ದೇವಿ ಅಲಂಕಾರಕ್ಕಿಲ್ಲಿ ಬಳಸಿದ್ದಾರೆ ಬರೊಬ್ಬರಿ 100 ಕೋಟಿ ರೂ ನಗದು…!

Date:

ಎಲ್ಲರಿಗೂ ದೀಪಾವಳಿ ಶುಭಾಶಯಗಳು.. ದೀಪಾವಳಿ ಸಡಗರ ಎಲ್ಲೆಡೆ ಜೋರಾಗಿದೆ ಅಲ್ವಾ..? ನೀವೂ ಕೂಡ ದೀಪಾವಳಿ ಸಂಭ್ರಮದಲ್ಲಿದ್ದೀರಿ. ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಹಬ್ಬವನ್ನು ಆಚರಿಸಲಾಗ್ತಾ ಇದೆ. ಅಂತೆಯೇ ಮಧ್ಯಪ್ರದೇಶದ ರತ್ಲಾಮ್‍ನಲ್ಲಿರೋ ಮಹಾಲಕ್ಷ್ಮೀ ದೇವಸ್ಥಾನದಲ್ಲಿಯೂ ಕೂಡ..! ಈ ದೇವಸ್ಥಾನದ ಬಗ್ಗೆ ಮಾತ್ರ ಯಾಕ್ ಹೇಳೋದ್ ಅಂತಾನಾ..? ಕಾರಣ ಇದೆ.. ಇಲ್ಲಿ ದೇವಿಗೆ ಮಾಡಿರೋ ಅಲಂಕಾರ ನೋಡಲು ಎರಡು ಕಣ್ಣುಗಳು ಸಾಲದು..! ದೇವಿಯನ್ನು ಐಷಾರಾಮಿಯಾಗಿ ಸಿಂಗರಿಸಲಾಗಿದೆ..! ಬರೀ ಚಿನ್ನಾಭರಣ, ನೋಟುಗಳಿಂದ ಮಹಾಲಕ್ಷ್ಮೀಯನ್ನು ಅಲಂಕರಿಸಲಾಗಿದೆ.


ಪ್ರತಿವರ್ಷ ದೀಪಾವಳಿಯಲ್ಲಿಯೂ ದೇವಿಗೆ ಹೀಗೆ ಅಲಂಕಾರ ಮಾಡ್ತಾರೆ. ಈ ವರ್ಷ ಇನ್ನೂ ವೈಭವಯುತವಾಗಿದೆ..! ಈ ಬಾರಿ ಚಿನ್ನಾಭರಣಗಳ ಜೊತೆಗೆ ಬಳಸಿರೀ ನಗುದು ಬರೊಬ್ಬರಿ 100 ಕೋಟಿ ರೂ…!
ದೀಪಾವಳಿ ಹಬ್ಬಕ್ಕೆ ಈ ದೇವಾಲಯಕ್ಕೆ ನಾನಾ ಕಡೆಗಳಿಂದ ಭಕ್ತರು ಬರ್ತಾರೆ. ಅವರ ಬಳಿಯಲ್ಲಿನ ಚಿನ್ನಾಭರಣಗಳನ್ನು ತಂದು ದೇವಿ ಅಲಂಕಾರಕ್ಕೆ ಕೊಡ್ತಾರಂತೆ. ದೀಪಾವಳಿ ಮುನ್ನ ದಿನವೇ ಬಂದು ಬೆಲೆ ಬಾಳುವ ವಸ್ತುಗಳನ್ನು ಭಕ್ತರು ಕೊಡ್ತಾರೆ. ಅದನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟು ಹಬ್ಬದ ಬಳಿಕ ಆ ವಸ್ತುಗಳನ್ನು ಹಿಂದಿರುಗಿಸಲಾಗುತ್ತಂತೆ. ಈ ವರ್ಷವಂತೂ ದೇವಿ ಹೊಸ ಗರಿ ಗರಿ ನೋಟುಗಳಿಂದ ಕಂಗೊಳಿಸ್ತಾ ಇದ್ದಾಳೆ..!
ಕೇವಲ ಗರ್ಭಗುಡಿ ಮಾತ್ರವಲ್ಲ ಗರ್ಭಗುಡಿಯ ಹೊರ ಪ್ರಾಂಗಣದಲ್ಲೂ ನೋಟಿನ ಅಲಂಕಾರ ಮಾಡಲಾಗಿದೆ. ಎಲ್ಲಿ ನೋಡಿದರಲ್ಲಿ ಚಿನ್ನಾಭರಣ, ಹೊಸ ಗರಿ ಗರಿ ನೋಟುಗಳು..!

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...