ಅಂದು ನಾಲ್ವರಿಗೆ, ಈಗ 10 ಜನರಿಗೆ ಪುನೀತ್ ಕಣ್ಣುಗಳಿಂದ ದೃಷ್ಟಿ

Date:

ಪುನೀತ್‌ ರಾಜ್‌ಕುಮಾರ್‌ ಅವರನ್ನು ನಮ್ಮನ್ನು ದೈಹಿಕವಾಗಿ ಬಿಟ್ಟು ಹೋಗಿದ್ದಾರೆ. ಆದರೆ ಅವರ ಸಿನಿಮಾಗಳು ಅವರ ಆದರ್ಶಗಳು ಅವರ ಕೆಲಸಗಳು ನಮ್ಮ ಮುಂದೆ ಸದಾಕಾಲ ಇದ್ದೇ ಇರುತ್ತದೆ. ಈ ನಡುವೆ ಪುನೀತ್‌ ಅವರು ನೇತ್ರದಾನ ಮಾಡಿದ್ದು, ಅವರ ಪುಣ್ಯದ ಕೆಲಸದಿಂದ ಈಗಾಗಲೇ ನಾಲ್ವರು ಈ ಜಗತ್ತನ್ನು ನೋಡುತ್ತಿದಿದ್ದಾರೆ.

ಈ ನಡುವೆ ಪುನೀತ್‌ ಅವರ ನೇತ್ರದಿಂದ ತೆಗೆದುಕೊಂಡಿದ್ದ ಇತರೆ ಅಗಾಂಶಗಳಿಂದ ಇನ್ನೂ 10 ಮಂದಿಗೆ ಸಹಾಯವಾಗಲಿದೆ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ವೈದ್ಯರು ಶ್ರಮಿಸುತ್ತಿದ್ದಾರೆ ಎನ್ನಲಾಗಿದೆ.
ಹೌದು, ಪುನೀತ್‌ ಅವರ ಕಣ್ಣಿನಿಂದ ಸ್ಟೆಮ್ ಸೆಲ್ (ಕಣ್ಣಿನ ರಿಮ್ ಭಾಗದಿಂದ ) ಗಳನ್ನು ಪ್ರಯೋಗಲಾಯದಲ್ಲಿ, ಕಸಿ ಮಾಡಲು ನಾರಾಯಣ ನೇತ್ರಾಲಯ ವೈದ್ಯರು ಮುಂದಾಗಿದ್ದು, ಈ ಪ್ರಯೋಗ ಮಲ್ಟಿಪಲ್ ಆಗಲು ಇನ್ನೂ ಕೆಲವು ದಿನಗಳು ಬೇಕಾಗುತ್ತದೆ. ಹೀಗಾಗಿ ಕನ್ನಡಿಗರ ಮುದ್ದಿನ ಅಪ್ಪು, ಕನ್ನಡ ನಾಡನ್ನು ಮತ್ತೊಬ್ಬರ ಕಣ್ಣಿನಲ್ಲಿ ನೋಡಲಿದ್ದು, ಮತ್ತೆ ಕನ್ನಡ ನಾಡಿನಲ್ಲಿ ಅಭಿಮಾನಿ ದೇವರುಗಳ ಕಣ್ಣಿನಲ್ಲಿ ನಾಡನ್ನು ನೋಡಲಿದ್ದಾರೆ.

. ಪಟಾಕಿ ಸಿಡಿತದಿಂದ ದೃಷ್ಟಿ ಹಾನಿಯಾಗಿದ್ದರೆ ನಿವಾರಿಸಲು ಸ್ಟೆಮ್ ಸೆಲ್ ಚಿಕಿತ್ಸೆಯು ಉತ್ತಮವಾಗಿದೆ. ಉದಾಹರಣೆಗೆ ರೆಟಿನಲ್ ಪಿಗ್ಮೆಂಟ್ ಎಪಿಥೇಲಿಯಲ್ (RPE) ಕೋಶಗಳು. ಕಣ್ಣಿನ ಕಾಯಿಲೆಯಿಂದಾಗಿ ಹಾನಿಗೊಳಗಾದ ಅಥವಾ ಕಳೆದುಹೋದ ಜೀವಕೋಶಗಳನ್ನು ಬದಲಿಸಲು ಹೊಸ RPE ಕೋಶಗಳನ್ನು ಮತ್ತೆ ಕಣ್ಣಿನೊಳಗೆ ಚುಚ್ಚಲಾಗುತ್ತದೆ

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...