ಈ ಸುದ್ದಿಯನ್ನು ಓದಿದ್ರೆ ನಿಜಕ್ಕೂ ಆಶ್ಚರ್ಯವಾಗುತ್ತೆ. ಕೇವಲ ಒಂದು ರೂಪಾಯಿಗಾಗಿ ವ್ಯಕ್ತಿಯನ್ನು ಕೊಲೆ ಮಾಡಿರೋ ಆಘಾತಕಾರಿ ಸುದ್ದಿ ಇದು.
ಈ ಘಟನೆ ನಡೆದಿರೋದು ಮಹಾರಾಷ್ಟ್ರದ ಕಲ್ಯಾಣ್ ನಗರದಲ್ಲಿ. 54 ವರ್ಷದ ಮನೋಹರ್ ಗಾಮ್ನೆ ಒಂದು ರೂಪಾಯಿಯಿಂದ ಪ್ರಾಣ ಕಳೆದುಕೊಂಡವರು…!
ಇವರು ತಮ್ಮ ಮನೆಯ ಸಮೀಪದ ಅಂಗಡಿಗೆ ಮೊಟ್ಟೆ ಕೊಳ್ಳಲು ಹೋಗಿದ್ದರು. ಖರೀದಿಸಿದ ಮೊಟ್ಟೆಗೆ 1 ರೂಪಾಯಿ ಕಡಿಮೆ ಕೊಟ್ಟಾಗ ಅಂಗಡಿ ಮಾಲೀಕ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಮಾಲೀಕ ಪ್ರಭು (45) ಗಾಮ್ನೆ ಅವರನ್ನು ಕಾಲಿನಲ್ಲಿ ಒದ್ದು ಸಾಯಿಸಿದ್ದಾನೆ…! ಆರೋಪಿಯನ್ನು ಬಂಧಿಸಲಾಗಿದೆ.