ಬಾರ್ ಸಪ್ಲೇಯರ್ ಮಹೇಶ್ ಕುಟುಂಬಕ್ಕೆ ಬೇಕಿದೆ ನೆರವು

Date:

ಬೆಂಗಳೂರಿನ ಕೆ.ಆರ್ ಮಾರ್ಕೆಟ್‍ನ ಬಾರ್ ವೊಂದರಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಐವರು ಸಾವನ್ನಪ್ಪಿರೋ ದಾರುಣ ಘಟನೆಯ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ.
ಕೈಲಾಶ್ ಬಾರ್‍ನಲ್ಲಿ ಬೆಳಗ್ಗೆ 2.30ರ ಸುಮಾರಿಗೆ ಸಂಭವಿಸಿದ ಅವಘಡದಲ್ಲಿ ಮಂಜುನಾಥ್, ಕೀರ್ತಿ, ಮಹೇಶ್, ಸ್ವಾಮಿ ಹಾಗೂ ಪ್ರಸಾದ್ ದುರ್ಮರಣವನ್ನಪ್ಪಿದ್ದಾರೆ.  ಕೆಲಸ ಮಾಡಿ ಮಲಗಿದ್ದ ಇವರು ಮಲಗಿದಲ್ಲೇ ಸುಟ್ಟು ಹೋಗಿದ್ದಾರೆ.


ಬಾರ್ ನಲ್ಲಿ ಕೆಲಸ ಮಾಡ್ತಿದ್ದ ಈ ಐವರ ಕುಟುಂಬಕ್ಕೂ ನೆರವಿನ ಅಗತ್ಯವಿದೆ. ಅದರಲ್ಲೂ ಮಹೇಶ್ ಕುಟುಂಬವಂತೂ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ದಾರಿ ತೋಚದೆ ಕಂಗಾಲಾಗಿದೆ.
ಮಹೇಶ್ ಕಳೆದ 6 ವರ್ಷದಿಂದ ಬಾರ್ ನಲ್ಲಿ ಕೆಲಸ ಮಾಡ್ತಿದ್ದ. ತಂದೆ ಮಾಲಿಂಗ ಗೌಡ ಅವರು ನಿಧನರಾಗಿದ್ದು, ತಾಯಿ ಪದ್ಮಮ್ಮ ಕೂಲಿ ಮಾಡಿ ಬದುಕು ಸವೆಸುತ್ತಿದ್ದಾರೆ. ತಮ್ಮ ಗಣೇಶ್ ದುಡಿಮೆಯೂ ಹೇಳಿಕೊಳ್ಳುವಷ್ಟೇನೂ ಇಲ್ಲ.
ಕೆಲಸ ನಿಮಿತ್ತ ಊರಿಗೆ ಹೋಗಿದ್ದ ಮಹೇಶ್ ಎರಡು ದಿನದ ಹಿಂದಷ್ಟೇ ಬಾರ್ ಕೆಲಸಕ್ಕೆ ವಾಪಸ್ಸಾಗಿದ್ದರು. ಸ್ವಲ್ಪ ಹಣವನ್ನು ಹೊಂದಿಸಿಕೊಂಡು ಮನೆಗೆ ಹೋಗಲೆಂದು ಬಂದಿದ್ದ ಮಹೇಶ್ ಇನ್ನಿಲ್ಲ ಎಂಬ ಸುದ್ದಿ ಕೇಳುತ್ತಿದ್ದಂತೆ ತಾಯಿಯ ಆಕ್ರಂಧನ ಮುಗಿಲು ಮುಟ್ಟಿದೆ. ಸಂಬಂಧಿಕರೊಬ್ಬರು ಇವರ ಕುಟುಂಬದ ಕುರುಣಾಜನರ ಸ್ಥಿತಿಯನ್ನು ವಿವರಿಸಿ ಆರ್ಥಿಕ ನೆರವನ್ನು ಕೋರಿದ್ದಾರೆ.
ಇಲ್ಲಿ ಮಹೇಶ್ ಅವರ ತಾಯಿ ಪದ್ಮಮ್ಮ ಅವರ ಬ್ಯಾಂಕ್ ಖಾತೆ ವಿವರ ಇದ್ದು, ಸಹಾಯ ಮಾಡಲಿಚ್ಚಿಸುವವರು ಸಹಾಯ ಮಾಡಬಹುದು.

Padmamma

Ac/no : 0824119001190

IFSC : CNRB0000824

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...