No menu items!
12.1 C
Munich
Saturday, May 2, 2026

ಗಣೇಶ ಮೂರ್ತಿ ತೆಗೆದುಕೊಂಡು ಹೊಗುವಾಗಾ ಭಾರೀ ಅನಾಹುತ ! ಏನ್ ಆಯ್ತು ಗೊತ್ತಾ ?

Must read

ಇಂದು ಬೆಳಗ್ಗೆ ಗಣೇಶ ಮೂರ್ತಿಯನ್ನು ತೆಗೆದುಕೊಂಡು ಹೋಗುವ ಸಮಯದಲ್ಲಿ ಭಾರಿ ಅನಾಹುತ ಒಂದು ಬೆಳಗಾವಿಯ ಭಾಗ್ಯ ನಗರದ ಮಾರ್ಗದಲ್ಲಿ ನಡೆದಿ
ಗಣಪತಿ ಮೂರ್ತಿ ಟ್ರ್ಯಾಕ್ಟರ್ನಲ್ಲಿ ತೆಗೆದುಕೊಂಡು ಹೋಗುವಾಗ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಜಿಲ್ಲಾಡಳಿತ ಆದೇಶವಿಲ್ಲದೆ ಗಣೇಶ ಮೂರ್ತಿಗಳನ್ನು ಸ್ಥಾಪಿಸಲು ಯಾರಿಗೂ ಅವಕಾಶವಿಲ್ಲವೆಂದು ಜಿಲ್ಲಾಡಳಿತವು ಈ ಹಿಂದೆಯೇ ಸೂಚನೆ ನೀಡಿದೆ.


ಆದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಸೂಚನೆ ನೀಡದೆ ಇಂಥ ಅನಾಹುತಕ್ಕೆ ಕಾರಣವಾಗಿದೆ.
ಮೂರ್ತಿ 10ಅಡಿ ಎತ್ತರವಾಗಿರುವುದರಿಂದ ತಂತಿ ತಗುಲುವ ಮುನ್ಸೂಚನೆ ಇದ್ದರೂ ಭಂಡ ಧೈರ್ಯ ಮಾಡಿ ಮೂರ್ತಿ ಸಾಗಿಸುವಾಗ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ದೂರಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತ ಅರವಿಂದ ಗದಗಕರ್, ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ಹೆಸ್ಕಾಂ ಜೊತೆ ಕೈಜೋಡಿಸಲು ಮನವಿ ಮಾಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article