ರೈನ್ ಬೋ ಲೇಔಟ್ ನಲ್ಲಿ ಕಳ್ಳರ ಹಾವಳಿ

Date:

ಕಳ್ಳತನ ಕಡಿಮೇ ಆಯ್ತು ಅನ್ನುವಷ್ಟರಲ್ಲಿ , ಸರಣಿಗಳ್ಳತನ ಪ್ರಕರಣ ಬೆಳಕಿಗೆ ಬಂದಿದೆ . ಬೆಂಗಳೂರಿನ ರೈನ್ ಬೋ ಲೇಔಟ್​ನಲ್ಲಿ ಸರಣಿ ಕಳ್ಳತನವಾಗಿದ್ದು, ಐಶಾರಾಮಿ ಮನೆಗಳಲ್ಲಿದ್ದ ಚಿನ್ನಾಭರಣ ಕಳ್ಳರು ದೋಚಿದ್ಧಾರೆ. ಮನೆಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿ ಯಾರೂ ಇರಲಿಲ್ಲ, ಕರೆಂಟ್​ ಇಲ್ಲದೇ ಇರುವ ವೇಳೆ ಮನೆಗೆ ನುಗ್ಗಿ ಕಳವು ಮಾಡಿದ್ಧಾರೆ. ಸಿಸಿಟಿವಿ ವರ್ಕ್ ಆಗ್ತಿಲ್ಲ ಅನ್ನೋದನ್ನ ಖಾತ್ರಿ ಮಾಡ್ಕೊಂಡು ಲೂಟಿ ಮಾಡಿದ್ದಾರೆ.
ಮನೆಯವರು ವಾಪಸ್ ಬಂದು ನೋಡಿದಾಗ ಕಳ್ಳತನ ಪತ್ತೆಯಾಗಿದೆ. ಬೆಳ್ಳಂದೂರು ಪೊಲೀಸ್​ ಠಾಣೆ ವ್ಯಾಪ್ತಿಯ ರೈನ್​​ ಬೋ ಲೇಔಟ್​ನ ಮೂರು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಉದ್ಯಮಿ ಧರ್ಮತೇಜ್​​, IT ಸಿಬ್ಬಂದಿ ಮಂಜುನಾಥ್​​, ಉದಯ ಭಾಸ್ಕರ್​ ಮನೆ ಲೂಟಿ ಮಾಡಿದ್ಧಾರೆ. ಖತರ್ನಾಕ್​​ ಕಳ್ಳರು ಫ್ಲಾಟ್​ಗಳಲ್ಲಿ ಕಳವು ಮಾಡಿದ್ಧಾರೆ. ಎರಡು ವಜ್ರದ ಬಳೆ, ಡೈಮೆಂಡ್​ ಚೈನ್​​, ಮೂರು ಓಲೆ , 10 ಜೊತೆ ಚಿನ್ನದ ಓಲೆ, ಚಿನ್ನದ ಬಳೆ, ಗೋಲ್ಡ್​ ಬ್ರಾಸ್ಲೆಟ್​, 2 ಗೋಲ್ಡ್​ ಪೆಂಡೆಂಟ್​, 3 ಚಿನ್ನದ ಉಂಗುರ, ವಜ್ರ ಸಹಿತ ಚಿನ್ನದ ಸರ ಕಳ್ಳತನವಾಗಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...