ಕೊರಗಜ್ಜನಿಗೆ ಬೈದ ಯುವಕನ ಕುಟುಂಬಕ್ಕೆ ಏನಾಯ್ತು..? ಅಷ್ಟಕ್ಕೂ ಈ ಕೊರಗಜ್ಜ ಯಾರು ಗೊತ್ತಾ…?

Date:

ಯಾರ್ ಏನೇ ಹೇಳಲಿ, ನಮ್ಮನ್ನೆಲ್ಲಾ ನಿಯಂತ್ರಿಸೋ ಒಂದು ಅಗೋಚರ ಶಕ್ತಿ ಇದ್ದೇ ಇದೆ..! ದೇವರು, ದೈವವನ್ನೆಲ್ಲಾ ನಂಬಲ್ಲ ಅಂದವರೂ ಕೂಡ ಒಮ್ಮೆ ಕೈ ಮುಗಿಯ ಬೇಕಾದ ಪ್ರಸಂಗ ಬರುತ್ತೆ…!
ಈಗ ಇದನ್ನು ಹೇಳೋಕೆ ಕಾರಣ, ದೈವಕ್ಕೆ ಬೈದು ಕಾಮೆಂಟ್ ಹಾಕಿದ್ದ ಯುವಕ ಅದೇ ದೈವಕ್ಕೆ ಬಂದು ಕೈ ಮುಗಿದು ಕ್ಷಮೆ ಕೇಳಿದ ಘಟನೆ ನಡೆದಿರೋದು.


ಹೌದು, ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಗೆ ಬೈದ ಯುವಕ ಈಗ ಕ್ಷಮೆ ಕೇಳಿದ್ದಾನೆ..! ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೈವ ಕೊರಗಜ್ಜ ಎಂಬ ನಂಬಿಕೆ ಇದೆ. ಮಂಗಳೂರಿನ ಪದವಿನಂಗಡಿಯ ಬಂಗೇರರು ಆರಾಧಿಸೋ ದೈವ ಕೊರಗಜ್ಜ. ಈ ದೈವದ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಹಾಕಿದ್ದ ಶಿರಸಿಯ ಮನೋನ್ ಪಂಡಿತ್ ಈಗ ಕ್ಷಮೆ ಯಾಚಿಸಿದಾತ.


ಈತ ಏಂಜೆಲ್ ನಯನಾ ಪ್ರಜ್ವಲ್ ಎಂಬ ಎಫ್‍ಬಿ ಅಕೌಂಟ್‍ನಲ್ಲಿ ಕೊರಗಜ್ಜ ನನ್ ಎಕ್ಕಡ ಎಂದು ಕೆಟ್ಟದಾಗಿ ಹೇಳಿದ್ದ. ಇದನ್ನು ಅನೇಕರು ವಿರೋಧಿಸಿದ್ದರು. ಮಂಗಳೂರಿನ ಹಿತರಕ್ಷಣಾ ಸಮಿತಿ ಅವರು ಬಂದರು ಠಾಣೆಯಲ್ಲಿ ಈತನ ವಿರುದ್ಧ ದೂರು ನೀಡಿದ್ದರು. ಆದರೂ ಈತ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಕೊರಗಜ್ಜ ಸುಮ್ಮನೆ ಬಿಡಲಿಲ್ಲ..! ಈತನ ಮನೆಯವರೆಲ್ಲಾ ಅನಾರೋಗ್ಯಕ್ಕೆ ತುತ್ತಾದಾಗ ಈತ ಎಚ್ಚೆತ್ತುಕೊಂಡು ಹಿಂದೂ ಸಂಘಟನೆಯವರನ್ನು ಸಂಪರ್ಕಿಸಿ ಮಂಗಳೂರಿಗೆ ಆಗಮಿಸಿ ಕೊರಗಜ್ಜನಿಗೆ ಕ್ಷಮೆ ಯಾಚಿಸಿ ಹೋಗಿದ್ದಾನೆ…!

Share post:

Subscribe

spot_imgspot_img

Popular

More like this
Related

ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ ರಿಲೀಸ್ ಯಾವ ನ್ಯೂಸ್ ಚಾನೆಲ್ ನಂ1 !

ಕಳೆದ ವಾರದ ಕನ್ನಡ ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ...

ಏರ್‌ಪೋರ್ಟ್‌ನಲ್ಲಿ ದಕ್ಷಿಣ ಕೊರಿಯಾ ಮಹಿಳೆಗೆ ಲೈಂಗಿಕ ಕಿರುಕುಳ: ಅಧಿಕಾರಿಯ ಬಂಧನ

ಏರ್‌ಪೋರ್ಟ್‌ನಲ್ಲಿ ದಕ್ಷಿಣ ಕೊರಿಯಾ ಮಹಿಳೆಗೆ ಲೈಂಗಿಕ ಕಿರುಕುಳ: ಅಧಿಕಾರಿಯ ಬಂಧನ ದೇವನಹಳ್ಳಿಬೆಂಗಳೂರು: ಕೆಂಪೇಗೌಡ...

ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಅಕೌಂಟ್‌ಗಳು: ಸೈಬರ್ ಕ್ರೈಂ ತನಿಖೆ

ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಅಕೌಂಟ್‌ಗಳು: ಸೈಬರ್...

ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್: ಮಹಿಳೆ ಬಂಧನ, ಸಿಸಿಬಿ ಕಾರ್ಯಾಚರಣೆ

ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್: ಮಹಿಳೆ ಬಂಧನ, ಸಿಸಿಬಿ ಕಾರ್ಯಾಚರಣೆ ಬೆಂಗಳೂರು:ರಾಜ್ಯದ...