ಕೆಂಪೇಗೌಡನಾಗಿ ಅಬ್ಬರಿಸಿದ ಬೆನ್ನಲ್ಲೇ ಹೊಸ ಸಾಹಸಕ್ಕಿಳಿದ ಕೋಮಲ್..!

Date:

ಬದಲಾವಣೆ ಸಹಜ..ಯಾರ ಲೈಫ್, ಯಾವ ರೀತಿ? ಹೇಗೆ? ಯಾವ ಸಂದರ್ಭದಲ್ಲಿ ಬದಲಾಗುತ್ತೆ ಅನ್ನೋದು ಹೇಳುವುದು ಕಷ್ಟ..! ಹೀಗೆ ನಮ್ಮ ಸ್ಯಾಂಡಲ್​ವುಡ್​ನಲ್ಲಿ ಹಾಸ್ಯ ನಟನಾಗಿ ಸಾಕಷ್ಟು ಸಿನಿಮಾಗಳ ಮೂಲಕ ವೀಕ್ಷಕರನ್ನು ಅಭಿಮಾನಿಗಳನ್ನು ನಗುವಿನ ಕಡಲಲ್ಲಿ ತೇಲಿಸಿರುವ ನಟ ಕೋಮಲ್ ಕೂಡ ಬದಲಾಗಿದೆ. ಪಕ್ಕಾ ಕಾಮಿಡಿಯನ್ ಆಗಿದ್ದ ಕೋಮಲ್ ಈಗ ಮಾಸ್​​ ಹಿರೋ ಆಗುವ ಮೊದಲ ಹೆಜ್ಜೆಯಲ್ಲಿ ಗೆದ್ದಿದ್ದಾರೆ..!
ಕೋಮಲ್​ 3 ವರ್ಷಗಳ ಬಳಿಕ ಹೊಸ ಅವತಾರದೊಂದಿಗೆ ಕಮ್​ಬ್ಯಾಕ್ ಆಗಿದ್ದಾರೆ. ಈ ಬಗ್ಗೆ ನಿಮಗೂ ಗೊತ್ತಿದೆ. ಕೆಂಪೇಗೌಡ -2 ಸಿನಿಮಾ ಮೂಲಕ ಕೋಮಲ್​ ಖಡಕ್ ಪೊಲೀಸ್ ಅಧಿಕಾರಿಯಾಗಿ ಜನರ ಮುಂದೆ ಬಂದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಬಹು ದೊಡ್ಡ ತಾರಾಗಣದ ಕುರುಕ್ಷೇತ್ರ ಸಿನಿಮಾ ರಿಲೀಸ್ ಆದ ದಿನವೇ ಕೆಂಪೇಗೌಡ -2 ರಿಲೀಸ್ ಆಗಿತ್ತು. ಕುರುಕ್ಷೇತ್ರ ಆಗಸ್ಟ್​ 2ಕ್ಕೆ ರಿಲೀಸ್​ ಆಗುತ್ತದೆ ಎಂದುಕೊಂಡು ಕೆಂಪೇಗೌಡ-2 ಅನ್ನು ಆಗಸ್ಟ್ 9ಕ್ಕೆ ರಿಲೀಸ್ ಮಾಡಲು ಡೇಟ್ ಫಿಕ್ಸ್ ಮಾಡಲಾಗಿತ್ತು. ಆದರೆ, ಬದಲಾದ ಬೆಳವಣಿಗೆಯಲ್ಲಿ ಕುರುಕ್ಷೇತ್ರ ಆಗಸ್ಟ್ 9ಕ್ಕೆ ರಿಲೀಸ್ ಆಯ್ತು. ಆದರೂ ಕುರುಕ್ಷೇತ್ರದ ಅಬ್ಬರದ ನಡುವೆ ಕೆಂಪೇಗೌಡ -2 ಒಂದು ಹಂತದ ಮಟ್ಟಿಗೆ ಗೆದ್ದಿದೆ..!


ಕೆಂಪೇಗೌಡ -2 ಯಶಸ್ಸಿನಿಂದ ಕೋಮಲ್ ಫುಲ್ ಖುಷಿಯಾಗಿದ್ದಾರೆ. ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದ ಕೋಮಲ್‌, ಜನರ ರಿಯಾಕ್ಷನ್​​ಗೆ ಫುಲ್ ಫಿದಾ ಆಗಿದ್ದಾರೆ. ನಾಲ್ಕು ವರ್ಷಗಳ ನನ್ನ ಶ್ರಮ ಸಾರ್ಥಕವಾಯ್ತು ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ಈ ಸಂತಸದ ಬೆನ್ನಲ್ಲೇ ಈಗ ಹೊಸ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಕಥೆ-ಚಿತ್ರಕಥೆಯಲ್ಲಿ ಬ್ಯುಸಿಯಾಗಿರೋ ಕೋಮಲ್‌, ‘ಕೋಂಕಾ ಪಾಸ್‌’ ಎನ್ನುವ ಸಿನಿಮಾ ಮಾಡೋದು ಖಚಿತ ಎಂಬ ಮಾತು ಕೇಳಿ ಬಂದಿದೆ.
ಕೋಂಕಾ ಪಾಸ್‌ ಎನ್ನುವ ಸಿನಿಮಾಕ್ಕೆ ಕಥೆ-ಚಿತ್ರಕಥೆ ಬರೆಯುತ್ತಿದ್ದಾರೆ ಕೋಮಲ್‌. ಜೊತೆಗೆ ಈ ಸಿನಿಮಾಕ್ಕೆ ಸ್ವತಃ ಅವರೇ ಬಂಡವಾಳ ಹಾಕಲಿದ್ದಾರೆ. ಮೋಹನ್ ಸಿನಿಮಾಕ್ಕೆ ಮೊದಲಬಾರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ‘ಕೊಂಕಾ ಪಾಸ್‌ ಇಂಡೋ-ಚೀನಾ ಬಾರ್ಡರ್‌ ಕಥೆ ಹೇಳುವ ಚಿತ್ರ ಇದಂತೆ..!

Share post:

Subscribe

spot_imgspot_img

Popular

More like this
Related

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಳ್ಳತನ...

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...