ಮೇ.9 ಸೋಮವಾರದಂದು ಬುಧ ಸಂಕ್ರಮಣ ಕಾಣಿಸಿಕೊಂಡಿದೆ. ಸೂರ್ಯನಿಗೆ ಅತೀ ಸಮೀಪದ ಹಾಗೂ ನಭೋಮಂಡಲದ ಅತೀ ಚಿಕ್ಕ ಗ್ರಹ ಎನಿಸಿರೋದು ಬುಧ ಗ್ರಹ. 8 ವರ್ಷಗಳ ಬಳಿಕ ಸೂರ್ಯನ ಮೇಲೆ ಹಾದು ಹೋದ ಬುಧ ಗ್ರಹ. ಒಂದಡೆ ಅದ್ಭುತ ಕ್ಷಣ ಎನಿಸಿದರೆ. ಇನ್ನೊಂದಡೆ ಇಡೀ ಭೂಮಂಡಲದ ಆತಂಕವನ್ನು ತಂದೊಡ್ಡಿದೆ.
ಖಗೋಳದಲ್ಲಿ ನಡೆಯುವ ಬುಧ ಸಂಕ್ರಮಣವನ್ನು ಒಂದಡೆ ಇಡೀ ಪ್ರಪಂಚವೇ ಎದುರು ನೋಡುತ್ತಿದ್ರೆ ಮತ್ತೊಂದೆಡೆ ಭೂಮಂಡಲವೇ ಅಂತ್ಯವಾಗುತ್ತೆ ಅನ್ನೋ ಮಾಹಿತಿ ಬರಸಿಡಿಲಿನಂತೆ ಬಂದೆರಗಿದೆ. ಸೂರ್ಯನ ಮೇಲೆ ಬುಧ ಗ್ರಹ ಹಾದುಹೋದ ದಿನವೇ ಅಂದರೆ ಬುಧ ಸಂಕ್ರಮಣದಂದು ಇಡೀ ಪ್ರಪಂಚವೇ ಅಂತ್ಯ ಅನ್ನೋ ಉಲ್ಲೇಖ ಕ್ರಿಶ್ಚಿಯನ್ ಧರ್ಮಗ್ರಂಥ ಬೈಬಲ್ನಲ್ಲಿದೆಯಂತೆ. ಅದಕ್ಕೆ ಪೂರಕವಾದ ಕೆಲವು ಆಧಾರ ಮತ್ತು ದಾಖಲೆಗಳನ್ನು ಸಹ ಇದೆ.
ಇನ್ನು ಕ್ರಿಶ್ಚಿಯನ್ನರ ಪವಿತ್ರ ಸ್ಥಳ ಜೆರುಸೆಲಂನಲ್ಲಿ ನಿಂತು ಬುಧ ಸಂಕ್ರಮಣದಂದು ಚಂದ್ರನನ್ನು ನೋಡುವಂತಿಲ್ಲ. ಅಂದು ಚಂದ್ರನನ್ನು ವೀಕ್ಷಿಸಿದ್ರೆ ಆಘಾತ ತಪ್ಪಿದ್ದಲ್ಲ ಎಂದು ಹೇಳಲಾಗುತ್ತದೆ. ಸೌರಮಂಡಲದಲ್ಲಿನ ನಕ್ಷತ್ರಗಳ ಗುಂಪಿನಲ್ಲಿ ಚಂದ್ರ ನುಂಗಿ ಹೋಗುವಂತೆ ಗೋಚರಿಸುತ್ತಾನೆ. ಇದು ಭೂಮಿಯ ಅಂತ್ಯದ ಮುನ್ಸೂಚನೆ ಎಂದು ನಂಬಲಾಗಿದೆ.
ಆದ್ರೆ ನಭೋಮಂಡದಲ್ಲಿ ನಡೆಯುವ ವಿದ್ಯಮಾನಗಳು ಹೊಸತೇನಲ್ಲ ಆದ್ರೆ ಕೆಲವು ವಿದ್ಯಮಾನಗಳು ಭೂಮಂಡಲಕ್ಕೆ ಅಪಾಯದ ಮುನ್ಸೂಚನೆ ಅನ್ನೋದನ್ನು ಅಲ್ಲಗಳೆಯುವಂತಿಲ್ಲ. ಆದ್ರೆ ಇದೀಗ ಸಂಭವಿಸಿರುವ ಬುಧ ಸಂಕ್ರಮಣವು ಇಂತಹದೇ ಆಂತಕಕ್ಕೆ ಕಾರಣವಾಗಿದೆ. ಆದ್ರೆ ಕೆಲವು ಖಗೋಳ ತಜ್ಞರು ಇಂತಹ ವಿಶೇಷ ವಿದ್ಯಮಾನಗಳು ಯಾವುದೇ ಆತಂಕದ ಸಂಕೇತವಲ್ಲ. ಇದು ಖಗೋಳ ವಿಜ್ಞಾನದ ಒಂದು ಕೌತುಕ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- ಶ್ರೀ
POPULAR STORIES :
ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?
ಒಂದು ಕೈಯ್ಯಲ್ಲಿ ಪಿಸ್ತೂಲು.. ಮತ್ತೊಂದು ಕೈಯ್ಯಲ್ಲಿ ಮೊಬೈಲು..! ಸೆಲ್ಫಿ ತೆಗೆದುಕೊಳ್ಳಲು ಹೋಗಿ ಏನಾಯ್ತು ಗೊತ್ತಾ..?
ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಆಸೇನಾ..!? ಇದನ್ನು ಓದಿದ್ರೆ ಐಫೋನ್ ಗೆ ದೊಡ್ಡ ನಮಸ್ಕಾರ ಹಾಕ್ತೀರಾ..?
ಹಕ್ಕಿ ಜ್ವರ ಮತ್ತೆ ಬಂದಿದೆ ಎಚ್ಚರ..!! ಸಾವು ಹೊಂಚು ಹಾಕಿ ಕುಂತಿದೆ..!
ಕೊಹ್ಲಿ ಬಗ್ಗೆ ಹೀಗೆಲ್ಲಾ ಮಾತಾಡಬಹುದಾ..? ಕಾಲ್ ಎಳೆಯೋರಿಗೆ ವಿರಾಟ್ ಉತ್ತರವೇನು..?
ಇದು ಪ್ರೇಕ್ಷಕನ ನೆಚ್ಚಿನ ತಿಥಿ…! 10 International Award Winner Thithi Kannada Movie