ಕನ್ನಡಿಗ ರಾಹುಲ್​ ಕಂಡ್ರೂ ರೋಹಿತ್​ಗೆ ಅಷ್ಟಕಷ್ಟೇನಾ..?

Date:

ಟೀಮ್ ಇಂಡಿಯಾ ವಿಶ್ವ ಕ್ರಿಕೆಟನ್ನು ಆಳುತ್ತಿದೆ. ಆದರೆ, ತಂಡದೊಳಗೆ ಎಲ್ಲವೂ ಅಂದುಕೊಂಡಂತೆ ಇಲ್ಲ ಎಂಬುದು ಜಗಜ್ಜಾಹಿರವಾಗಿದೆ. ನಾಯಕ ವಿರಾಟ್ ಕೊಹ್ಲಿ, ಏಕದಿನ ಮತ್ತು ಟಿ20 ಉಪನಾಯಕ ರೋಹಿತ್ ಶರ್ಮಾ ನಡುವೆ ಮನಸ್ತಾಪ ಇದೆ ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.
2013 ರಲ್ಲಿ ವೆಸ್ಟ್​ ಇಂಡೀಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ರೋಹಿತ್ ಶರ್ಮಾ ತಮ್ಮ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದರು. ಆದರೆ ಏಕದಿನ ಕ್ರಿಕೆಟ್​ನಲ್ಲಿ ಖಾಯಂ ಆದ ಹಿಟ್​ಮ್ಯಾನ್ ಟೆಸ್ಟ್ನಲ್ಲಿ ಕಾಣಿಸಿಕೊಳ್ಳುವುದು ಅಪರೂಪವಾಯಿತು. 2019 ಏಕದಿನ ವರ್ಲ್ಡ್​​ಕಪ್​​​ನಲ್ಲಿ ಅದ್ಭುತ ಪ್ರದರ್ಶನ ತೋರಿದ ಪರಿಣಾಮ ರೋಹಿತ್ ವೆಸ್ಟ್​ ಇಂಡೀಸ್ ವಿರುದ್ಧದ ಟೆಸ್ಟ್​ ಸರಣಿಗೆ ಸೆಲೆಕ್ಟ್ ಆಗಿದ್ದರು.


ಟೂರ್ನಿಗೆ ಆಯ್ಕೆಯಾದರೂ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರೂ ಸಹ ಎರಡೂ ಟೆಸ್ಟ್​ನಲ್ಲಿ ಆಡುವ 11ರ ಬಳಗದಲ್ಲಿ ಅವರನ್ನು ಆಡಿಸಲಿಲ್ಲ. ಇದರಿಂದ ಅವರು ಸಹಜವಾಗಿ ಬೇಸರಗೊಂಡಿದ್ದಾರೆ. ರೋಹಿತ್ ಅಭಿಮಾನಿಗಳೂ ಕೂಡ ಬೇಸರಗೊಂಡಿದ್ದು, . ಪದೇಪದೇ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ ಬೆಸ್ಟ್​ ಆತ್ಮೀಯ ಗೆಳೆಯ ಕನ್ನಡಿಗ ಕೆ ಎಲ್ ರಾಹುಲ್​ಗೆ ಅವಕಾಶ ನೀಡುವುದು ಬಿಟ್ಟು ರೋಹಿತ್​ರನ್ನು ಆಡಿಸಿ ಎಂಬ ಒತ್ತಾಯ ಸಹ ಮಾಡುತ್ತಿದ್ದಾರೆ.
ಇನ್​ಸ್ಟಾಗ್ರಾಂನಲ್ಲಿ ರೋಹಿತ್ ಹಾಗೂ ಕೆ ಎಲ್ ರಾಹುಲ್​ರ ಟೆಸ್ಟ್​ ಕ್ರಿಕೆಟ್​ನ ಅಂಕಿಅಂಶಗಳನ್ನು ಹಾಕಿ ರೋಹಿತ್ ಅತ್ಯುತ್ತಮ ಆಟಗಾರ ಎಂದು ಬಿಂಬಿಸಿದ್ದಾರೆ ರೋಹಿತ್ ಅಭಿಮಾನಿಗಳು ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್​ಗೆ ರೋಹಿತ್ ಲೈಕ್ ಮಾಡಿದ್ದಾರೆ.. ರೋಹಿತ್​ಗೆ ರಾಹುಲ್ ಕಂಡ್ರೂ ಅಷ್ಟಕಷ್ಟೇನಾ ಎಂಬ ಪ್ರಶ್ನೆಯನ್ನು ಈ ಒಂದು ಲೈಕ್ ಹುಟ್ಟು ಹಾಕಿದೆ.
ಟ್ವಿಟ್ಟರ್​​ನಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾರನ್ನು ಅನ್​ಫಾಲೋ ಮಾಡಿರುವ ರೋಹಿತ್​ ಶರ್ಮಾ. ರಾಹುಲ್​ ವೈಫಲ್ಯ ಕಂಡರೂ ಅವಕಾಶ ನೀಡುತ್ತಿರುವುದು ಏಕೆ?, ರೋಹಿತ್​ಗೆ ಅವಕಾಶ ನೀಡಿ ಎಂಬರ್ಥದಲ್ಲಿರುವ ಪೋಸ್ಟ್​ಗೆ ರೋಹಿತ್ ಲೈಕ್ ಮಾಡಿ ಮತ್ತೊಮ್ಮೆ ಇನ್ಸ್ಟಾಗ್ರಾಮ್​ನಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌ ಸೇರಿ 70 ಮಂದಿಗೆ ಗೌರವ

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌...

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ ಕಲಬುರಗಿ: ಚಿತ್ತಾಪುರದಲ್ಲಿ ನವೆಂಬರ್...

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ...

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ ಬೆಂಗಳೂರು:...