ಕರ್ನಾಟಕಕ್ಕೆ ಇಲ್ಲ ಪ್ರವಾಸೋದ್ಯಮದ ಅನುದಾನ

Date:

ದಕ್ಷಿಣ ಭಾರತ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆಂದು ಸ್ವದೇಶಿ ಯೋಜನೆಯಡಿ 2014 ರಿಂದ ಒಟ್ಟು 1,185.15 ಕೋಟಿ ರೂಪಾಯಿ ಅನುದಾನ ಸಿಕ್ಕಿದ್ದು, ಈ ಪೈಕಿ ಕರ್ನಾಟಕಕ್ಕೆ ಯಾವುದೇ ರೀತಿಯ ಅನುದಾನವೇ ಮೀಸಲಾಗಿಲ್ಲ.

ನಗರದ ಖಾಸಗಿ ಹೋಟೆಲ್ನಲ್ಲಿ ದಕ್ಷಿಣ ರಾಜ್ಯದ ಪ್ರವಾಸೋದ್ಯಮ ಸಚಿವರ ಸಮ್ಮೇಳನ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಮಾಧ್ಯಮ ಹೇಳಿಕೆಯಲ್ಲಿ ಕರ್ನಾಟಕಕ್ಕೆ ಅನುದಾನ ಮೀಸಲಾಗದೇ ಇರುವುದು ತಿಳಿದುಬಂದಿದೆ.

ಕರ್ನಾಟಕ ಹೊರತುಪಡಿಸಿ ದ.ಭಾರತದ ಎಲ್ಲಾ ರಾಜ್ಯಗಳಿಗೂ ಅನುದಾನ ನೀಡಲಾಗಿದೆ. ಆಂಧ್ರಪ್ರದೇಶದ – ಆರ್ಥಿಕ ವರ್ಷ 2014-15 ರಿಂದ 2017-18 ರವರೆಗೆ ಒಟ್ಟು ರೂ 141.53 ಕೋಟಿ ಅನುದಾನ ಮಿಸಲಾಗಿದ್ದು, ಈ ವರೆಗೆ ರೂ 141.77 ಕೋಟಿ ಜೊತೆ ಹೆಚ್ಚುವರಿ ರೂ 24 ಲಕ್ಷ ಬಿಡುಗಡೆಯಾಗಿದೆ. ಕೇರಳ – ಆರ್ಥಿಕ ವರ್ಷ 2015-16 ರಿಂದ 2018-19 ರವರೆಗೆ ರೂ 413.58 ಕೋಟಿ ಅನುದಾನ ಮಿಸಲಾಗಿದ್ದು, ₹180.39 ಕೋಟಿ ಅನುದಾನ ಬಿಡುಗಡೆ ಆಗಿದೆ. ತಮಿಳುನಾಡು – ಆರ್ಥಿಕ ವರ್ಷ 2016-17 ಕ್ಕೆ ₹73.13 ಕೋಟಿ ಮಿಸಲಾಗಿದ್ದು 68.6 ಕೋಟಿ ಬಿಡುಗಡೆ ಆಗಿದೆ. ತೆಲಂಗಾಣ – ಆರ್ಥಿಕ ವರ್ಷ 2015-16 ರಿಂದ 2017-18 ರವರೆಗೆ ರೂ 268.39 ಕೋಟಿ ಮಿಸಲಾಗಿದ್ದು ರೂ 233.53 ಕೋಟಿ ಬಿಡುಗಡೆ ಆಗಿದೆ. ಪುದುಚೇರಿ – ಆರ್ಥಿಕ ವರ್ಷ 2015-16 ರಿಂದ 2017-18 ರವರೆಗೆ ರೂ 113. 35 ಕೋಟಿ ಮಿಸಲಾಗಿದ್ದು, ರೂ.142.76 ಕೋಟಿ ಬಿಡುಗಡೆ ಆಗಿದೆ. ಹೆಚ್ಚುವರಿಯಾಗಿ ರೂ29.41 ಕೋಟಿ ಬಿಡುಗಡೆ ಮಾಡಲಾಗಿದೆ.

ಇದಲ್ಲದೇ, ಪ್ರಶಾದ್ ಯೋಜನೆಯಲ್ಲೂ ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಒಟ್ಟು ರೂ 140.21 ಕೋಟಿ ಅನುಮತಿ ನೀಡಿದ್ದು, ಈವರೆಗೆ ₹121.49 ಕೋಟಿ ಅನುದಾನ ಬಿಡುಗಡೆ ಆಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಇಲಾಖೆ ಅಂಕಿಅಂಶಗಳು ಹೇಳುತ್ತಿವೆ.

Share post:

Subscribe

spot_imgspot_img

Popular

More like this
Related

ಮಧುಮೇಹದ ಮುನ್ನ ಬರುವ ಲಕ್ಷಣಗಳು: ನಿರ್ಲಕ್ಷ್ಯ ಮಾಡಿದರೆ ಅಪಾಯ ಗಂಭೀರ

ಮಧುಮೇಹದ ಮುನ್ನ ಬರುವ ಲಕ್ಷಣಗಳು: ನಿರ್ಲಕ್ಷ್ಯ ಮಾಡಿದರೆ ಅಪಾಯ ಗಂಭೀರ ಇತ್ತೀಚಿನ ದಿನಗಳಲ್ಲಿ...

ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರು ಅರೆಸ್ಟ್.!‌

‌ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರು ಅರೆಸ್ಟ್.!‌ ಬೆಂಗಳೂರು: ಸಿಲಿಕಾನ್‌...

ನೂತನ ಐಟಿ ನಗರಕ್ಕೆ ನಿರಂತರ ಹೂಡಿಕೆ, 60 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ: ಡಿ.ಕೆ. ಶಿವಕುಮಾರ್

ನೂತನ ಐಟಿ ನಗರಕ್ಕೆ ನಿರಂತರ ಹೂಡಿಕೆ, 60 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ:...

ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್

ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್ ಬೆಂಗಳೂರು: ನಗರದ...