ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಅವರ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತ ರವಿಬೆಳಗೆರೆಗೆ ಮತ್ತೆ ಸಂಕಷ್ಟ ಎದುರಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಬ್ ಡ್ರೈವರ್ ಹೇಳಿಕೆ ನೀಡಿದ್ದು, ಇದು ಬೆಳಗೆರೆ ಸಂಕಷ್ಟಕ್ಕೆ ಕಾರಣ.
ಅಂದು ಹಾಯ್ ಬೆಂಗಳೂರು ಕಚೇರಿಯಿಂದ ತನಗೆ ಕರೆ ಬಂದಿತ್ತು.ವ್ಯಕ್ತಿಯೊಬ್ಬನನ್ನು ಪಿಕ್ ಅಪ್ ಮಾಡುವಂತೆ ಸೂಚಿಸಲಾಗಿತ್ತು ಎಂದು ಹತ್ಯೆ ಸಂಚು ಪ್ರಕರಣದ ಆರೋಪಿ ಶಶಿಧರ್ ಮುಂಡೇವಾಡಿಯನ್ನು ಕಾರಿನಲ್ಲಿ ಸುತ್ತಾಡಿಸಿದ ಚಾಲಕ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾನೆ.
ಶಶಿಧರ್ ಮುಂಡೇವಾಡಿಯನ್ನು ಕತ್ರಿಗುಪ್ಪೆಯಲ್ಲಿ ಪಿಕ್ ಮಾಡಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ಉತ್ತರಹಳ್ಳಿಯಲ್ಲಿ ತಿರುಗಾಡಿದ್ರು. ಯಾಕಾಗಿ ಸುತ್ತಾಡಿದ್ರು? ಎನ್ನುವುದು ಏಕೆ ಎಂದು ಗೊತ್ತಿಲ್ಲ ಎಂದು ಹೇಳಿರುವ ಡ್ರೈವರ್, ಶಶಿಧರ್ ಮುಂಡೇವಾಡಿ ಮುಖನೋಡಿ, ಇವರನ್ನೇ ಕಾರಿನಲ್ಲಿ ಸುತ್ತಾಡಿಸಿದ್ದು ಎಂದು ಹೇಳಿದ್ದಾನೆ.