ಯೆಮನ್ನ ಕರಾವಳಿ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವ ಉಗ್ರರನ್ನು ಸದೆಬಡೆಯಲು ಅಲ್ಲಿನ ಸರ್ಕಾರ ಕಾರ್ಯಚರಣೆ ಕೈಗೊಂಡಿದ್ದು ಘಟನೆಯಲ್ಲಿ ಸೇನಾ ಪಡೆಗಳು ಹಾಗೂ ಬಂಡುಕೋರರು ಸೇರಿದಂತೆ 70ಕ್ಕೂ ಅಧಿಕ ಜನರು ಮೃತಪಟ್ಟಿದ್ದು ಅನೇಕ ಮಂದಿಗೆ ಗಂಭೀರ ಗಾಯಗಳಾಗಿವೆ. ಬಾಬ್ ಅಲ್-ಮನ್ದಬ್ ಜಲ ಸಂಧಿ ಬಳಿ ಸೌದಿ ನೇತೃತ್ವದ ಮಿತ್ರ ಪಡೆಗಳು ನಡೆಸಿದ ವಾಯು ದಾಳಿ ಮತ್ತು ಕದನದಲ್ಲಿ 50ಕ್ಕೂ ಹೆಚ್ಚು ಶಿಯಾ ಹುತಿ ಬಂಡುಕೋರರು ಮತ್ತು ಮಾಜಿ ಅಧ್ಯಕ್ಷ ಅಲಿ ಅಬ್ದುಲ್ಲಾ ಸಾಲ್ಹೆಗೆ ನಿಷ್ಠೂರರಾಗಿರುವ ಯೋಧರು ಮೃತಪಟ್ಟಿದ್ದಾರೆ. ಕಾರ್ಯಾಚರಣೆಯಲ್ಲಿ ಮೃತಪಟ್ಟವರಲ್ಲಿ 14 ಜನ ಸೇನಾ ಸದಸ್ಯರುಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಕೆಂಪು ಸಮುದ್ರ ಮತ್ತು ಹಿಂದೂ ಮಹಾ ಸಾಗರ ಮಧ್ಯೆ ಸಂಪರ್ಕ ಕಲ್ಪಿಸುವ ಪ್ರಮುಖ ಜಲಮಾರ್ಗವಾದ ಬಾಬ್ ಅಲ್-ಮನ್ದಬ್ ಸಮೀಪದ ಧುಬಾಯ್ ಜಿಲ್ಲೆಯನ್ನು ವಶ ಪಡಿಸಿಕೊಳ್ಳಲು ಜ. 17ರಿಂದ ಸೇನಾ ಪಡೆಗಳು ದಾಳಿ ನಡೆಸುತ್ತಿವೆ. ಮಿತ್ರ ಪಡೆಗಳ ಯುದ್ದ ವಿಮಾನಗಳು ಮತ್ತು ಅಪಾಚೆ ಆಕ್ರಮಣಕಾರಿ ಹೆಲಿಕ್ಯಾಪ್ಟರ್ಗಳು, ಮೋಖಾ ಕರಾವಳಿ ತೀರಗಳತ್ತ ಮುನ್ನುಗ್ಗುತ್ತಿರುವ ಹದಿ ಪರ ಸೇನಾ ಯೋಧರ ಬೆಂಬಲ ನೀಡಲು ಬಂಡುಕೋರರ ಮೇಲೆ ದಾಳಿ ನಡೆಸಿವೆ. ಇದೇ ವೇಳೆ ಉಗ್ರರು ಅಡಗಿಸಿಟ್ಟಿದ್ದ ನೆಲಬಾಂಬ್ಗಳು ಸ್ಫೋಟಗೊಂಡು ಅಧಿಕ ಸಂಖ್ಯೆಯ ಸಾವು ನೋವಿಗೆ ಕಾರಣವಾಗಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಹಂಪಿ ಸನ್ಲೈಟ್ & ಶ್ಯಾಡೋಸ್ ಚಿತ್ರಪ್ರದರ್ಶನ
ಈ ಬಾರಿಯ ಬಿಗ್ಬಾಸ್ ಫೈನಲ್ ಗೆಸ್ಟ್ ಯಾರು ಗೊತ್ತಾ..?
ಮಾಜಿ ಕ್ರಿಕೆಟಿಗ ವೀರು ಈಗ ಜಬರ್ದಸ್ತ್ ಸಿಂಗರ್
ಜಯಲಲಿತ ಜೀವನಾಧಾರಿತ ಸಿನಿಮಾ ಮಾಡ್ತಾರಂತೆ ಆರ್.ಜಿ.ವಿ..!
LIVE : ಬಿಗ್ಬಾಸ್ ಕನ್ನಡ ಸೀಸನ್-04 ಈ ಮೂವರಲ್ಲಿ ಫೈನಲ್ ತಲಪುವವರು ಯಾರು.?