ಕನ್ನಡದ ಮೊನಾಲಿಸಾ ಮೇಘನಾ ಗಾವಂಕರ್ ಅವರು ಸದ್ದಿಲ್ಲದೆ ಒಂದೊಂದೇ ಸಿನಿಮಾಗಳ ಕೆಲಸಗಳನ್ನು ಮುಗಿಸುತ್ತಿದ್ದಾರೆ. 2010ರಲ್ಲಿ ತೆರೆಕಂಡ ನಮ್ ಏರಿಯಾಲಿ ಒಂದ್ದಿನ ಎನ್ನುವ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟವರು. ನಂತರ 2011ರಲ್ಲಿ ವಿನಾಯಕ ಗೆಳೆಯರ ಬಳಗ ಹಾಗೂ ತುಘಲಕ್ ಎಂಬ ಎರಡು ಸಿನಿಮಾಗಳಲ್ಲಿ ನಟಿಸಿದ್ದರು.
2012ರಲ್ಲಿ ರಿಲೀಸ್ ಆದ ಚಾರ್ಮಿನಾರ್ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾದಲ್ಲಿ ಮೇಘನಾ ರಾಧೆಯಾಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ರು. 2012ರಲ್ಲಿ ಭಕ್ತ ಶಂಕರ, 2016ರಲ್ಲಿ ಸಿಂಪಲ್ ಆಗಿ ಇನ್ನೊಂದು ಲವ್ ಸ್ಟೋರಿ ಸಿನಿಮಾಗಳಲ್ಲಿ ಅಭಿನಯಿಸಿದ್ರು.
ಇದೀಗ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಸದ್ದಿಲ್ಲದೆ ಈ ಸಿನಿಮಾದ ಶೂಟಿಂಗ್ ಮುಗಿಸಿರುವ ಮೇಘನಾ ಗಾವಂಕರ್ ಅವರು ಹೊಸ ಸಿನಿಮಾಕ್ಕೆ ಸಹಿ ಮಾಡಿದ್ದಾರೆ. ಆ ಸಿನಿಮಾದ ಹೆಸರಿನ್ನೂ ಫೈನಲ್ ಆಗಿಲ್ಲ. ಸಂತೋಷ್ ಜಿ ಎನ್ನುವ ಹೊಸ ನಿರ್ದೇಶಕರಿಗೆ ಮೇಘನಾ ಕಾಲ್ ಶೀಟ್ ಕೊಟ್ಟಿದ್ದಾರೆ.
ಸಂತೋಷ್ ಜಿ ಆ ಹೊಸ ಡೈರೆಕ್ಟರ್ ಸಿನಿಮಾ ಮಾಡ್ತಿದ್ದಾರೆ. ಅವರು ಅನೇಕ ಕಿರುಚಿತ್ರಗಳನ್ನು ಮಾಡಿದ್ದಾರೆ. ಅವರ ಚೊಚ್ಚಲ ಸಿನಿಮಾಕ್ಕೆ ಮೇಘನಾ ಗಾವಂಕರ್ ನಾಯಕಿ. ಈ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಆಗಿದೆ ಎಂದು ತಿಳಿದುಬಂದಿದೆ, ಜೂದಾ ಸ್ಯಾಂಡಿ ಸಂಗೀತ6 ನೀಡಿದ್ದಾರೆ. ರಾಕೇಶ್ ಸಿನಿಮಾಟೋಗ್ರಪಿ ಹೊಣೆ ಹೊತ್ತಿದ್ದಾರೆ. ಆದರೆ, ಸಿನಿಮಾಕ್ಕಿನ್ನೂ ಹೆಸರಿಟ್ಟಿಲ್ಲ ಶೀಘ್ರದಲ್ಲೇ ಸಿನಿಮಾ ಹೆಸರು ಘೋಷಣೆಯಾಗಿ ಸೆಟ್ಟೇರಲಿದೆ.
ಕನ್ನಡದ ಮೊನಾಲಿಸಾ ಮೇಘನಾರ ಮುಂದಿನ ಚಿತ್ರ ಯಾವ್ದು ಗೊತ್ತಾ?
Date: