ಟೀ ಮಾರುವ ಕನ್ನಡಿಗನ ಮೇಲೆ ತಮಿಳರ ದೌರ್ಜನ್ಯ…!

Date:

ನಮ್ಮ ಬೆಂಗಳೂರಿನಲ್ಲಿ ತಮಿಳರ ವರ್ತನೆ ಮಿತಿ ಮೀರ್ತಿದೆ. ಟೀ ಮಾರುವ ಹುಡುಗನನ್ನು ಅಡ್ಡಗಟ್ಟಿ ಮೊಬೈಲ್ ಮತ್ತು ಹಣವನ್ನು ಕಿತ್ತುಕೊಂಡ ಘಟನೆ ನಡೆದಿದೆ.


ಕತ್ರಿಗುಪ್ಪೆಯ ನಿವಾಸಿ ಧನಂಜಯ್ (20) ಎಂಬ ಯುವಕ ಪ್ರತಿದಿನ ಮನೆಯಲ್ಲಿ ಟೀ ಮಾಡಿಕೊಂಡು ರಸ್ತೆಯಲ್ಲಿ ಮಾರುತ್ತಾ ಅಷ್ಟೋ ಇಷ್ಟೋ ಹಣ ಸಂಪಾದಿಸುತ್ತಾ ಕುಟುಂಬಕ್ಕೆ ನೆರವಾಗಿದ್ದಾನೆ.


ತ್ಯಾಗರಾಜನಗರ, ಚಾಮರಾಜಪೇಟೆ, ಮೆಜೆಸ್ಟಿಕ್, ಮಲ್ಲೇಶ್ವರಂ, ಮಂತ್ರಿಮಾಲ್ ಮೊದಲಾದ ಪ್ರಮುಖ ಪ್ರದೇಶಗಳಲ್ಲಿ ಟೀ ಮಾರುತ್ತಾನೆ. ಎಂದಿನಂತೆ ಇಂದು (20-01-2018) ಟೀ ಮಾರುತ್ತಿದ್ದ.


ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಲ್ಲೇಶ್ವರಂನಲ್ಲಿ ನಿತ್ಯದಂತೆ ಕಚೇರಿಗಳಿಗೆ ಟೀ ಕೊಟ್ಟು. ತ್ಯಾಗರಾಜ ನಗರಕ್ಕೆ ವಾಪಸ್ಸಾಗುವಾಗ ಓಕಳಿ ಪುರಂ ನಲ್ಲಿ 3 ಮಂದಿ ಅಪರಿಚಿತ ಯುವಕರು ಬಂದು, ಸ್ವಲ್ಪ ದೂರದಲ್ಲೇ ಗಾರೆ ಕೆಲಸ ನಡೆಯುತ್ತಿದ್ದು, ಅಲ್ಲಿಗೆ 10 ಟೀ ಬೇಕಿದೆ ಎಂದಿದ್ದಾರೆ. ಕೇವಲ 1-2 ಟೀಗಳಿಗಾಗಿದ್ದರೆ ಧನಂಜಯ್ ಹೋಗುತ್ತಿರಲಿಲ್ಲ. ಆದರೆ, 10 ಟೀ ಮಾರಾಟವಾಗುತ್ತದೆ, ಒಂದ್ 60 ರೂಪಾಯಿ ಸಿಗುತ್ತಲ್ಲಾ ಎಂಬ ಆಸೆಯಿಂದ ಆ ಹುಡುಗರನ್ನು ನಂಬಿ ಅವರು ಕರೆದಲ್ಲಿಗೆ ಹೋಗುತ್ತಾನೆ.


ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ಆ ತಮಿಳು ಯುವಕರು ಚಾಕು ತೋರಿಸಿ ಟೀ ಫ್ಲಾಸ್ಕ್ ಇಟ್ಕೊಂಡಿದ್ದ ಎರಡು ಚೀಲಗಳನ್ನು ಕಸಿದು ಅದರಲ್ಲಿ ಹಣವನ್ನು ಹಾಗೂ ಜೇಬಿನಲ್ಲಿದ್ದ ಮೊಬೈಲ್ ಅನ್ನು ಕಿತ್ತುಕೊಂಡು ಹೋಗಲು ಹೇಳಿದ್ದಾರೆ.
ಅಪ್ಪ ಕೊಡಿಸಿದ ಮೊಬೈಲ್, ದಯವಿಟ್ಟು ಕೊಡಿ ಎಂದು ಕಾಲಿಗೆ ಬಿದ್ದರೂ ಕೇಳದೆ ಚಾಕುವಿನಿಂದ ಬೆದರಿಸಿ ಓಡಿಸಿದ್ದಾರೆ.
ಧನಂಜಯ್ ಕೂಡಲೇ ಆಟೋದವರನ್ನು ಕರೆದುಕೊಂಡು ಬಂದಿದ್ದಾನೆ. ಅಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ.
ಈ ಬಗ್ಗೆ ಧನಂಜಯ್ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

Share post:

Subscribe

spot_imgspot_img

Popular

More like this
Related

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್ ಬಿಗ್ ಬಾಸ್ ಕಾರ್ಯಕ್ರಮ...

ಬಿಗ್ ಬಾಸ್ ಮನೆಗೆ ಬೀಗ: ಹೈಕೋರ್ಟ್ ಮೊರೆ ಹೋದ ಜಾಲಿವುಡ್ ಸ್ಟುಡಿಯೋ

ಬಿಗ್ ಬಾಸ್ ಮನೆಗೆ ಬೀಗ: ಹೈಕೋರ್ಟ್ ಮೊರೆ ಹೋದ ಜಾಲಿವುಡ್ ಸ್ಟುಡಿಯೋ ಬೆಂಗಳೂರು:...

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ!

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ! ಕನ್ನಡದ ಪ್ರಸಿದ್ಧ ರಿಯಾಲಿಟಿ...

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...