ಇಂದಿನ ರಾಶಿ ಫಲದ ಪ್ರಕಾರ ಕುಂಭ ರಾಶಿಯವರನ್ನು ಅವರ ಬಾಸ್ ಪರೀಕ್ಷಿಸುವ ಸಾಧ್ಯತೆ ಇದೆ. ವಿವಿಧ ರಾಶಿಗಳ ಫಲಾಫಲಗಳು ಇಲ್ಲಿದೆ ನೋಡಿ.
ಮೇಷ : ಚುನಾವಣಾ ರಂಗ ಪ್ರವೇಶಿಸ ಬೇಕೆಂದಿರುವವರಿಗೆ ಜನ ಬೆಂಬಲ ಸಿಗಲಿದೆ. ಆದರೆ, ಎದುರಾಳಿಯ ಕಡೆಗಣನೆ ಬೇಡ.

ವೃಷಭ : ಹಣವು ವಿಪರೀತ ಖರ್ಚಾಗಲಿದೆ. ಮಾಡುವ ಕೆಲಸ ಕಾಯಾ , ವಾಚಾ ಮನಸ್ಸುಗಳಿಂದ ಕೂಡಿರಲಿ.

ಮಿಥುನ : ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಚಾಚಿ ಸಾಕಾಗಿರಬಹುದು. ಹಾಗಂತ ಹಾಸಿಗೆ ಗಿಂತ ಜಾಸ್ತಿ ಕಾಲು ಚಾಚ ಬೇಡಿ. ಸ್ವಲ್ಪ ತಾಳ್ಮೆಇರಲಿ.

ಕರ್ಕಾಟಕ : ಕೋಪದಿಂದ ಸಹಾಯ ವಂಚಿತರಾಗುತ್ತೀರಿ. ನೀವು ಮಾಡಿಕೊಳ್ಳುವ ಕೋಪದ ಪರಿಣಾಮದಿಂದ ಸಹಾಯ ಮಾಡಲು ಬಂದ ಸ್ನೇಹಿತರು ಹಿಂದೆ ಸರಿಯುತ್ತಾರೆ.

ಸಿಂಹ : ಪತ್ನಿ ಮಕ್ಕಳಿಂದ ಮನಸ್ಸಿಗೆ ಬೇಸರ ಉಂಟಾಗುವ ಸಾಧ್ಯತೆ ಇದೆ. ಅವರ ವಿಶ್ವಾಸ ಪಡೆದು ಸಾಗಿ ಲಾಭ ವಾಗಲಿದೆ.

ಕನ್ಯಾ : ರಾಜಕೀಯ ಮುಖಂಡರು ನಿಮ್ಮಲ್ಲಿ ಸಹಾಯ ಹಸ್ತ ಚಾಚುತ್ತಾರೆ. ನೀವು ಅವರಿಗೆ ಹೇಳುವ ವಿಷಯಗಳು ಸತ್ಯವಾಗಲಿವೆ.

ತುಲಾ : ಅಪಘಾತ ಸಂಭವವಿದೆ. ಹುಷಾರಾಗಿರಿ.

ವೃಶ್ಚಿಕ : ಚುನಾವಣಾ ಕಣಕ್ಕೆ ಧುಮುಕುವ ಇಚ್ಛೆ ಇದ್ದಲ್ಲಿ ಇನ್ನೊಮ್ಮೆ ಯೋಚಿಸಿ.

ಧನು : ಮನೆಯ ಸಮಸ್ಯೆಗಳಿಗೆ ಬೇಗ ಪರಿಹಾರ ಕಂಡುಕೊಳ್ಳಿ. ಇಲ್ಲವಾದಲ್ಲಿ ಮುಂದೆ ತುಂಬಾ ಕಷ್ಟ ಪಡಬೇಕಾದೀತು.

ಮಕರ : ನಿಮ್ಮ ಕೋಪಕಂಡು ನಿಮ್ಮ ಕೈ ಕೆಳಗಿನವರು ರೋಸಿ ಹೋಗುವರು. ಬೇರೆಯವರನ್ನು ದೂಷಿಸುವುದನ್ನು ಬಿಡಿ.

ಕುಂಭ : ನಿಮ್ಮನ್ನು ನಿಮ್ಮಕೆಲಸದ ಸ್ಥಳದಲ್ಲಿ ಬಾಸ್ ಪರೀಕ್ಷಿಸುವ ಸಾಧ್ಯತೆ ಇದೆ. ಆದರೆ , ನಿಮಗೇನು ತೊಂದರೆ ಆಗುವುದಿಲ್ಲ.

ಮೀನ : ನಿಮ್ಮ ಹತ್ತಿರದವರೇ ನಿಮ್ಮನ್ನು ತಾತ್ಸಾರ ಮಾಡುತ್ತಾರೆ. ಗುರುವಿನ ಆರಾಧನೆ ಮಾಡಿ







