ಹಾಸನದಲ್ಲಿ ಮುಂದುವರೆದ ಹಾರ್ಟ್ ಅಟ್ಯಾಕ್ ಪ್ರಕರಣಗಳು: ಹೃದಯಾಘಾತಕ್ಕೆ ಬಲಿಯಾದ ಬಾಣಂತಿ!

tnit editors
1 Min Read

ಹಾಸನದಲ್ಲಿ ಮುಂದುವರೆದ ಹಾರ್ಟ್ ಅಟ್ಯಾಕ್ ಪ್ರಕರಣಗಳು: ಹೃದಯಾಘಾತಕ್ಕೆ ಬಲಿಯಾದ ಬಾಣಂತಿ!

ಹಾಸನ: ಹಾಸನ ಜಿಲ್ಲೆ ಹಾರ್ಟ್ ಅಟ್ಯಾಕ್ ಕೇಸ್ಗಳ ಹಾಟ್ಸ್ಪಾಟ್ ಆಗಿ ಬದಲಾಗಿದೆ. ಹಾಸನ ಜಿಲ್ಲೆ ಒಂದರಲ್ಲೇ ಕಳೆದ 40 ದಿನಗಳಲ್ಲಿ ಸಾಕಷ್ಟು ಕೇಸ್ ಗಳು ದಾಖಲಾಗುತ್ತಿವೆ. ಇದೀಗ ಹೃದಯಾಘಾತಕ್ಕೆ ಬಾಣಂತಿ ಬಲಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಆಯನೂರಿನಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಕೊಮ್ಮೆನಹಳ್ಳಿಯವರಾದ ಹರ್ಷಿತಾ ಹೆಚ್. (22) ಮೃತ ದುರ್ಧೈವಿಯಾಗಿದ್ದು, ಬಾಣಂತನಕ್ಕಾಗಿ ಶಿವಮೊಗ್ಗ ಜಿಲ್ಲೆಯ ಆಯನೂರಿನ ತವರು ಮನೆಯಲ್ಲಿ ತಂಗಿದ್ದರು. ತಡರಾತ್ರಿ, ಹರ್ಷಿತಾ ಅವರಿಗೆ ಎದೆನೋವು ಕಾಣಿಸಿಕೊಂಡಿತು. ಆತಂಕಗೊಂಡ ಅವರು, ತಕ್ಷಣ ತಮ್ಮ ಗಂಡನನ್ನು ಹಾಸನದಿಂದ ಕರೆಸಿಕೊಂಡಿದ್ದರು.
ಆದರೆ, ಎದೆನೋವಿನ ತೀವ್ರತೆ ಕಡಿಮೆಯಾಗದ ಕಾರಣ, ಬೆಳಗ್ಗೆ ಅವರನ್ನು ಆಯನೂರು ಆಸ್ಪತ್ರೆಗೆ ಕರೆದೊಯ್ಯಲು ಅಂಬ್ಯುಲೆನ್ಸ್ನಲ್ಲಿ ವ್ಯವಸ್ಥೆ ಮಾಡಲಾಯಿತು. ದುರದೃಷ್ಟವಶಾತ್, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆಯೇ ಹರ್ಷಿತಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

Share This Article