ಕರ್ನಾಟಕ ಬಂದ್ ನಡುವೆ ತಮಿಳುನಾಡಿನತ್ತ ರಾಜ್ಯದ ಬಸ್ಸುಗಳು

0
113

ತಮಿಳುನಾಡಿಗೆ ಕಾವೇರಿ ಹರಿಯುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಇಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.

ಬಂದ್ ನಡುವೆ ತಮಿಳುನಾಡಿನತ್ತ ರಾಜ್ಯದ ಬಸ್ಸುಗಳು ಹೊರಟಿವೆ. ಆನೇಕಲ್, ಮಾಲೂರು ಘಟಕದಿಂದ ಬಸ್ಸುಗಳು ಅಪರೇಟ್ ಆಗಿವೆ. ಹೊಸೂರು ಆನೇಕಲ್ ಮತ್ತು ಹೊಸೂರು ಮಾಲೂರು ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ತಮಿಳುನಾಡು ಪೊಲೀಸರಿಂದ ಭದ್ರತೆ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ತಮಿಳುನಾಡು ಗಡಿಯಲ್ಲಿಯೇ ತಮಿಳುನಾಡು ವಾಹನಗಳು ವಾಪಸ್ ಆಗುತ್ತಿವೆ. ತಮಿಳುನಾಡು ವಾಹನಗಳನ್ನು ತಡೆದು ತಮಿಳುನಾಡು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.