ಕಾರ್ತಿಕ್, ಜಾಧವ್​ ಕರಿಯರ್ ಅಂತ್ಯ? ಮನೀಷ್ ಪಾಂಡೆ, ಅಗರ್​ವಾಲ್​ ಗೆ ಸಿಗುತ್ತಾ ಖಾಯಂ ಸ್ಥಾನ?

Date:

ಭಾರತಕ್ಕೆ 3ನೇ ವಿಶ್ವಕಪ್​ ಗೆದ್ದು ತರಲೆಂದು ಇಂಗ್ಲೆಂಡ್​ಗೆ ತೆರಳಿತ್ತು ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ. ಆರಂಭದಿಂದಲೂ ಪಕ್ಕಾ ನಮ್ದೇ ವಿಶ್ವಕಪ್ ಎಂದು ಸಾರುವಂತೆ ಉತ್ತಮ ಪ್ರದರ್ಶನವನ್ನು ನೀಡಿತ್ತು. ಗಾಯದ ಸಮಸ್ಯೆ ಕಾಡಿದರೂ ಗೆಲುವು ನಮ್ಮದೇ ಎಂದು ಭಾರತ ಖಾತ್ರಿ ಪಡಿಸಿತ್ತು.
ಇಂಗ್ಲೆಂಡ್ ವಿರುದ್ಧ ಸೋತಿದ್ದು ಬಿಟ್ಟರು, ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನಿಂದ ಆರಂಭವಾದ ಭಾರತದ ಗೆಲುವಿನ ಅಭಿಯಾನ ವಿಶ್ವಕಪ್ ಗೆದ್ದೇ ಗೆಲ್ಲುತ್ತೆ ಎನ್ನುವಂತಿತ್ತು. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಪಾಕಿಸ್ತಾನ, ಅಫ್ಘಾನಿಸ್ತಾನ್, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಗೆದ್ದಿತ್ತು. ನ್ಯೂಜಿಲೆಂಡ್ ವಿರುದ್ಧದ ಲೀಗ್ ಮ್ಯಾಚ್ ಮಳೆಯಿಂದ ರದ್ದಾಗಿತ್ತು. ಇಂಗ್ಲೆಂಡ್ ವಿರುದ್ಧ ಮಾತ್ರ ಭಾರತ ಸೋತಿತ್ತು. ಸೆಮಿಫೈನಲ್​​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಆರಾಮಾಗಿ ಗೆದ್ದು ಫೈನಲ್ ಪ್ರವೇಶಿಸುತ್ತೆ.. ಫೈನಲ್​ನಲ್ಲಿ ಪಕ್ಕಾ ಭಾರತ ಗೆಲ್ಲುತ್ತೆ ಎಂದೇ ಕೊಟ್ಯಂತರು ಮಂದಿ ಆಸೆ ಇಟ್ಟುಕೊಂಡಿದ್ದರು. ಆದರೆ, ಆಗಿದ್ದೇ ಬೇರೆ. ನ್ಯೂಜಿಲೆಂಡ್ ವಿರುದ್ಧ ಟಾಪ್ ಆರ್ಡರ್​ ಬ್ಯಾಟ್ಸ್​ಮನ್​ಗಳಾದ ರೋಹಿತ್ ಶರ್ಮಾ, ಕೆ.ಎಲ್​ ರಾಹುಲ್, ವಿರಾಟ್​ ಕೊಹ್ಲಿ ಕೇವಲ 1ರನ್​ ಮಾಡಿಯಷ್ಟೇ ಪೆವಿಲಿಯನ್ ಸೇರಿಕೊಂಡ್ರು. ಧೋನಿ, ಜಡೇಜಾ ಹೋರಾಡಿದ್ರೂ ಗೆಲುವು ಸಾಧ್ಯವಾಗಿಲ್ಲ.


ಈಗ ವಿಶ್ವಕಪ್​ ಸೆಮಿಫೈನಲ್​ನಿಂದ ಟೀಂ ಇಂಡಿಯಾ ಹೊರ ಬೀಳುತ್ತಿದ್ದಂತೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ಮೇಲೆ ಆಯ್ಕೆ ಸಮಿತಿ ಹೆಚ್ಚು ಒತ್ತು ನೀಡಲು ಯೋಚನೆ ಮಾಡಿದೆ. ಮುಂದಿನ ಟಿ-20ವಿಶ್ವಕಪ್ ಗಮನದಲ್ಲಿಟ್ಕೊಂಡು ದಿನೇಶ್ ಕಾರ್ತಿಕ್ ಹಾಗೂ ಕೇಧಾರ್ ಜಾಧವ್ ಮುಂಬರುವ ಮ್ಯಾಚ್​​​​ಗಳಲ್ಲಿ ತಂಡದಲ್ಲಿ ಸ್ಥಾನ ಕಳೆದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.


ಕನಿಷ್ಠ 2 ವರ್ಷಗಳ ಮೊದಲು ತಂಡಗಳನ್ನು ಸಿದ್ಧಪಡಿಸಬೇಕಿದ್ದು. ಎಂಎಸ್​ಕೆ ಪ್ರಸಾದ ನೇತೃತ್ವದ ಆಯ್ಕೆ ಸಮಿತಿ ಈ ಹಿನ್ನೆಲೆಯಲ್ಲಿ ಆದಷ್ಟು ವೇಗ ​ ಟಿ20 ವರ್ಲ್ಡ್​​​ಕಪ್​​ ಗೆ ಟೀಮ್ ರೆಡಿಮಾಡಲು ಪ್ಲಾನ್ ಮಾಡಿಕೊಂಡಿದೆ. ಹಾಗಾಗಿ ಜಾಧವ್ ಹಾಗೂ ಕಾರ್ತಿಕ್​ಗೆ ಕೋಕ್ ನೀಡಲಾಗುತ್ತದೆ. ಕನ್ನಡಿಗರಾದ ಮನೀಷ್ ಪಾಂಡೆ. ಮಯಾಂಕ್​​​ ಅಗರ್​​​ವಾಲ್​​ ಅದೇರೀತಿ ಶ್ರೇಯಸ್​ ಅಯ್ಯರ್, ನವದೀಪ್ ಸೈನಿ, ಅಲ್ರೌಂಡರ್ ಕೃಣಾಲ್ ಪಾಂಡ್ಯ ಸಂಜು ಸ್ಯಾಮ್ಸನ್ ಮೊದಲಾದ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಸಂಜು ಸ್ಯಾಮ್ಸನ್ ಬಗ್ಗೆ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಕೂಡ ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ. ಆದ್ದರಿಂದ ಟೀಮ್ ಇಂಡಿಯಾದಲ್ಲಿ ಭಾರೀ ಬದಲಾವಣೆ ನಿರೀಕ್ಷಿಸ ಬಹುದು.

Share post:

Subscribe

spot_imgspot_img

Popular

More like this
Related

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್’ಗೆ HDK ಪತ್ರ

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್'ಗೆ HDK ಪತ್ರ ನವದೆಹಲಿ:...

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ ಹೈದರಾಬಾದ್:...