ಜೆ.ಎನ್.ಯು ವಿವಿಯಲ್ಲಿ ಅಫ್ಜಲ್ ಪರ ಕಾರ್ಯಕ್ರಮ..! ದೇಶದ ಭವಿಷ್ಯವನ್ನು ನೆನೆದರೇ ಕಳವಳವಾಗುತ್ತೆ..!

admin
1 Min Read

ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಸಂಸತ್ ಮೇಲೆ ದಾಳಿ ನಡೆಸಿದ್ದ ಉಗ್ರ ಅಫ್ಜಲ್ ಗುರುವಿಗೆ ಸಂಬಂಧಿಸಿದಂತೆ ಎರಡು ವಿದ್ಯಾರ್ಥಿ ಸಂಘಟನೆಗಳ ನಡುವೆ ಗಲಾಟೆ ನಡೆದಿದೆ..!
ಸಂಸತ್ ದಾಳಿಗೆ ಸಂಬಂಧಿಸಿದಂತೆ 2013ರಲ್ಲಿ ತಿಯಾರ್ ಜೈಲಿನಲ್ಲಿ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಗಲ್ಲಿಗೇರಿಸಲಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದರೆ ಇದೇ ವಿಷಯಕ್ಕೆ ಎರಡು ಸಂಘಟನೆಗಳು ಗಲಾಟೆ ಮಾಡಿಕೊಂಡಿವೆ..! ಸಂಸತ್ ದಾಳಿಯ ಅಪರಾಧಿ ಅಫ್ಜಲ್ ನನ್ನು ಗಲ್ಲಿಗೇರಿಸಿದ್ದು ನ್ಯಾಯದ ಕೊಲೆ ಎಂದು ಆರೋಪಿಸಿ ವಿದ್ಯಾಥರ್ಿಗಳ ಗುಂಪೊಂದು ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಜೊತೆಗೆ ಪಾತಕಿ ಅಫ್ಜಲ್ ಪರ ಹಾಗೂ ಭಾರತದ ವಿರುದ್ಧ ಘೋಷಣೆ ಕೂಗಿತ್ತು..! ಇದನ್ನು ಎಬಿವಿಪಿ ಆಕ್ಷೇಪಿಸಿದರೂ ನಾವು ಕಾರ್ಯಕ್ರಮ ನಡೆಸುತ್ತೇವೆಂದು ಕಾರ್ಯಕ್ರಮ ನಡೆಸಲು ಹೋದ ವಿದ್ಯಾರ್ಥಿಗಳ ಗುಂಪು ಮೊಂಡು ಹಠ ಮಾಡಿತ್ತು..! ಅದಕ್ಕಾಗಿಯೇ ಜಗಳ ಆಗಿದೆ ಎಂದು ತಿಳಿದು ಬಂದಿದೆ..!
ಸುದ್ದಿ ಏನೇ ಇರಲಿ, ಆದರೆ ನಮ್ಮ ದೇಶದಲ್ಲಿ ದೇಶಕ್ಕೆ ಕಂಠಕರಾಗಿರುವ ಉಗ್ರರ ಪರ ವಿದ್ಯಾರ್ಥಿ ಶಕ್ತಿಯೊಂದು, ಯಾರದ್ದೋ ಕುಮ್ಮಕ್ಕಿನಿಂದ ಹೀಗೆಲ್ಲಾ ಮಾಡುತ್ತದೆ ಎಂಥಾದರೆ..? ದೇಶದ ಭವಿಷ್ಯವನ್ನು ನೆನೆದರೇ ಕಳವಳವಾಗುತ್ತೆ..!

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video

ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!

20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?

Share This Article
Leave a Comment