ಈ ಸ್ಟೋರಿ ಓದಿದ್ರೆ ಬಾಲಕನಿಗೆ ಸೆಲ್ಯೂಟ್​ ಹೊಡೀತೀರಾ..? 8ರ ಪೋರನದ್ದು ಇದು ಸಾಹಸವೇ..!

Date:

ಇದು ಮನಕಲಕುವ ಸ್ಟೋರಿ.. ದೂರದಲ್ಲೆಲ್ಲೋ ನಡೆದ ಘಟನೆ ಅಲ್ಲ.. ನಮ್ಮ ತುಮಕೂರಿನಲ್ಲಿ ನಡೆದ ಹೃದಯವಿದ್ರಾವಕ ಘಟನೆ…
ಆ ಪುಟ್ಟ ಬಾಲಕನ ಹೆಸರು ಪುನೀತ್​ಕುಮಾರ್ ಎಂದು. ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಬಳಿ ಈ 8 ಪೋರ ತನ್ನ ತಂದೆ ಶಿವಕುಮಾರ್ ಅವರ ಜೊತೆಯಲ್ಲಿ ಟಾಟಾ ಎಸ್​ ವಾಹನದಲ್ಲಿ ಹೋಗುತ್ತಿದ್ದ. ಆ ಸಂದರ್ಭದಲ್ಲಿ ಶಿವಕುಮಾರ್ ಅವರಿಗೆ ದಿಢೀರ್ ಹೃದಯಾಘಾತವಾಗಿದೆ. ಅಪ್ಪನಿಗೆ ಹೃದಯಾಘಾತವಾಗಿದೆ, ವಾಹನ ಓಡಿಸಲು ಆಗುವುದಿಲ್ಲ ಎಂದು ತಿಳಿದು, ಆ್ಯಕ್ಸಿಡೆಂಟ್ ಆಗಬಹುದು ಎಂಬುದನ್ನು ಅರಿತು ಸಮಯಪ್ರಜ್ಞೆ ಮೆರೆದಿದ್ದಾನೆ.
ತಂದೆ ಶಿವಕುಮಾರ್ ಹೃದಯಾಘಾತದಿಂದ ಕುಸಿದ ಕೂಡಲೇ ಚಲಿಸುತ್ತಿದ್ದ ಟಾಟಾ ಎಸ್​ ವಾಹನವನ್ನು ರಸ್ತೆ ಪಕ್ಕಕ್ಕೆ ತಿರುಗಿಸಿದ್ದಾನೆ. ಈತನ ಸಮಯಪ್ರಜ್ಞೆಗೆ ಎಲ್ಲಾಕಡೆ ಮೆಚ್ಚುಗೆ ವ್ಯಕ್ತವಾಗಿದೆ.
ತಂದೆಗೆ ಏನೋ ಆಗಿದೆ ಎಂದು ಆಘಾತವಾದರೂ ಆ ಸಮಯದಲ್ಲೂ ಬಾಲಕ ಅಪಘಾತವಾಗಬಹುದು ಎಂದು ಎಚ್ಚರಿಕೆವಹಿಸಿ ಆ ಕ್ಷಣಕ್ಕೇನೆ ವಾಹನವನ್ನು ರಸ್ತೆ ಬದಿ ಸರಿಸಿದ್ದಾನೆ ಇದರ ಬಗ್ಗೆ ಪ್ರಶಂಸಿಬೇಕು, ಆದರೆ, ಆತ ಪಟ್ಟ ನೋವು ಮಾತ್ರ ಯಾವ ಶತ್ರುಗೂ ಬೇಡ..!

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌ ಸೇರಿ 70 ಮಂದಿಗೆ ಗೌರವ

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌...

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ ಕಲಬುರಗಿ: ಚಿತ್ತಾಪುರದಲ್ಲಿ ನವೆಂಬರ್...

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ...

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ ಬೆಂಗಳೂರು:...