ಎಲ್ಲಿ ನೋಡಿದ್ರೂ ‘ಯುವರತ್ನ’ನದ್ದೇ ಮಾತು – ಇದು ರೀ ಪವರ್ ಸ್ಟಾರ್ ಖದರ್!

Date:

ಎಲ್ಲಿ ನೋಡಿದ್ರೂ ‘ಯುವರತ್ನ’ನದ್ದೇ ಮಾತು – ಇದು ರೀ ಪವರ್ ಸ್ಟಾರ್ ಖದರ್!

ಕೊರೋನಾ ನಂತರ ಇದೀಗ ಎಲ್ಲಾ ಕ್ಷೇತ್ರಗಳು ಚೇತರಿಸಿಕೊಳ್ಳುತ್ತಿವೆ. ಸಿನಿ ಹಬ್ಬಕೂಡ ಶುರುವಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದ ಕಡೆ ಎಲ್ಲರ ಚಿತ್ತ ನೆಟ್ಟಿದೆ.‌ ಕ್ಲಾಸ್ & ಮಾಸ್ ಎಂಟರ್ ಟೈನರ್ ಅಪ್ಪು ಯುವರತ್ನನಾಗಿ ಮಿಂಚುತ್ತಿದ್ದಾರೆ. ಸಿನಿಮಾ ಸೆಟ್ಟೇರಿದಲ್ಲಿಂದಲೂ ಸದ್ದು ಮಾಡುತ್ತಿರುವ ಯುವರತ್ನನ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಅಭಿಮಾನಿಗಳು ಚಿತ್ರ ರಿಲೀಸ್ ಗೆ ವ್ಹೈಟ್ ಮಾಡ್ತಿದ್ದಾರೆ. ಯುವರತ್ನನ ಹಾಡು ಮಿಲಿಯನ್ ಗಟ್ಟಲೆ ವೀವ್ಸ್ ಪಡೆದಿದೆ.

ಯುವರತ್ನ (Yuvarathnaa) ಏಪ್ರಿಲ್​ 1ರಂದು ಬಿಡುಗಡೆಯಾಗಲಿದೆ. ಕನ್ನಡ ಮತ್ತು ತೆಲುಗಿನಲ್ಲಿ ಊರಿಗೊಬ್ಬ ರಾಜ, ಆ ರಾಜಂಗೊಬ್ಬಳು ರಾಣಿ, ಇಬ್ರೂ ಮದುವೆ ಆದ್ರೆ ಹಾಲು-ಜೇನು ಹಾಡು ರಿಲೀಸ್ ಆಗಿದೆ. ಜಾನಿಯವರ ಕೊರಿಯಾಗ್ರಫಿ ಸಖತ್ ಹಿಡಿಸುತ್ತದೆ.

‘ಊರಿಗೊಬ್ಬ ರಾಜಾ, ಆ ರಾಜಂಗೊಬ್ಬಳು ರಾಣಿ’ ಹಾಡು ಹೊಂಬಾಳೆ ಫಿಲ್ಮ್ಸ್​​ನ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆಯಾಗಿದೆ.

3.40 ಸೆಕೆಂಡ್​ಗಳ ಹಾಡಿನಲ್್ಲಲಿ  ಪವರ್​ ಸ್ಟಾರ್​ ಪುನೀತ್​ ಅವರು ಅಷ್ಟೇ ಪವರ್​ಫುಲ್​ ಆಗಿ ಸ್ಟೆಪ್​ ಹಾಕಿದ್ದಾರೆ. ಊರಿಗೊಬ್ಬ ರಾಜ ಹಾಡಿನ ಸಾಹಿತ್ಯವನ್ನು ಚಿತ್ರ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಅವರೇ ರಚಿಸಿದ್ದು, ತಮನ್.ಎಸ್​ ಸಂಗೀತ ನೀಡಿದ್ದಾರೆ. ರಮ್ಯಾ ಬೆಹರಾ ಜೊತೆಗೆ ಪುನೀತ್​ ರಾಜ್​ಕುಮಾರ್ ಅವರೇ ಧ್ವನಿಯಾಗಿದ್ದು ವಿಶೇಷ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...