ರಾಜ್ಯಾದ್ಯಂತ ‘ವೆನಿಲ್ಲಾ’ ಫ್ಲೇವರ್…!

Date:

ಈ ಶುಕ್ರವಾರ ರಾಜ್ಯಾದ್ಯಂತ ‘ವೆನಿಲ್ಲಾ’ ಫ್ಲೇವರ್ ಆವರಿಸಿಕೊಳ್ಳಲಿದೆ. ಅರೇ, ಇದೇನಪ್ಪಾ? ವೆನಿಲ್ಲಾ ಫ್ಲೇವರ್ ಹೇಗೆ ಇಡೀ ರಾಜ್ಯವನ್ನು ಆವರಿಸಿಕೊಳ್ಳುತ್ತೆ ಎಂಬ ಅಚ್ಚರಿಯೊಂದಿಗಿನ ಪ್ರಶ್ನೆಯೊಂದು ನಿಮ್ಮನ್ನು ಕಾಡದೇ ಇರುತ್ತಾ?
ನಾವಿಲ್ಲಿ ಹೇಳ್ತಿರೋದು ಬಹು ನಿರೀಕ್ಷಿತ ‘ವೆನಿಲ್ಲಾ’ ಸಿನಿಮಾ ಬಗ್ಗೆ. ಈಗಾಗಲೇ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿರುವ ವೆನಿಲ್ಲಾ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.


ಬ್ಯೂಟಿಫುಲ್ ಮನಸುಗಳು ಚಿತ್ರದ ನಿರ್ದೇಶಕ ಜಯತೀರ್ಥ ಅವರ ನಿರ್ದೇಶನದ ಚಿತ್ರವಿದು ‘ವೆನಿಲ್ಲಾ’.
ಅವಿನಾಶ್ ಈ ಚಿತ್ರದ ಮೂಲಕ ನಾಯಕ‌ನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ‌ಕೊಡ್ತಿದ್ದಾರೆ. ಸ್ವಾತಿ ಚಿತ್ರದ ನಾಯಕಿ. ನಿರೂಪಕ, ಬಿಗ್ ಬಾಸ್ ಖ್ಯಾತಿಯ ರೆಹಮಾನ್ ಹಾಸನ್ (ಟಿವಿ9 ರೆಹಮಾನ್) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಬಳಿಕ ಸುದ್ದಿವಾಹಿನಿಗಳಿಂದ ದೂರವಿರುವ ರೆಹಮಾನ್ ಸದ್ಯಕ್ಕೆ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.
ವೆನಿಲ್ಲಾದಲ್ಲಿ ಪಯಣ ರವಿಶಂಕರ್ ಪೊಲೀಸ್ ಆಫೀಸರ್ ಆಗಿ‌ ಮಿಂಚಿದ್ದಾರೆ.


ಒಂದು ಕೊಲೆ, ಗುಣಪಡಿಸಲಾಗದ ರೋಗ, ಅದೆಂಥಾ ಕಾಯಿಲಿಯೇ ಇರಲಿ ಅದನ್ನು ಗುಣಪಡಿಸುವ‌ ಶಕ್ತಿ ಹೊಂದಿರುವ ಪ್ರೀತಿಯ ಸುತ್ತಾ ಸುತ್ತವ ‘ವೆನಿಲ್ಲಾ’ ರುಚಿ ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತದೆ ಎನ್ನುತ್ತದೆ ಚಿತ್ರತಂಡ.
ಸಿನಿಪ್ರಿಯರು ವೆನಿಲ್ಲಾ ವನ್ನು ಹೇಗೆ ಸವಿಯುತ್ತಾರೆ ಎಂಬ ಕುತೂಹಲ ತಣಿಯಲು ಇನ್ನೊಂದೇ ದಿನ ಬಾಕಿ ಇರೋದು. ಟ್ರೇಲರ್ ನೋಡಿದ್ರೆ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುತ್ತದೆ. ಸಿನಿಮಾ ಹೆಂಗಿದೆ ಅಂತ ಶುಕ್ರವಾರದ ತನಕ ಕಾಯಲೇ ಬೇಕು.

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...