CIB ನಿವೃತ್ತ ಅಧಿಕಾರಿ R.N.ಕುಲಕರ್ಣಿ ಕೊಲೆ ಪ್ರಕರಣ ಏನಾಯ್ತು ?

Date:

ಮೈಸೂರಿನಲ್ಲಿ CIB ನಿವೃತ್ತ ಅಧಿಕಾರಿ R.N.ಕುಲಕರ್ಣಿ ಸಾವು ಪ್ರಕರಣ ಸಂಬಂಧ ಇದು ಉದ್ದೇಶಪೂರ್ವಕವಾಗಿ ಅಪಘಾತ ಮಾಡಿರುವ ಪ್ರಕರಣವಾಗಿದೆ ಎಂದು ಜಯಲಕ್ಷ್ಮೀಪುರಂ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ . ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದೇವೆ ಎಂದು ಮೈಸೂರಲ್ಲಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ .  ಕುಲಕರ್ಣಿ ಸಾವಿನ ಬಗ್ಗೆ ಅನೇಕ ಆಯಾಮಗಳಲ್ಲಿ ವಿಶ್ಲೇಷಣೆ ಮಾಡಲಾಗ್ತಿತ್ತು . ಘಟನೆ ನಡೆದ ಬಳಿಕ ಕುಲಕರ್ಣಿಯವರ ಅಳಿಯ ದೂರು ನೀಡಿದ್ದಾರೆ . ದೂರಿನಲ್ಲಿ ಪಕ್ಕದ ಮನೆ ನಿವಾಸಿ ಮಾದಪ್ಪ ಮೇಲೆ ಸಂಶಯ ವ್ಯಕ್ತಪಡಿಸಿದ್ರು . ವಿಚಾರಣೆ ವೇಳೆ ನಿವೇಶನ ವ್ಯಾಜ್ಯ ಸಲುವಾಗಿ ಕೊಲೆ ನಡೆದಿರುವುದು ಬೆಳಕಿಗೆ ಬಂದಿತ್ತು .


ಮಾದಪ್ಪನ ಹಿರಿಯ ಮಗ, ಆತನ ಸ್ನೇಹಿತನಿಂದ ಕುಲಕರ್ಣಿಯವರ ಕೊಲೆ ನಡೆದಿದೆ . ನಿವೇಶನ ವ್ಯಾಜ್ಯದಿಂದ ಪದೇ ಪದೇ ತೊಂದರೆಯಾಗುತ್ತಿದ್ದ ಹಿನ್ನೆಲೆ ಹತ್ಯೆ ಕೊಲೆ ಪ್ರಕರಣ ಸಂಬಂಧ ಒಬ್ಬ ವ್ಯಕ್ತಿಯನ್ನು ಬಂಧನ ಮಾಡಲಾಗಿದೆ . ಕೃತ್ಯವೆಸಗುವ ಮುನ್ನ ಕುಲಕರ್ಣಿ ಅವರ ಚಲನವನಗಳನ್ನ ಗಮನಿಸಿದ್ದಾರೆ .
ಕೊಲೆ ಆರೋಪಿ ಮನು MBA ಪದವೀಧರ, ಮತ್ತೊಬ್ಬ MCA ಪದವೀಧರ . ಆದಷ್ಟು ಬೇಗ ಈ ಕೃತ್ಯಕ್ಕೆ ಸಹಾಯ ಮಾಡಿದ್ದವರನ್ನೂ ಬಂಧಿಸಲಾಗುತ್ತೆ ಎಂದು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಹೇಳಿಕೆ ನೀಡಿದ್ದಾರೆ .

Share post:

Subscribe

spot_imgspot_img

Popular

More like this
Related

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...

ಮಹಿಳೆಯರೇ, ರೋಸ್‌ ವಾಟರ್‌ ಬಳಕೆಯ ಮೊದಲು ಈ ವಿಷಯ ತಿಳಿದಿರಲಿ

ಮಹಿಳೆಯರೇ, ರೋಸ್‌ ವಾಟರ್‌ ಬಳಕೆಯ ಮೊದಲು ಈ ವಿಷಯ ತಿಳಿದಿರಲಿ ಸೌಂದರ್ಯಕ್ಕೆ ರೋಸ್‌...

ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ ವಿಮಾನ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಷ

ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ ವಿಮಾನ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಷ ನವದೆಹಲಿ: ಇತ್ತೀಚಿನ ದಿನಗಳಲ್ಲಿ...