ರಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಅಪ್ರಸ್ತುತವಾಗಿದ್ದು, ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಆ ಎರಡೂ ಪಕ್ಷಗಳು ಏಕಾಂಗಿಯಾದರೂ ಉಪಚುನಾವಣೆ ಎದುರಿಸಲಿ, ಇಲ್ಲವೇ ಒಟ್ಟಾಗಿ ಎದುರಿಸಲು ಯಾವುದೇ ತೊಂದರೆ ಇಲ್ಲ. ಉಪಚುನಾವಣೆ ಮುಗಿದ ನಂತರ ನಮ್ಮ ಸರ್ಕಾರ ಬಹುಮತದಿಂದ ಪೂರ್ಣಾವಧಿ ಪೂರೈಸಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಅನರ್ಹ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಚುನಾವಣೆಯಲ್ಲಿ ಅವರಿಗೆ ಪ್ರಾಮುಖ್ಯತೆ ನೀಡಿ ಅವರು ಹೇಳಿದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು.ಅವರಿಗೆ ಸಮಾಧಾನವಾಗುವ ರೀತಿಯಲಿ ಚುನಾವಣೆಯನ್ನು ನಡೆಸಲಾಗುತ್ತದೆ. ಅನರ್ಹ ಶಾಸಕರ ಪ್ರಕರಣ ಇನ್ನೂ ಸುಪ್ರೀಂಕೋರ್ಟ್ನಲ್ಲಿ ಬಾಕಿ ಇದ್ದು, ತೀರ್ಪನ್ನು ಕಾದು ನೋಡುತ್ತಿದ್ದೇವೆ ಎಂದರು.