ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆ ನಂತರ ಪರಾರಿಯಾಗಲು ಯತ್ನಿಸಿದ ಶ್ರೀಗಳ ಆಪ್ತೆ ರಮ್ಯಾ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬುರ್ಖಾ ಧರಿಸಿ ರಮ್ಯಾ ಪರಾರಿಯಾಗಲು ಯತ್ನಿಸಿದ್ದು, ಬೆಳ್ತಂಗಡಿ ತಾಲೂಕಿನ ಅಳದಂಗಡಿ ಶ್ರೀ ಸತ್ಯದೇವತೆ ದೇವಸ್ಥಾನದ ಬಳಿ ಪೊಲೀಸರು ಆಕೆಯನ್ನು ಹಿಡಿದಿದ್ದಾರೆ.
ರಮ್ಯಾ ಮೂವರು ಮಹಿಳೆಯರೊಂದಿಗೆ ಎರ್ಟಿಗಾ ಕಾರ್ ನಲ್ಲಿ ತೆರಳುತ್ತಿದ್ದರು. ದೇವಸ್ಥಾನದ ಬಳಿ ಕಾರ್ ಪಂಕ್ಚರ್ ಆಗಿದೆ. ಈ ವೇಳೆ ರಮ್ಯಾ ಪರಾರಿಯಾಗಲು ಯತ್ನಿಸಿರೋದು ಬೆಳಕಿಗೆ ಬಂದಿದೆ. ಉಡುಪಿ ಪೊಲೀಸರ ಸೂಚನೆ ಮೇರೆಗೆ ವೇಣೂರು ಪೊಲೀಸರು ಆಕೆಯನ್ನು ಬಂಧಿಸಿ, ಉಡುಪಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.