ಈ ವೀಡಿಯೋ ನೋಡುದ್ಮೇಲೆ ಟಿ.ವಿ. ಮಾಧ್ಯಮದ ಮೇಲೆ ನಿಮಗೆ ಅಪನಂಬಿಕೆ ಬರೋದಂತೂ ಸತ್ಯ ಅನ್ಸುತ್ತೆ.. ಮಾಧ್ಯಮವೊಂದರ ಸಿಬ್ಬಂದಿಯೊಬ್ಬ ರೈತರೊಬ್ಬರಿಗೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ನಟನೆ ಮಾಡಿ ಎಂದು ಈ ಮೊದಲೇ ನೊಂದು ಹೋಗಿದ್ದ ರೈತನಿಗೆ ಮತ್ತಷ್ಟು ನೋವುಂಟು ಮಾಡಿದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ವರದಿಯಾಗಿದೆ. ತನ್ನ ಹೊಲದಲ್ಲಿ ಬೆಳೆಯೆಲ್ಲಾ ನಾಶವಾಗಿ ನಷ್ಟ ಅನುಭವಿಸಿದ್ದ ರೈತ ಕುಮಾರಪ್ಪ ಕ್ರಿಮಿ ನಾಶಕವನ್ನು ಸೇವಿಸಲು ಮುಂದಾಗಿ ಸುಮ್ಮನಾಗಿದ್ದಾನೆ. ಆದಾದ ನಂತರ ಒಂದು ದೊಡ್ಡ ಡ್ರಾಮವೇ ನಡೆದಿದೆ ನೋಡಿ.. ರೈತ ಕುಮಾರಪ್ಪ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎಂಬ ಸುದ್ದಿ ಹರಡುತ್ತಿದ್ದಂತೆ ಸಾಂತ್ವಾನ ಹೇಳಲು ಬಂದ ರೈತ ಮುಖಂಡರು ಹಾಗೂ ಮಾಧ್ಯಮ ವರದಿಗಾರರು. ಈಗ ಕ್ಯಾಮೆರಾ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಟನೆ ಮಾಡಿ, ವೀಡಿಯೋ ಮಾಡುತ್ತೇವೆ ಎಂದಿದ್ದಾರೆ.. ಅದರಂತೆ ಎರಡು ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವ ನಾಟಕವಾಡುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗಿದೆ.
Video :
https://youtu.be/PLj6g4_-UwU
POPULAR STORIES :
ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್.. ಸ್ಪೀಡ್ ಕಳೆದುಕೊಳ್ಳುತ್ತಿದೆ ಜಿಯೋ ಸಿಮ್..!
ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಶ್ವಿನ್ ನಂ.1 ಬೌಲರ್..!
60 ಕೋಟಿ ಹರಾಜು ಕೂಗಿ ನಂಬರ್ ಪ್ಲೇಟ್ ಪಡೆದ ಭಾರತೀಯ ಉದ್ಯಮಿ..!
ಕಾಂಪೌಂಡ್ ವಿಚಾರವಾಗಿ ಎರಡು ಕುಟುಂಬಗಳ ಸಿನಿಮೀಯ ರೀತಿಯಲ್ಲಿ ಬಡಿದಾಟ..!
ಲಾರಿ ವಾಹನ ಚಾಲಕರ ದಿಢೀರ್ ಮುಷ್ಕರ: ಇಂದು ಪೆಟ್ರೋಲ್, ಡೀಸೆಲ್ ಸಿಗೋದು ಡೌಟ್..!