ಮನುಷ್ಯತ್ವದ ಪಾಠ ಹೇಳಿದೆ ಶ್ವಾನ…!

Date:

ಮನುಷ್ಯನಾಗಿ ಹುಟ್ಟಿದ ಮಾತ್ರಕ್ಕೆ ಮನುಷ್ಯತ್ವ ಇರಲ್ಲ. ಮೂಕ ಪ್ರಾಣಿಗಳಲ್ಲಿ ಮನುಷ್ಯನಿಗೂ ಮಿಗಿಲಾದ ಮಾನವೀಯತೆ ಇರುತ್ತದೆ. ಇಲ್ಲೊಂದು ಶ್ವಾನ ಮನುಷ್ಯರಿಗೆ ಮನುಷ್ಯತ್ವದ ಪಾಠ ಮಾಡಿದೆ.

ಬೆಂಗಳೂರಿನ ಕುರುಬರಹಳ್ಳಿಯಲ್ಲಿ ಶ್ವಾನವೊಂದು ಬದುಕಿನ ಪ್ರೀತಿ ಪಾಠ ಮಾಡಿದೆ..!
ಆಗತಾನೆ ಹುಟ್ಟಿದ್ದ ನಾಯಿ ಮರಿಗೆ ಪ್ರಪಂಚದ ಅರಿವೇ ಇರಲಿಲ್ಲ. ಅಮ್ಮನನ್ನು ಕೂಗಿ ಕರೆಯುವ ಶಕ್ತಿಯೂ ಬಂದಿರಲಿಲ್ಲ. ಹಾಲು ಬೇಕೆಂದೆನಿಸಿದರೂ ಕುಡಿಸಲು ಅಮ್ಮ ಇಲ್ಲ. ಇಂಥಾ ಪುಟ್ಟ ನಾಯಿ ಮರಿಯನ್ನು ಮನುಷ್ಯನೆಂಬ ಪ್ರಾಣಿ ಚೀಲದಲ್ಲಿ ಕಟ್ಟಿ ಮೋರಿ ಬಳಿ ಎಸೆದು ಹೋಗಿದ್ದ…! ಆ ಮರಿ ಉಸಿರುಗಟ್ಟಿ ಸಾಯುವ ಸ್ಥಿತಿಯಲ್ಲಿರುವಾಗ ರೆಬಲ್ ಎಂಬ ಬ್ರೀಡ್ ನಾಯಿ ತನ್ನ ಮಾಲೀಕನೊಂದಿಗೆ ಬಂದಿದೆ.


ಈ ವೇಳೆ ಚೀಲದಲ್ಲಿದ್ದ ಬೀದಿ ನಾಯಿಮರಿ ಬಳಿ ಬಂದಿದ್ದಾನೆ ರೆಬಲ್..! ಅದನ್ನ ಕಂಡಾಗ ಪಾಪ ಆ ಮರಿಯನ್ನು ರೆಬಲ್ ಕಚ್ಚಿ ಕೊಲ್ತಾನೆ ಎಂದು ಭಾವಿಸಲಾಗಿತ್ತು.‌ ರೆಬಲ್ ನಲ್ಲಿದ್ದ ಮಾತೃ ಹೃದಯ ಆ ಮರಿಯನ್ನು ಬದುಕುಳಿಸಿತು.
ರೆಬಲ್ ಚೀಲವನ್ನು ಬಾಯಲ್ಲಿ ಕಚ್ಚಿ ಮಾಲೀಕನಿಗೆ ತಂದು ಒಪ್ಪಿಸಿದ್ದಾನೆ. ಈಗ ಆ ಮರಿಯನ್ನು ಪರಮೇಶ್ ಎಂಬುವರು ಸಾಕಲು ಮುಂದಾಗಿದ್ದಾರೆ.
ಮೂಕ ಪ್ರಾಣಿಗಳಲ್ಲಿನ ಮಾನವೀಯತೆ ಮನುಷ್ಯನಲ್ಲಿ ಇಲ್ಲದಾಯಿತೇ?

Share post:

Subscribe

spot_imgspot_img

Popular

More like this
Related

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...