ಕೇರಳದ ಐತಿಹಾಸಿಕ ಪ್ರಸಿದ್ಧಿ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅಸ್ತು ಎಂದಿದೆ. ಅಯ್ಯಪ್ಪನ ದರ್ಶನಕ್ಕೆ ಮಹಿಳೆಯರಿಗೆ ವಿಧಿಸಿದ್ದ ತಡೆಯನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದೆ.
ಆದರೆ, ನಮ್ಕ ಕರ್ನಾಟಕದಲ್ಲೊಂದು ದೇವಾಲಯವಿದೆ. ಈ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ!
ಇಲ್ಲಿ ಮಹಿಳೆಯರಿಗೆ ಅವಕಾಶವೇ ಇಲ್ಲ ಎಂದು ಬೋರ್ಡ್ ಹಾಕಲಾಗಿದೆ. ಅಷ್ಟೇ ಅಲ್ಲದೆ ಲಿಂಗಾಯತರನ್ನು ಹೊರತುಪಡಿಸಿ ಬೇರೆ ಸಮುದಾಯದವರು ಈ ದೇವಸ್ಥಾನಕ್ಕೆ ಬರುವಂತಿಲ್ಲ.
ಈ ದೇವಾಲಯ ಇರವುದು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ. ಇಲ್ಲಿನ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರು ಹೋಗುವಂತಿಲ್ಲ. ಮಹಿಳೆಯರು ಬರುವಂತಿಲ್ಲ ಅಂತ ಬೋರ್ಡನ್ನು ಹಾಕಲಾಗಿದೆ . ಲಿಂಗಾಯತರನ್ನು ಬಿಟ್ಟು ಬೇರೆಯವರು ದೇವಸ್ಥಾನದ ಬಳಿ ಸುಳಿಯಲ್ಲ ಎನ್ನಲಾಗಿದೆ.