ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಪರಶುರಾಮ್ ವಾಗ್ಮೋರೆ ಎಸ್ ಐಟಿ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.ಜೊತೆಗೆ ತನ್ನ ಹಿರಿಯರು ಹೇಳಿದ್ದಕ್ಕೆ ಗೌರಿ ಲಂಕೇಶ್ ಅವರನ್ನು ಕೊಂದಿರುವುದಾಗಿ ತಿಳಿಸಿದ್ದಾನೆ.
ತನ್ನ ತಲೆಯಲ್ಲಿ ಧರ್ಮ ಎನ್ನೋ ವಿಚಾರ ಮಾತ್ರ ಇತ್ತು. ಗೌರಿ ಲಂಕೇಶ್ ಅವರನ್ನು ಕೊಂದ್ರೆ ಧರ್ಮ ಉಳಿಯುತ್ತೆ ಎಂದು ಹಿರಿಯರು ಹೇಳಿದ್ದರು. ಗೌರಿ ಲಂಕೇಶ್ ಬಗ್ಗೆ ಹಿರಿಯರು ಹೇಳುವಾಗ ಆಕೆ ಧರ್ಮ ವಿರೋಧಿ ಎಂದು ನನ್ನ ರಕ್ತ ಕುದಿಯುತ್ತಿತ್ತು , ಅದಕ್ಕೆ ಆಕೆಯನ್ನು ಕೊಂದೆ ಎಂದು ವಾಗ್ಮೋರೆ ಹೇಳಿದ್ದಾನೆ.
ನಾನು ಗೌರಿ ಮುಖವನ್ನು ನೋಡಿರಲೇ ಇಲ್ಲ. ಕೊಲೆ ಮಾಡೋದಕ್ಕೆ ನಾಲ್ಕು ದಿನ ಇರುವಾಗ ಯೂಟ್ಯೂಬ್ ನಲ್ಲಿ ಆಕೆಯನ್ನು ನೋಡಿ , ತಿಳಿದುಕೊಂಡೆ. ಆಕೆ ಹಿಂದೂ ವಿರೋಧಿ ಎಂದು ಗೊತ್ತಾಯ್ತು. ಅದಕ್ಕೆ ಕೊಂದೆ. ಹತೈಗೈದ ಮೇಲೆ ನನ್ನಿಂದ ಧರ್ಮ ಉಳಿಯಿತು, ಧರ್ಮಕ್ಕೆ ನಾನು ಅಳಿಲು ಸೇವೆ ಮಾಡ್ದೆ ಎಂದು ಹೆಮ್ಮೆ ಅನಿಸಿತ್ತು ಈಗ ಪಶ್ಚಾತ್ತಾಪವಾಗ್ತಿದೆ.ನನ್ನ ತಂದೆ , ತಾಯಿ ಏನ್ ಮಾಡ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿದ್ದಾನೆ.