ನಾವು ದೂರದ ಬೆಟ್ಟದ ಬಗ್ಗೆ ಹೆಚ್ಚಿನ ಆಸಕ್ತಿ ಇಟ್ಟುಕೊಂಡಿರುತ್ತೇವೆ. ಹಿತ್ತಲ ಗಿಡ ಮದ್ದಲ್ಲ ಅಂತ ನಮಗೇ ನಾವೇ ನಿರ್ಧರಿಸಿಬಿಟ್ಟಿದ್ದೇವೆ. ಈ ಜನ್ಮದಲ್ಲಿ ನಮ್ಮ ದೇಶ ಉದ್ದಾರ ಆಗಲ್ಲ ಅಂತ ಸಿಗರೇಟ್ ಹೊಡ್ಕೊಂಡು ನಿಡುಸುಯ್ದುಬಿಡ್ತೇವೆ. ಆದರೆ ನಮ್ಮ ದೇಶಕ್ಕಿರೋ ಇತಿಹಾಸದ ಎಳ್ಳಷ್ಟು ಮಾಹಿತಿ ನಮಗಿಲ್ಲ. ಅಷ್ಟಿದಿದ್ದರೇ ಪ್ರತಿ ಸೆಕೆಂಡೂ ನಾವು ಭಾರತೀಯರು, ನಾವು ಯಾರ್ಗೂ ಕಮ್ಮಿ ಇಲ್ಲ ಅಂತ ಎದೆ ತಟ್ಟಿ ಹೇಳುತ್ತಿದ್ವಿ. ಅದೊಂದು ಕಾಲವಿತ್ತು. ನಮ್ಮ ದೇಶವನ್ನು ಹಾವಾಡಿಗರ ದೇಶ ಎಂದು ಕರೆಯಲಾಗುತ್ತಿದ್ದ ಕಾಲಘಟ್ಟವದು. ಆದರೆ ಅದ್ಯಾಕೆ ನಮ್ಮ ದೇಶದ ಜನರನ್ನು ಹಾಗೆ ಕರೆದರು ಅನ್ನೋದಕ್ಕೆ ಈಗಲೂ ಉತ್ತರವಿಲ್ಲ. ಅಂದರೆ ಪಾಶ್ಚಿಮಾತ್ಯರ ಲೆಕ್ಕದಲ್ಲಿ ನಾವು ದಡ್ಡರು. ಅವರ ಕೈ ಕೆಳಗೆ ದುಡಿಯಲು ಲಾಯಕ್ಕಾದವರು ಅಂಥ ಭಾವಿಸಿದ್ದರೋ ಏನೋ..? ಆದರೆ ನಾವೆಂಥ ಸಾಧಕರು ಗೊತ್ತಾ..?
ಜಗತ್ತಿಗೆ ಪವರ್ ಎಂದೇ ಪರಮಾಣುವನ್ನು ಕರೆಯಲಾಗುತ್ತದೆ. ಪರಮಾಣುವಿನ ಶಕ್ತಿ ಇರೋ ದೇಶದ ಉಸಾಬರಿಗೆ ಯಾರೂ ಹೋಗೋದಿಲ್ಲ. ಅಲ್ಲದೇ ಸೃಷ್ಟಿಯ ಹಿಂದೆಯೂ ಅಣುವಿದೆ ಎಂದು ಪ್ರತಿಪಾದಿಸಿದ್ದು ಬ್ರಿಟನ್ ನ ವಿಜ್ಞಾನಿ ಜಾನ್ ಡಾಲ್ಟನ್. ಜಾನ್ ಡಾಲ್ಟನ್ ಪ್ರತಿಪಾದಿಸಿದ ಅಣು ಸಿದ್ಧಾಂತ ನಿಜಕ್ಕೂ ಜಗತ್ತನ್ನು ಚಕಿತಗೊಳಿಸಿತ್ತು. ಉಪಯೋಗವೂ ಆಯ್ತು. ಇವತ್ತಿಗೂ ಜಗತ್ತು ಆ ಸಿದ್ಧಾಂತವನ್ನೇ ಅವಲಂಭಿಸಿದೆ. ಆದರೆ ಈ ಅಣುವಿನ ಬಗ್ಗೆ ಎರಡನೇ ಶತಮಾನದಲ್ಲಿ ಭಾರತದ ಮಹರ್ಷಿ ಒಬ್ಬರು ತಮ್ಮ ಗ್ರಂಥದಲ್ಲಿ ವಿವರಿಸಿದ್ದರು ಎಂಬ ಸತ್ಯ ಬಹುತೇಕರಿಗೆ ಗೊತ್ತಿಲ್ಲ.
ಹತ್ತೊಂಬತ್ತನೇ ಶತಮಾನದಲ್ಲಿ ಜಾನ್ ಡಾಲ್ಟನ್ ಪ್ರತಿಪಾದಿಸಿದ ಅಣು ಸಿದ್ಧಾಂತಕ್ಕೂ ಮೊದಲೇ ಅಂದರೇ ಎರಡನೇ ಶತಮಾನದಲ್ಲಿ ಅಣುವಿನ ಬಗ್ಗೆ ತಮ್ಮ ದರ್ಶನ್ ಗ್ರಂಥದಲ್ಲಿ ಮಹರ್ಷಿ ಕಣಾದ ವಿವರಣೆ ನೀಡಿದ್ದರು. ಜಗತ್ತಿನ ಸೃಷ್ಟಿಯ ಹಿಂದೆ ಅಣುವಿದೆ ಅಂತ ಅವರು ಸಾವಿರದ ಎಂಟುನೂರು ವರ್ಷಗಳ ಹಿಂದೆಯೇ ಹೇಳಿದ್ದರು. ಅವರು ಹಾಕಿದ ಫೌಂಡೇಷನ್ ನ ಪೂರ್ಣ ಪ್ರಮಾಣದಲ್ಲಿ ನಮ್ಮವರು ಎನ್ ಕ್ಯಾಶ್ ಮಾಡಿಕೊಳ್ಳಲಿಲ್ಲ ಅಷ್ಟೇ..!
- ರಾ ಚಿಂತನ್
POPULAR STORIES :
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ,
ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!
ಸ್ನಾನ ಮಾಡುತ್ತಿದ್ದವಳ ವಿಡಿಯೋ ಚಿತ್ರೀಕರಣ ಮಾಡಿದ..! ಕತ್ರೀನಾ ಕೈಫ್ ಸಿಟ್ಟಾಗಿದ್ದೇ ಒದ್ದುಬಿಟ್ಟಳು..!?
ನಿದ್ದೆಗೆಟ್ಟರೇ ಸಾಯೋದು ಗ್ಯಾರಂಟಿ..!! ನಿದ್ದೆ ಬರ್ತಿಲ್ಲಾ.. ಯಾಕೋ ನಿದ್ದೆ ಬರ್ತಿಲ್ಲಾ..!!
ಐಪಿಎಲ್ ನಲ್ಲಿ ತುಂಡುಡುಗೆ ತೊಟ್ಟು ಕುಣಿಯೋ ಚಿಯರ್ ಗರ್ಲ್ಸ್ ಸ್ಯಾಲರಿ ಎಷ್ಟು ಗೊತ್ತಾ..?
ಅವಳ `ಆತ್ಮ’ ಅತೃಪ್ತಿಯಿಂದ ನರಳುತ್ತಿದೆ..! ಭಾರತ ಚಿತ್ರರಂಗ ಕಂಡ ಅಪ್ಪಟ `ಸೌಂದರ್ಯ’
ಮೂರರ ಪೋರನ ಸಿಟ್ಟಿಗೆ ಪೊಲೀಸರೇ ಕಂಗಾಲು..! ಅಬ್ಬಾ..!! ಮಕ್ಕಳು ಹೀಗೂ ಇರ್ತಾರಾ..!?
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ