ತವರಿಗೆ ನೆರವಾದ ಕೊಡಗಿನ ಕುವರಿ ; ಹುಟ್ಟೂರಿನ ಕಷ್ಟಕ್ಕೆ ಕೈ ಜೋಡಿಸಿದ ನಟಿ

Date:

ವೀರ ಯೋಧರ ನಾಡು ಕೊಡಗು ವರುಣನ ರೌದ್ರಾವತಾರಕ್ಕೆ ಬೆಚ್ಚಿ ಬಿದ್ದಿದೆ. ಮಳೆಯ ಅವಾಂತರಕ್ಕೆ ಪರಿಗಣಿಸಲಾಗದಷ್ಟು ಸಾವು-ನೋವು ಅನಾಹುತಗಳಾಗಿವೆ.

ರಾಜ್ಯದ ಮೂಲೆ ಮೂಲೆಗಳಿಂದ ಸಹಾಯದ ಮಹಾಪೂರ ಕೊಡಗಿಗೆ ಹರಿದು ಬರುತ್ತಿದೆ. ಜನಸಾಮಾನ್ಯರು ಕೊಡಗಿನ ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ‌. ಕನ್ನಡ ಮಾಧ್ಯಮಗಳು, ಸಂಘ ಸಂಸ್ಥೆಗಳು, ವಿವಿಧ ತಂಡಗಳ ಕರೆಗೆ ಜನರು ನಿರೀಕ್ಷೆಗೂ ಮೀರಿ ಸ್ಪಂದಿಸುತ್ತಿದ್ದಾರೆ. ಸ್ವಯಂ ಪ್ರೇರಿತರಾಗಿ ಕೊಡಗಿಗೆ ಕೈ ಜೋಡಿಸಿದ್ದಾರೆ.


ಈ ನಡುವೆ ಕನ್ನಡದ ನಟಿ ದಿಶಾಪೂವಯ್ಯ ಅವರು ಸಹ ತನ್ನ ತವರಿನ ನೆರವಿಗೆ ಧಾವಿಸಿದ್ದಾರೆ.
ಇವರ ಕುಟುಂಬ ಸಹ ಸಂಕಷ್ಟಕ್ಕೆ ಸಿಲುಕಿತ್ತು.
ದಿಶಾ ಅವರು ಕೊಡಗಿಗೆ ನೆರವಾಗುವಂತೆ ಕೋರಿದ್ದರು. ದಿಶಾ ಅವರ ಮನವಿಗೆ ಭಾರಿ ಸ್ಪಂದನೆ ಸಿಕ್ಕಿದ್ದು, ಎರಡು ಟ್ರಕ್ ಗಳಲ್ಲಿ ಅಗತ್ಯ ಸಾಮಾಗ್ರಿಗಳನ್ನು ತುಂಬಿಸಿಕೊಂಡು ಈಗಾಗಲೇ ಕೊಡಗಿಗೆ ಹೋಗಿದ್ದಾರೆ. ಎರಡು ತಂಡಗಳೊಂದಿಗೆ ದಿಶಾ ತವರು ತಲುಪಿದ್ದಾರೆ.
ದಿಶಾ ಅವರ ಕುಟುಂಬ ಮಡಿಕೇರಿಯ ಮುಕ್ಕೂಡ್ಲುವಿನಲ್ಲಿದೆ.

Share post:

Subscribe

spot_imgspot_img

Popular

More like this
Related

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಳ್ಳತನ...

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...