ ಸಿಂಗ್ ಧೋನಿ ಕುಲ್ದೀಪ್ ಯಾದವ್ ಮೇಲೆ ಗರಂ ಆಗಿರೋ ವೀಡಿಯೋ ತುಣುಕು ವೈರಲ್ ಆಗ್ತಿದೆ.

ಯುಎಇ ನಲ್ಲಿ ನಡೆಯುತ್ತಿರೋ ಏಷ್ಯಾಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ವೇಳೆ ನಡೆದ ಮಾತುಕತೆಯ ವೀಡಿಯೋ ಇದು.
ರೋಹಿತ್ ಶರ್ಮಾ ವಿಶ್ರಾಂತಿ ಬಯಸಿದ ಹಿನ್ನೆಲೆಯಲ್ಲಿ ಮಾಜಿ ನಾಯಕ ಧೋನಿ ಮತ್ತೆ ನಾಯಕನಾಗಿ ಕಣಕ್ಕಿಳಿದಿದ್ದರು.
ಕ್ಯಾಪ್ಟನ್ ಮಾಹಿ ಬೌಲರ್ ಕುಲ್ದೀಪ್ ಗಾಗಿ ಫೀಲ್ಡಿಂಗ್ ಸೆಟ್ ಮಾಡಿ ಬೌಲಿಂಗ್ ಮಾಡುವಂತೆ ಸೂಚಿಸಿದ್ರು. ಬೌಲಿಂಗ್ ಮಾಡಲು ಧೋನಿ ಸೂಚಿಸಿದಾಗ ಕುಲ್ದೀಪ್ ಫೀಲ್ಡಿಂಗ್ ಚೇಂಜ್ ಮಾಡಲು ಧೋನಿಗೆ ಹೇಳಿದ್ದಾರೆ. ಈ ವೇಳೆ ಧೋನಿ ಕುಲ್ದೀಪ್ ಗೆ ಬೌಲಿಂಗ್ ಮಾಡ್ತೀಯ? ಇಲ್ಲ ಬೌಲರ್ ಚೇಂಜ್ ಮಾಡ್ಲಾ ? ಎಂದಿದ್ದಾರೆ. ಕುಲ್ದೀಪ್ ಮರುಮಾತಾಡದೆ ಬೌಲಿಂಗ್ ಮಾಡಿದ್ದಾರೆ.


ಧೋನಿ ಕುಲ್ದೀಪ್ ವಿರುದ್ಧ ಗರಂ ಆಗ್ತಿರೋದು ಇದೇ ಮೊದಲೇನು ಅಲ್ಲ. ಇದು ಎರಡನೇ ಬಾರಿ.

2017ರ ಡಿಸೆಂಬರ್‌ರಲ್ಲಿ ಇಂಧೋರ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಲಂಕಾ ಲೀಲಾಜಾಲವಾಗಿ ರನ್ ಗಳಿಸುತ್ತಿತ್ತು. ಕುಲ್ದೀಪ್ ಯಾದವ್ ಬೌಲಿಂಗ್ ಮಾಡಲು ಬಂದಾಗ, ಧೋನಿ ಕವರ್ ಫೀಲ್ಡರ್ ತೆಗೆದು ಪಾಯಿಂಟ್‌ನಲ್ಲಿ ಫೀಲ್ಡರ್ ಹಾಕುವಂತೆ ಸೂಚಿಸಿದ್ದಾರೆ. ಆದರೆ , ಕುಲ್ದೀಪ್ ಪರವಾಗಿಲ್ಲ ಸದ್ಯ ಇರೋ ಹಾಗೇ ಇರಲಿ ಅಂತ ಹೇಳಿದ್ದಾರೆ. ಆ ವೇಳೆ ಧೋನಿ ನಾನು‌ 300 ಪಂದ್ಯ ಸುಮ್ನೆ ಆಡಿದ್ದೀನ? ನಂಗೆ ತಲೆಕೆಟ್ಟಿದ್ಯಾ? ಅಂತ ಸಿಟ್ಟಾಗಿದ್ದರು.‌

Share post:

Subscribe

spot_imgspot_img

Popular

More like this
Related

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ...

ಬೆಳಗ್ಗೆ ಹೀಗೆ ಮಾಡಿದರೆ ಲಕ್ಷ್ಮೀದೇವಿ ಕೃಪೆ ಸದಾ ನಿಮ್ಮ ಮನೆಯಲ್ಲೇ ಇರುತ್ತಾಳೆ!

ಬೆಳಗ್ಗೆ ಹೀಗೆ ಮಾಡಿದರೆ ಲಕ್ಷ್ಮೀದೇವಿ ಕೃಪೆ ಸದಾ ನಿಮ್ಮ ಮನೆಯಲ್ಲೇ ಇರುತ್ತಾಳೆ! ಬೆಳಗಿನ...

ದೆಹಲಿ ಕಾರು ಸ್ಫೋಟ ಪ್ರಕರಣ: ಲಖನೌ ಮೂಲದ ವೈದ್ಯೆ ಅರೆಸ್ಟ್.!‌

ದೆಹಲಿ ಕಾರು ಸ್ಫೋಟ ಪ್ರಕರಣ: ಲಖನೌ ಮೂಲದ ವೈದ್ಯೆ ಅರೆಸ್ಟ್.!‌ ನವದೆಹಲಿ: ಭಾರತದ...

ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು: ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ ಸೂಚನೆ: ಸಿಎಂ ಸಿದ್ದರಾಮಯ್ಯ

ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು: ತಪ್ಪಿದವರ ವಿರುದ್ಧ ವರದಿ ನೀಡಲು...