ಕಾನೂನಿಗೆ ಗೌರವ ಕೊಡ್ತೀನಿ ! ಯಾವುದಕ್ಕು ಹೆದರಿ ಓಡಿ ಹೋಗಲ್ಲ !?

admin
1 Min Read

ಇಂದು ಡಿಕೆ ಶಿವಕುಮಾರ್ ಸದಾಶಿವನಗರ ಮನೆಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಬಂದಿರುವ ಹಿನ್ನೆಲೆಯಲ್ಲಿ   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಡಿಕೆ ಶಿವಕುಮಾರ್ ಅವರು  ಮಾಧ್ಯಮಗಳು  ಈ ವಿಚಾರದ ಬಗ್ಗೆ ವಿಚಿತ್ರವಾಗಿ ಕಲ್ಪನೆ ಮಾಡಿಕೊಂಡು ನನ್ನ ಬಗ್ಗೆ ಇಷ್ಟ ಬಂದಂತೆ ಸುದ್ದಿ ಮಾಡಿವೆ . ನಾನು ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಕಾರ್ಯಕರ್ತನಾಗಿ ಜವಾಬ್ದಾರಿ ನಿರ್ವಹಿಸಿದ್ದೇನೆ. 8.5 ಕೋಟಿ ಹಣ ನಮ್ಮದೇ ನಾನು ಯಾವ ತಪ್ಪನ್ನೂ ಮಾಡಿಲ್ಲ. 

ಯಾರ ಬಳಿಯೂ ಲಂಚವನ್ನೂ ತಿಂದಿಲ್ಲ. ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ. ಅದನ್ನು ಕಾನೂನಿನ ಮೂಲಕ ಎದುರಿಸುತ್ತೇನೆ, ನಾನು ಯಾವುದಕ್ಕೂ ‌ಹೆದರಿ ಎಲ್ಲಿಯೂ ಓಡಿ ಹೋಗುವುದಿಲ್ಲ. ‌ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತೇನೆ ಎಂದರು

Share This Article
Leave a Comment