ಕತ್ತೆ ಹಾಲಿಗೆ ಹೆವಿ ಡಿಮ್ಯಾಂಡ್!; ಲೀಟರ್ ಬೆಲೆ ಅಬ್ಬಬ್ಬಾ!

Date:

ನಿಮ್ಮಮ್ಮ ನಿನಗೆ ಕತ್ತೆ ಹಾಲು ಕುಡಿಸಿದ್ರೆನೋ ಅಂತಾ ಬೈಯುವ ಮಂದಿಯೆಲ್ಲಾ ಈ ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕತ್ತೆ ಹಾಲಿಗೆ ಮುಗಿಬಿದ್ದಿದ್ದಾರೆ.

ಚಿಕ್ಕಮಗಳೂರು ನಗರದ ಬೀದಿ ಬೀದಿಗಳಲ್ಲಿ ಕತ್ತೆ ಹಾಲು ಕುಡಿಯುವವರು ಕಳೆದ ಒಂದು ವಾರದಿಂದ ಕಂಡು ಬರುತ್ತಿದ್ದಾರೆ. ದೊಡ್ಡವರು, ಸಣ್ಣವರು ಎನ್ನದೇ ಆನ್‌ಸ್ಪಾಟ್ ಕತ್ತೆ ಹಾಲನ್ನು ಕರೆದ ತಕ್ಷಣ ಹೊಳ್ಳೆಗೆ 50 ರೂಪಾಯಿ ಕೊಟ್ಟು ಕುಡಿಯುವ ದೃಶ್ಯ ಸಾಮಾನ್ಯವಾಗಿದೆ. ಕಾಫಿನಾಡಲ್ಲಿ ಈಗ ಕತ್ತೆ ಹಾಲಿಗೆ ಫುಲ್ ಡಿಮ್ಯಾಂಡ್ ಬಂದಿದ್ದು, ಕಳೆದ ಒಂದು ವಾರದಿಂದ ನಗರದಲ್ಲಿ ಕತ್ತೆಗಳನ್ನು ಹಿಡಿದುಕೊಂಡು ಕತ್ತೆ ಹಾಲಿನ ತಾಕತ್ತಿನ ಬಗ್ಗೆ ಬೀದಿ ಬೀದಿಗಳಲ್ಲಿ ಸಾರುತ್ತಾ ಹಾಲನ್ನು ಮಾರಾಟ ಮಾಡುವ ಮಂದಿ ನಗರದಲ್ಲಿ ಬೀಡು ಬಿಟ್ಟಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಡಾಂಕಿಗೆ ಫುಲ್ ಡಿಮ್ಯಾಂಡ್ ಮತ್ತು ನಗರದಲ್ಲಿ ಇಮೇಜ್ ಕ್ರಿಯೇಟ್ ಆಗಿದೆ.

 

ಕತ್ತೆ ಹಾಲನ್ನು ಯಾರು ಬೇಕಾದರೂ ಕುಡಿಯಬಹುದಾಗಿದ್ದು, ಮಕ್ಕಳ ಎಲ್ಲಾ ತರಹದ ವ್ಯಾದಿಗೆ ಇದು ರಾಮಬಾಣ ಅಂತೆ. ಕೆಮ್ಮು, ಶೀತ, ನೆಗಡಿ, ಕಫ ಹೀಗೆ ಹಲವು ಸಣ್ಣಪುಟ್ಟ ಖಾಯಿಲೆಗಳಿಗೆ ಕತ್ತೆ ಹಾಲು ಸಂಜೀವಿನಿ ಎಂಬ ಮಾತು ಕತ್ತೆ ಬೀದಿಗೆ ಬರುತ್ತಿದ್ದಂತೆ ಪ್ರತಿ ಬೀದಿಗಳಲ್ಲಿ ಶುರುವಾಗುತ್ತದೆ. ಕತ್ತೆ ಹಾಲನ್ನು ಮಕ್ಕಳಿಗೆ ಕುಡಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆಂದು ವೈಜ್ಞಾನಿಕವಾಗಿಯೂ ರುಜುವಾತಾಗಿದೆ ಎಂಬ ಅಭಿಪ್ರಾಯದಿಂದ ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ ಕತ್ತೆ ಹಾಲಿಗೆ ಫುಲ್ ಡಿಮ್ಯಾಂಡ್ ಬಂದಿದೆ.

ಡೈರಿಯಲ್ಲಿ ಒಂದು ಲೀಟರ್ ಹಾಲಿಗೆ 48 ರೂಪಾಯಿ ಕೊಟ್ಟು ಹಾಲು ಖರೀದಿಸಲು ಹಿಂದೆ ಮುಂದೆ ನೋಡುವ ಮಂದಿ ಕತ್ತೆ ಹಾಲಿಗೆ ಎಷ್ಟು ಬೇಕಾದರೂ ಖರ್ಚು ಮಾಡಲು ಸಿದ್ದರಿದ್ದಾರೆ. ಹೊಳ್ಳೆಗೆ 50 ರೂಪಾಯಿ, ಒಂದು ಕಾಫಿ ಕುಡಿಯುವ ಲೋಟದಷ್ಟು ಹಾಲಿಗೆ 100 ರೂಪಾಯಿ ಕೊಟ್ಟು ಕುಡಿಯುತ್ತಿದ್ದಾರೆ. ಹೀಗೆ ಲೆಕ್ಕಾಚಾರ ಮಾಡಿದರೆ ಒಂದು ಲೀಟರ್ ಕತ್ತೆ ಹಾಲಿಗೆ ಐದು ಸಾವಿರ ಆಗುತ್ತದೆ. ಆಂಧ್ರ ಪ್ರದೇಶದಿಂದ ಚಿಕ್ಕಮಗಳೂರಿಗೆ ಬಂದಿರುವ ಜನ ಕತ್ತೆ ಹಾಲಿನ ಮಾರಾಟದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. 20 ಜನ 20 ಕತ್ತೆಯೊಂದಿಗೆ ಚಿಕ್ಕಮಗಳೂರು ನಗರಕ್ಕೆ ಬಂದಿದ್ದಾರೆ. ಒಬ್ಬೊಬ್ಬರು ಒಂದೊಂದು ಕತ್ತೆಯೊಂದಿಗೆ ಒಂದೊಂದು ಏರಿಯಾಗೆ ಭೇಟಿ ನೀಡುತ್ತಿದ್ದಾರೆ. ಇಡೀ ದಿನ ನಗರ ಸೇರಿದಂತೆ ಹಳ್ಳಿ- ಹಳ್ಳಿ ಸುತ್ತುತ್ತಿದ್ದಾರೆ. ಬೆಳಗ್ಗೆ 6 ಗಂಟೆಗೆ ಹೋಗಿ 10- 11 ಗಂಟೆಗೆ ವೇಳೆಗೆ 800- 1000 ದುಡಿಯುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...