ಐಪಿಎಲ್ : ಧೋನಿಯ ಈ ದಾಖಲೆ ಮುರಿಯುವುದು ಸುಲಭದ ಮಾತಲ್ಲ!

Date:

ಕೇವಲ ಕಳೆದ ಬಾರಿಯ ಒಂದು ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿದ ಎಂಎಸ್ ಧೋನಿ ಅವರ ನಾಯಕತ್ವದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ಎದುರಾದವು. ಬಹುಷಃ ಧೋನಿ ಅವರು ಐಪಿಎಲ್ ಇತಿಹಾಸದಲ್ಲಿ ಸ್ಥಾಪಿಸಿರುವ ದಾಖಲೆಗಳನ್ನು ಟೀಕಾಕಾರರು ಮರೆತಿರಬಹುದು. ಧೋನಿ ನಿರ್ಮಿಸಿರುವ ಈ ಒಂದು ರೆಕಾರ್ಡ್ ಮುರಿಯುವುದು ಸುಲಭದ ಮಾತಲ್ಲ. ಇದುವರೆಗೂ ನಡೆದಿರುವ ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ಗೆಲುವು ಸಾಧಿಸಿರುವ ನಾಯಕ ಎಂಬ ಹೆಗ್ಗಳಿಕೆಯನ್ನು ಧೋನಿ ಹೊಂದಿದ್ದಾರೆ. ಧೋನಿ ನಾಯಕತ್ವದಲ್ಲಿ 110 ಐಪಿಎಲ್ ಪಂದ್ಯಗಳನ್ನು ಗೆಲ್ಲಿಸಿದ್ದಾರೆ , ಇದು ಐಪಿಎಲ್ ಇತಿಹಾಸದಲ್ಲಿಯೇ ನಾಯಕನೊಬ್ಬ ಗೆಲ್ಲಿಸಿರುವ ಅತಿ ಹೆಚ್ಚು ಪಂದ್ಯ. ಇಷ್ಟು ಪಂದ್ಯಗಳನ್ನು ಗೆಲ್ಲಿಸುವ ಸಾಹಸವನ್ನು ಇದುವರೆಗೂ ಬೇರೆ ಯಾವ ನಾಯಕನೂ ಮಾಡಿಲ್ಲ , ಈ ದಾಖಲೆಯನ್ನು ಮುರಿಯುವುದಿರಲಿ ಇದರ ಹತ್ತಿರಕ್ಕೂ ಸಹ ಯಾರೂ ಬಂದಿಲ್ಲ.

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ನಾಯಕನಾಗಿ ಇದುವರೆಗೂ 188 ಪಂದ್ಯಗಳನ್ನು ಆಡಿದ್ದಾರೆ , ಇದರಲ್ಲಿ 110 ಪಂದ್ಯಗಳಲ್ಲಿ ಧೋನಿ ತಂಡ ಜಯಗಳಿಸಿದ್ದು 77 ಪಂದ್ಯಗಳಲ್ಲಿ ಸೋಲುಂಡಿದೆ ಮತ್ತು ಫಲಿತಾಂಶ ದೊರಕದ ಪಂದ್ಯದ ಸಂಖ್ಯೆ 1. ಐಪಿಎಲ್ ತಂಡವೊಂದರ ನಾಯಕನಾಗಿ ಧೋನಿ ಮಾಡಿರುವ ಈ ಸಾಧನೆಯನ್ನು ಬೇರೆ ಯಾವ ನಾಯಕರೂ ಸಹ ಮಾಡಲಾಗಿಲ್ಲ. ಹೀಗಾಗಿ ಎಂಎಸ್ ಧೋನಿ ಐಪಿಎಲ್ ಬೆಸ್ಟ್ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ.

 

 

ನಾಯಕನಾಗಿ ಅತಿಹೆಚ್ಚು ಪಂದ್ಯಗಳಲ್ಲಿ ಜಯ ಸಾಧಿಸಿರುವ ಟಾಪ್ 4 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ ನೋಡಿ

1. ಎಂಎಸ್ ಧೋನಿ :

ಎಂ ಎಸ್ ಧೋನಿ ನಾಯಕನಾಗಿ 188 ಪಂದ್ಯಗಳನ್ನಾಡಿದ್ದು ಇದರಲ್ಲಿ 110 ಜಯ & 77 ಸೋಲುಗಳಿವೆ. ಒಂದು ಪಂದ್ಯ ಫಲಿತಾಂಶ ರಹಿತವಾಗಿದೆ.

2. ಗೌತಮ್ ಗಂಭೀರ್ :

ಧೋನಿ ಬಿಟ್ಟರೆ ಗೌತಮ್ ಗಂಭೀರ್ ನಾಯಕನಾಗಿ ಅತಿಹೆಚ್ಚು ಐಪಿಎಲ್ ಪಂದ್ಯಗಳನ್ನು ಗೆದ್ದಿದ್ದಾರೆ. 129 ಪಂದ್ಯಗಳನ್ನು ನಾಯಕನಾಗಿ ಆಡಿರುವ ಗಂಭೀರ್ 71 ಪಂದ್ಯಗಳಲ್ಲಿ ಗೆದ್ದು 57 ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ ಮತ್ತು ಒಂದು ಪಂದ್ಯ ಡ್ರಾ ಆಗಿದೆ.

3. ರೋಹಿತ್ ಶರ್ಮಾ :

5 ಐಪಿಎಲ್ ಟ್ರೋಫಿಗಳನ್ನು ಹೊಂದಿರುವ ಏಕೈಕ ನಾಯಕ ಎಂಬ ಹೆಗ್ಗಳಿಕೆ ಹೊಂದಿರುವ ರೋಹಿತ್ ಶರ್ಮಾ 116 ಪಂದ್ಯಗಳನ್ನು ನಾಯಕನಾಗಿ ಆಡಿದ್ದಾರೆ. ಇದರಲ್ಲಿ 68 ಪಂದ್ಯಗಳಲ್ಲಿ ಜಯಿಸಿ , 44 ಪಂದ್ಯಗಳಲ್ಲಿ ಸೋಲನ್ನುಂಡಿದ್ದಾರೆ ಮತ್ತು 4 ಪಂದ್ಯಗಳು ಡ್ರಾ ಆಗಿವೆ.

4. ವಿರಾಟ್ ಕೊಹ್ಲಿ :

ನಾಯಕನಾಗಿ ಅತಿಹೆಚ್ಚು ಐಪಿಎಲ್ ಪಂದ್ಯ ಗೆದ್ದಿರುವ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಇದುವರೆಗೂ 125 ಐಪಿಎಲ್ ಪಂದ್ಯಗಳನ್ನಾಡಿರುವ ಕೊಹ್ಲಿ 55 ಪಂದ್ಯಗಳಲ್ಲಿ ಜಯಗಳಿಸಿ, 63 ಪಂದ್ಯಗಳಲ್ಲಿ ಸೋಲನ್ನುಂಡಿದ್ದಾರೆ ಹಾಗೂ 3 ಪಂದ್ಯಗಳು ಡ್ರಾ ಆಗಿದ್ದು 4 ಪಂದ್ಯಗಳಲ್ಲಿ ಫಲಿತಾಂಶ ಸಿಕ್ಕಿಲ್ಲ.

Share post:

Subscribe

spot_imgspot_img

Popular

More like this
Related

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ ಸಜೀವ ದಹನ

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ...

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...