ಆಪ್ತ ಸ್ನೇಹಿತನನ್ನೇ ಹತ್ಯೆ ಮಾಡಿದ ಆರೋಪ: ಅಕ್ರಮ ಸಂಬಂಧವೇ ಹತ್ಯೆಗೆ ಕಾರಣ?
ಕಲಬುರಗಿ: “ನೀನೇ ನನ್ನ ಜೀವ” ಎಂದು ಹೇಳುತ್ತಿದ್ದ ಆಪ್ತ ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮುರಡಿ ಗ್ರಾಮದಲ್ಲಿ ನಡೆದಿದೆ. ಅಂಬರೀಶ್ (28) ಹತ್ಯೆಗೆ ಬಲಿಯಾದ ಯುವಕನಾಗಿದ್ದು, ಆತನ ಸ್ನೇಹಿತ ಅಜಯ್ ಹಾಗೂ ಇನ್ನೊಬ್ಬರಿಂದ ಈ ಕ್ರೂರ ಕೃತ್ಯ ಎಸಗಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ,
ಅಜಯ್ ಪತ್ನಿಯೊಂದಿಗೆ ಅಂಬರೀಶ್ ಅಕ್ರಮ ಸಂಬಂಧ ಹೊಂದಿದ್ದ ಎಂಬ ಶಂಕೆ ಇದ್ದುದರಿಂದ, ಕೆಲ ದಿನಗಳ ಹಿಂದೆ ಅಜಯ್ ಪತ್ನಿ ಮನೆ ತೊರೆದಿದ್ದರು. ಈ ಹಿನ್ನೆಲೆಯಲ್ಲೇ ಅಂಬರೀಶ್, ತನ್ನ ಸ್ನೇಹಿತನ ಪತ್ನಿಯನ್ನು ಮರುಸಂಸ್ಥಾಪನೆ ಮಾಡಲು ಬೆಂಗಳೂರಿನಿಂದ ಮುರಡಿಗೆ ಕರೆದುಕೊಂಡು ಬಂದಿದ್ದ.
ಆದರೆ, ಈ ಸಂದರ್ಭವನ್ನೇ ಬಳಸಿಕೊಂಡು ಅಜಯ್, ತನ್ನ ತಾಯಿನ ಮನೆಯಲ್ಲಿ ಅಂಬರೀಶ್ ಅನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹತ್ಯೆ ನಡೆಸಿದ ಬಳಿಕ ಅಜಯ್ ನೇರವಾಗಿ ನರೋಣಾ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.