ಕರ್ನಾಟಕಕ್ಕೆ ಇಲ್ಲ ಪ್ರವಾಸೋದ್ಯಮದ ಅನುದಾನ

Date:

ದಕ್ಷಿಣ ಭಾರತ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆಂದು ಸ್ವದೇಶಿ ಯೋಜನೆಯಡಿ 2014 ರಿಂದ ಒಟ್ಟು 1,185.15 ಕೋಟಿ ರೂಪಾಯಿ ಅನುದಾನ ಸಿಕ್ಕಿದ್ದು, ಈ ಪೈಕಿ ಕರ್ನಾಟಕಕ್ಕೆ ಯಾವುದೇ ರೀತಿಯ ಅನುದಾನವೇ ಮೀಸಲಾಗಿಲ್ಲ.

ನಗರದ ಖಾಸಗಿ ಹೋಟೆಲ್ನಲ್ಲಿ ದಕ್ಷಿಣ ರಾಜ್ಯದ ಪ್ರವಾಸೋದ್ಯಮ ಸಚಿವರ ಸಮ್ಮೇಳನ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಮಾಧ್ಯಮ ಹೇಳಿಕೆಯಲ್ಲಿ ಕರ್ನಾಟಕಕ್ಕೆ ಅನುದಾನ ಮೀಸಲಾಗದೇ ಇರುವುದು ತಿಳಿದುಬಂದಿದೆ.

ಕರ್ನಾಟಕ ಹೊರತುಪಡಿಸಿ ದ.ಭಾರತದ ಎಲ್ಲಾ ರಾಜ್ಯಗಳಿಗೂ ಅನುದಾನ ನೀಡಲಾಗಿದೆ. ಆಂಧ್ರಪ್ರದೇಶದ – ಆರ್ಥಿಕ ವರ್ಷ 2014-15 ರಿಂದ 2017-18 ರವರೆಗೆ ಒಟ್ಟು ರೂ 141.53 ಕೋಟಿ ಅನುದಾನ ಮಿಸಲಾಗಿದ್ದು, ಈ ವರೆಗೆ ರೂ 141.77 ಕೋಟಿ ಜೊತೆ ಹೆಚ್ಚುವರಿ ರೂ 24 ಲಕ್ಷ ಬಿಡುಗಡೆಯಾಗಿದೆ. ಕೇರಳ – ಆರ್ಥಿಕ ವರ್ಷ 2015-16 ರಿಂದ 2018-19 ರವರೆಗೆ ರೂ 413.58 ಕೋಟಿ ಅನುದಾನ ಮಿಸಲಾಗಿದ್ದು, ₹180.39 ಕೋಟಿ ಅನುದಾನ ಬಿಡುಗಡೆ ಆಗಿದೆ. ತಮಿಳುನಾಡು – ಆರ್ಥಿಕ ವರ್ಷ 2016-17 ಕ್ಕೆ ₹73.13 ಕೋಟಿ ಮಿಸಲಾಗಿದ್ದು 68.6 ಕೋಟಿ ಬಿಡುಗಡೆ ಆಗಿದೆ. ತೆಲಂಗಾಣ – ಆರ್ಥಿಕ ವರ್ಷ 2015-16 ರಿಂದ 2017-18 ರವರೆಗೆ ರೂ 268.39 ಕೋಟಿ ಮಿಸಲಾಗಿದ್ದು ರೂ 233.53 ಕೋಟಿ ಬಿಡುಗಡೆ ಆಗಿದೆ. ಪುದುಚೇರಿ – ಆರ್ಥಿಕ ವರ್ಷ 2015-16 ರಿಂದ 2017-18 ರವರೆಗೆ ರೂ 113. 35 ಕೋಟಿ ಮಿಸಲಾಗಿದ್ದು, ರೂ.142.76 ಕೋಟಿ ಬಿಡುಗಡೆ ಆಗಿದೆ. ಹೆಚ್ಚುವರಿಯಾಗಿ ರೂ29.41 ಕೋಟಿ ಬಿಡುಗಡೆ ಮಾಡಲಾಗಿದೆ.

ಇದಲ್ಲದೇ, ಪ್ರಶಾದ್ ಯೋಜನೆಯಲ್ಲೂ ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಒಟ್ಟು ರೂ 140.21 ಕೋಟಿ ಅನುಮತಿ ನೀಡಿದ್ದು, ಈವರೆಗೆ ₹121.49 ಕೋಟಿ ಅನುದಾನ ಬಿಡುಗಡೆ ಆಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಇಲಾಖೆ ಅಂಕಿಅಂಶಗಳು ಹೇಳುತ್ತಿವೆ.

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...