ಕಳ್ಳತನ ಮಾಡಿ ಅಪ್ಪ-ಅಣ್ಣನ ಪ್ರತಿಮೆ ಮಾಡಿಸಿದ..!? ವಿಚಿತ್ರ ಸೆಂಟಿಮೆಂಟ್ ನಿಂದ ಜೈಲುಪಾಲಾದ..!

Date:

 

ಅವನೊಬ್ಬ ಪಕ್ಕಾ ಕಳ್ಳ. ಆದ್ರೆ ಆ ವೃತ್ತಿಗೆ ಎಂಟ್ರಿ ಕೊಡೋದಕ್ಕೆ ಕಾರಣ ಅವರ ಅಪ್ಪ ಮತ್ತು ಅಣ್ಣ. ಅಪ್ಪ-ಅಣ್ಣ ಇಬ್ಬರು ಈಗ ಬದುಕಿಲ್ಲ, ಆದ್ರೆ ಅವರ ನೆನಪು ಮಾತ್ರ ಆತನಿಂದ ದೂರವಾಗಿರಲಿಲ್ಲ. ಹೀಗಾಗಿಯೇ ಅಪ್ಪ ಮತ್ತು ಅಣ್ಣನನ್ನು ಶಾಶ್ವತವಾಗಿ ತನ್ನೊಂದಿಗೆ ಉಳಿಸಿಕೊಳ್ಳಲು ಆತ ಒಂದು ಐಡಿಯಾ ಮಾಡಿದ್ದ. ಅದು ಅವರ ಪ್ರತಿಮೆಗಳನ್ನ ಮಾಡಿಸೋದು. ಆ ಪ್ರತಿಮೆಗಳೇನು ಕಲ್ಲು ಮಣ್ಣಿನಿಂದ ಅಲ್ಲ, ಬೆಳ್ಳಿಯಿಂದ. ಬೆಳ್ಳಿಯಲ್ಲಿ ಪ್ರತಿಮೆ ಮಾಡಿಸೋದು ಅಷ್ಟು ಸುಲಭನಾ..? ಅದಕ್ಕೆ ಕೋಟ್ಯಾಂತರ ರೂಪಾಯಿ ಹಣ ಬೇಕು..! ಆ ಹಣ ಎಲ್ಲಿಂದ ತರೋದು..! ಅದಕ್ಕೆ ಅವನು ಮಾಡಿದ್ದು ಕಳ್ಳತನ. ಕಳ್ಳವು ಮಾಡಿ ತಂದ ಬೆಳ್ಳಿಯಿಂದ 100 ಕೆಜಿ ತೂಕದ ತಂದೆಯ ಪ್ರತಿಮೆಯನ್ನು ಮಾಡಿಸಿದ್ದಾನೆ. ಆದರೆ ಅವನ ಅದೃಷ್ಟ ಸರಿಯಿರಲಿಲ್ಲ. ಈಗ ಬಸವೇಶ್ವರನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಮೂಲತಃ ಗುಜರಾತಿನವನಾದ ತಲಪಾಡ್ ನಾವಗಾನ್ ಬಾಯ್ ಬಂಧಿತ ಕಳ್ಳ. ಇವರ ತಂದೆ ಮತ್ತು ಅಣ್ಣ ಕೂಡ ಕಳ್ಳತನ ಮಾಡುತ್ತಿದ್ದರಂತೆ. ಸಧ್ಯ ಬಂಧಿತನಿಂದ 3 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

  • ರಘು ಆರ್ ಇಂಜನಹಳ್ಳಿ.

POPULAR  STORIES :

ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ,

ಸ್ನಾನ ಮಾಡುತ್ತಿದ್ದವಳ ವಿಡಿಯೋ ಚಿತ್ರೀಕರಣ ಮಾಡಿದ..! ಕತ್ರೀನಾ ಕೈಫ್ ಸಿಟ್ಟಾಗಿದ್ದೇ ಒದ್ದುಬಿಟ್ಟಳು..!?

ನಿದ್ದೆಗೆಟ್ಟರೇ ಸಾಯೋದು ಗ್ಯಾರಂಟಿ..!! ನಿದ್ದೆ ಬರ್ತಿಲ್ಲಾ.. ಯಾಕೋ ನಿದ್ದೆ ಬರ್ತಿಲ್ಲಾ..!!

ಐಪಿಎಲ್ ನಲ್ಲಿ ತುಂಡುಡುಗೆ ತೊಟ್ಟು ಕುಣಿಯೋ ಚಿಯರ್ ಗರ್ಲ್ಸ್ ಸ್ಯಾಲರಿ ಎಷ್ಟು ಗೊತ್ತಾ..?

ಅವಳ `ಆತ್ಮ’ ಅತೃಪ್ತಿಯಿಂದ ನರಳುತ್ತಿದೆ..! ಭಾರತ ಚಿತ್ರರಂಗ ಕಂಡ ಅಪ್ಪಟ `ಸೌಂದರ್ಯ’

ಮೂರರ ಪೋರನ ಸಿಟ್ಟಿಗೆ ಪೊಲೀಸರೇ ಕಂಗಾಲು..! ಅಬ್ಬಾ..!! ಮಕ್ಕಳು ಹೀಗೂ ಇರ್ತಾರಾ..!?

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

Share post:

Subscribe

spot_imgspot_img

Popular

More like this
Related

ಭೈರಪ್ಪ ಅವರದ್ದು ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ: ನಟ ಅನಂತನಾಗ್‌ ಭಾವುಕ

ಭೈರಪ್ಪ ಅವರದ್ದು ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ ಎಂದು ನಟ ಅನಂತನಾಗ್‌ ಭಾವುಕರಾದರು. ನವರಾತ್ರಿಯ...

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...