ಕಾಂಗ್ರೆಸ್ ಜವಾಬ್ದಾರಿ ಬಗ್ಗೆ ಕೇಳಿದ ಕೂಡಲೇ ರಾಹುಲ್ ಕೆಂಡಾಮಂಡಲ

Date:

ಪಂಜಾಬ್ ಹತ್ಯೆ ಘಟನೆಗಳ ಹೊಣೆಗಾರಿಕೆಯ ಬಗ್ಗೆ ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀವು ಸರ್ಕಾರಕ್ಕಾಗಿ ಕೆಲಸ ಮಾಡುತ್ತೀರಾ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿ ಹರಿಹಾಯ್ದಿದ್ದಾರೆ.

ಸಂಸತ್ತಿನಲ್ಲಿ ಪ್ರತಿಪಕ್ಷಗಳು ಅಡ್ಡಿಪಡಿಸಿದ ಬಗ್ಗೆ ಪ್ರಶ್ನಿಸಿದಕ್ಕೆ ನೀವು ಸರ್ಕಾರಕ್ಕಾಗಿ ಕೆಲಸ ಮಾಡುತ್ತಿದ್ದೀರಾ ಎಂದು ರಾಹುಲ್ ಗಾಂಧಿ ಪತ್ರಕರ್ತರೊಬ್ಬರ ಮೇಲೆ ವಾಗ್ದಾಳಿ ನಡೆಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.

ಪಂಜಾಬ್ ಹತ್ಯೆ ಘಟನೆಗಳ ಹೊಣೆಗಾರಿಕೆ ಬಗ್ಗೆ ಇಂದು ಮಾಧ್ಯಮದವರು ಕೇಳಿದ್ದಕ್ಕಾಗಿ ರಾಹುಲ್ ವಾಗ್ದಾಳಿ ನಡೆಸಿದರು.

ಕಳೆದ ವಾರ ಜನಸಮೂಹದಿಂದ ನಡೆದ ಹತ್ಯೆಯ ಎರಡು ಘಟನೆಗಳೊಂದಿಗೆ ಪಂಜಾಬ್ ಬೆಚ್ಚಿಬಿದ್ದಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡರು, ಕೋಪಗೊಂಡ ಜನಸಮೂಹ ನಿರ್ದಯವಾಗಿ ಇಬ್ಬರನ್ನು ಥಳಿಸಿ ಸಾಯಿಸಿದೆ. ಪಂಜಾಬ್ ನಲ್ಲಿ ಪ್ರಸ್ತುತ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿದೆ.

ಇಂದು ಮುಂಜಾನೆ ಗಾಂಧಿಯವರು 2014 ರ ಮೊದಲು ಜನಸಮೂಹದಿಂದ ಹತ್ಯೆ ಬಗ್ಗೆ ಟ್ವೀಟ್ ಪೋಸ್ಟ್ ಮಾಡಿದ್ದು, ಅವರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ರಾಹುಲ್ ಗಾಂಧಿಯವರನ್ನು ಟ್ವೀಟ್ ಬಗ್ಗೆ ಕೇಳಿ ಪಂಜಾಬ್‌ ನಲ್ಲಿ ಜನಸಮೂಹದಿಂದ ಉಂಟಾದ ದುರಂತ ಸಾವಿನ ಬಗ್ಗೆ ಗಮನ ಸೆಳೆದಾಗ, ಕೋಪಗೊಂಡ ಗಾಂಧಿ ಪತ್ರಕರ್ತರ ಮೇಲೆಯೇ ಹರಿಹಾಯ್ದರು. ಪತ್ರಕರ್ತ ಕೇಂದ್ರದ ಪರ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನೀವು ಸರ್ಕಾರಕ್ಕಾಗಿ ಕೆಲಸ ಮಾಡುತ್ತೀರಾ..?

ಲಖೀಂಪುರ ವಿಷಯಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಉಂಟಾಗಿರುವ ಅಸ್ಥಿರತೆಯ ಬಗ್ಗೆ ಗಾಂಧಿ ಅವರನ್ನು ಪ್ರಶ್ನಿಸಿದಾಗ, ಅವರು ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡರು, ನೀವು ಸರ್ಕಾರಕ್ಕಾಗಿ ಕೆಲಸ ಮಾಡುತ್ತೀರಾ ಎಂದು ಕೇಳಿದರು. ಟ್ವಿಟರ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ತುಣುಕಿನಲ್ಲಿ, ರಾಹುಲ್ ಗಾಂಧಿ ಅವರು ಸಂಸತ್ತಿನ ಹೊರಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಾ, ನೀವು ಸರ್ಕಾರಕ್ಕಾಗಿ ಕೆಲಸ ಮಾಡುತ್ತೀರಾ ಎಂದು ಕೇಳಿದ್ದಾರೆ.

ಪ್ರತಿಪಕ್ಷಗಳು ಸಂಸತ್ತಿನ ಕಲಾಪವನ್ನು ಏಕೆ ಅಡ್ಡಿಪಡಿಸುತ್ತಿವೆ ಎಂದು ಪತ್ರಕರ್ತರು ಕೇಳಿದಾಗ ರಾಹುಲ್ ಗಾಂಧಿ ಪತ್ರಕರ್ತರಿಗೆ ಮರು ಪ್ರಶ್ನೆ ಹಾಕಿದ್ದಾರೆ. ಮನೆಯನ್ನು ಸುಸ್ಥಿತಿಯಲ್ಲಿಡುವ ಜವಾಬ್ದಾರಿ ಸರ್ಕಾರದ ಮೇಲಿದೆಯೇ ಹೊರತು ವಿರೋಧ ಪಕ್ಷಗಳ ಮೇಲಲ್ಲ ಎಂದು ಅವರು ಹೇಳಿದ್ದಾರೆ.

ಪಂಜಾಬ್ ಹತ್ಯೆ ಘಟನೆಗಳು

ಪಂಜಾಬ್‌ ನಲ್ಲಿ ನಡೆದ ಗುಂಪು ಹತ್ಯೆಯ ಎರಡು ಭಯಾನಕ ಪ್ರಕರಣಗಳೊಂದಿಗೆ ದೇಶದ ಗಮನಸೆಳೆದಿದೆ. ಕೋಪಗೊಂಡ ಜನಸಮೂಹ ಕಾನೂನನ್ನು ಕೈಗೆತ್ತಿಕೊಂಡು ಇಬ್ಬರು ವ್ಯಕ್ತಿಗಳನ್ನು ಹತ್ಯೆಗೈದಿದೆ. ಇದು ಪಂಜಾಬ್‌ ನಲ್ಲಿರುವ ಕಾನೂನು ಮತ್ತು ಸುವ್ಯವಸ್ಥೆಯ ದುಃಸ್ಥಿತಿಯನ್ನು ಒತ್ತಿ ಹೇಳುವಂತಿದೆ.

ದರ್ಬಾರ್ ಸಾಹಿಬ್‌ನ ಗರ್ಭಗುಡಿಯಲ್ಲಿ ಶನಿವಾರ ಸಂಜೆ ನಿಯಮಿತ ಪ್ರಾರ್ಥನೆ ನಡೆಯುತ್ತಿರುವಾಗ ಸಾಮೂಹಿಕ ಹತ್ಯೆಯ ಮೊದಲ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಗರ್ಭಗುಡಿಗೆ ಪ್ರವೇಶಿಸಿ ಪವಿತ್ರ ಗ್ರಂಥ ಸಾಹಿಬ್‌ಗೆ ಕಿರ್ಪಾನ್‌ನಿಂದ ಹೊಡೆದದ್ದನ್ನು ಸಿಸಿಟಿವಿ ದೃಶ್ಯಾವಳಿ ತೋರಿಸಿದೆ. ವರದಿಯ ಪ್ರಕಾರ, ಅವರು ಪವಿತ್ರ ಸಿಖ್ ಧರ್ಮಗ್ರಂಥದ ಬಳಿ ಇರಿಸಲಾಗಿದ್ದ ಚಿನ್ನದ ಕಿರ್ಪಾನ್ ಅನ್ನು ಎತ್ತಿಕೊಂಡರು. ಘಟನೆಯ ನಂತರ ದೇವಸ್ಥಾನದಲ್ಲಿ ಹಾಜರಿದ್ದ ಜನರು ಅವರನ್ನು ಸುತ್ತುವರೆದರು. ನಂತರ ಅವರ ಶವವನ್ನು ಎಸ್‌ಜಿಪಿಸಿ ಮುಖ್ಯ ಗೇಟ್ ಬಳಿ ಇರಿಸಲಾಯಿತು, ಇದು ಕಚೇರಿಯಲ್ಲಿನ ಸಿಬ್ಬಂದಿಯಿಂದ ಹೊಡೆದು ಕೊಂದಿದ್ದಾರೆ ಎಂದು ಸೂಚಿಸುತ್ತದೆ.

24 ಗಂಟೆಗಳ ಒಳಗೆ, ಪಂಜಾಬ್‌ನಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಕೊಲ್ಲಲಾಯಿತು. ಪಂಜಾಬ್‌ನ ಕಪುರ್ತಲಾ ಜಿಲ್ಲೆಯ ನಿಜಾಂಪುರ್ ಗ್ರಾಮದ ಗುರುದ್ವಾರದಲ್ಲಿ ಈ ಘಟನೆ ನಡೆದಿದೆ. ಗುರುದ್ವಾರದಲ್ಲಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿದ್ದಾನೆ. ವರದಿಗಳ ಪ್ರಕಾರ, ಯುವಕ ಸಿಕ್ಕಿಬಿದ್ದ ಗುರುದ್ವಾರದಲ್ಲಿ ಜನಸಂದಣಿಯು ಆರೋಪಿಯನ್ನು ಬಂಧಿಸಲು ಪೊಲೀಸರು ಬಿಡಲಿಲ್ಲ. ನಂತರ ಗುಂಪಿನಿಂದ ಯುವಕನನ್ನು ಹೊಡೆದು ಸಾಯಿಸಲಾಗಿದೆ ಎಂದು ವರದಿಯಾಗಿದೆ.

ಪಂಜಾಬ್‌ನಲ್ಲಿನ ರಾಜಕಾರಣಿಗಳು ಆಪಾದಿತ ಅತ್ಯಾಚಾರ ಘಟನೆಗಳನ್ನು ಖಂಡಿಸಲು ತುದಿಗಾಗಲಲ್ಲಿ ನಿಂತಿದ್ದರೂ, ಅವರ್ಯಾರೂ ಅಪಹರಣದ ಶಂಕೆಯ ಮೇಲೆ ಹೊಡೆದು ಸಾಯಿಸಿದ ಇಬ್ಬರು ವ್ಯಕ್ತಿಗಳ ಗುಂಪು ಹತ್ಯೆಯನ್ನು ಖಂಡಿಸಲಿಲ್ಲ. ಪಂಜಾಬ್‌ನ ಕಪುರ್ತಲಾ ಗುರುದ್ವಾರದಲ್ಲಿ ಯಾವುದೇ ಅತ್ಯಾಚಾರದ ಲಕ್ಷಣಗಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದಾಗ್ಯೂ, ನಂತರ ಪೊಲೀಸರು ಅಮೃತಸರ ಮತ್ತು ಕಪುರ್ತಲಾದಲ್ಲಿ ಹತ್ಯೆಗೀಡಾದ ಇಬ್ಬರ ಮೇಲೂ ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ’ (IPC 295) ಆರೋಪವನ್ನು ಹೊರಿಸಿದರು. ಅವರ ಸಾವಿಗೆ ಕಾರಣರಾದವರ ಮೇಲೆ ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂಬುದನ್ನು ಗಮನಿಸಬಹುದಾಗಿದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...