ಕೆಜಿಎಫ್ ಗೆ 8 & ಟಗರು ಗೆ 3 ಸೈಮಾ ಅವಾರ್ಡ್..! ರಘುರಾಮ್ ಗರಂ..

Date:

ರಘುರಾಮ್ ಕನ್ನಡ ಚಲನ ಚಿತ್ರರಂಗದ ನಟ ನಿರ್ದೇಶಕ.. ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ರಘು ರಾಮ್ ಅವರು ಯಾವುದೇ ರೀತಿಯ ವಿವಾದಗಳನ್ನು ಇದುವರೆಗೂ ಸಹ ಮಾಡಿಕೊಳ್ಳದಂತಹ ಕಲಾವಿದ. ಆದರೆ ಇದೀಗ ಪ್ರಸಕ್ತ ಸೈಮಾ ಅವಾರ್ಡ್ ಕುರಿತಾಗಿ ಟ್ವೀಟ್ ಒಂದನ್ನು ಮಾಡಿದ್ದು ವಿವಾದವನ್ನು ಸೃಷ್ಟಿಸಿದ್ದಾರೆ.

ಕಳೆದ ವರ್ಷ ತೆರೆಕಂಡ ಚಿತ್ರಗಳಿಗೆ ಈ ವರ್ಷ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ( SIIMA ) ಅನ್ನು ಕೊಡಲಾಯಿತು. ಹೀಗೆ ನೀಡಿದ ಸೈಮಾ ಅವಾರ್ಡ್ ನಲ್ಲಿ ಕನ್ನಡದ ಕೆಜಿಎಫ್ ಚಿತ್ರಕ್ಕೆ ಒಟ್ಟು ಎಂಟು ಪ್ರಶಸ್ತಿಗಳನ್ನು ನೀಡಲಾಯಿತು. ಹೌದು ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರಕ್ಕೆ ಒಟ್ಟು ಎಂಟು ಪ್ರಶಸ್ತಿಗಳನ್ನು ಸೈಮಾ ನೀಡಿದೆ.

ಇನ್ನು ಸೈಮಾ ಪ್ರಶಸ್ತಿಗೆ ಕೆಜಿಎಫ್ ಚಿತ್ರ ಒಟ್ಟು 12 ಕೆಟಗರಿಯಲ್ಲಿ ನಾಮಿನೇಟ್ ಆಗಿತ್ತು ಮತ್ತು ಶಿವಣ್ಣ ಅಭಿನಯದ ಟಗರು ಚಿತ್ರ ಸಹ ಬರೋಬ್ಬರಿ 11 ಕೆಟಗರಿಯಲ್ಲಿ ನಾಮಿನೇಟ್ ಆಗಿತ್ತು. ಕೆಜಿಎಫ್ ಚಿತ್ರದ ರೀತಿಯೇ ದೊಡ್ಡ ಮಟ್ಟದಲ್ಲಿ ಶಿವಣ್ಣ ಅಭಿನಯದ ಟಗರು ಚಿತ್ರ ನಾಮಿನೇಟ್ ಆಗಿದ್ದರೂ ಸಹ ಆ ಚಿತ್ರಕ್ಕೆ ಕೇವಲ ಮೂರು ಪ್ರಶಸ್ತಿಗಳನ್ನು ಮಾತ್ರ ನೀಡಲಾಗಿದೆ. ಹೌದು ಅತ್ಯುತ್ತಮ ಖಳನಾಯಕ, ಅತ್ಯುತ್ತಮ ಹಿನ್ನೆಲೆ ಗಾಯಕಿ ಮತ್ತು ಅತ್ಯುತ್ತಮ ನಟಿ (ಕ್ರಿಟಿಕ್ಸ್) ವಿಭಾಗಗಳಲ್ಲಿ ಒಟ್ಟು 3 ಪ್ರಶಸ್ತಿಗಳು ಟಗರು ಪಾಲಾಗಿವೆ.

ದೊಡ್ಡ ಮಟ್ಟದಲ್ಲಿ ಸದ್ದು & ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದ, ಟಗರು ಚಿತ್ರವನ್ನು ಪ್ರೇಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಆದರೆ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಟಗರು ಚಿತ್ರಕ್ಕೆ ಸೈಮಾದಲ್ಲಿ ಸರಿಯಾದ ರೀತಿಯಲ್ಲಿ ಅವಾರ್ಡ್ ನೀಡದೇ ಸೈಮಾ ಅವಮಾನ ಮಾಡಿದೆ ಎಂದು ರಘುರಾಮ್ ಅವರು ಟ್ವೀಟ್ ಮಾಡಿದ್ದಾರೆ. ಇನ್ನು ಶಿವಣ್ಣ ಅಭಿಮಾನಿಗಳೂ ಸಹ ರಘುರಾಮ್ ಅವರ ಟ್ವೀಟ್ ಅನ್ನು ಸಮರ್ಥಿಸಿಕೊಳ್ಳುತ್ತಿದ್ದು ಸೈಮಾ ವಿರುದ್ಧ ಟ್ವಿಟರ್ ನಲ್ಲಿ ಕಿಡಿಕಾರಿದ್ದಾರೆ

Share post:

Subscribe

spot_imgspot_img

Popular

More like this
Related

ಸಚಿವರಿಗೆ ವಿಪಕ್ಷ ನಾಯಕರ ಮಾತನ್ನು ಆಲಿಸಿ, ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ಇಲ್ಲ: ವಿಜಯೇಂದ್ರ

ಸಚಿವರಿಗೆ ವಿಪಕ್ಷ ನಾಯಕರ ಮಾತನ್ನು ಆಲಿಸಿ, ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ಇಲ್ಲ:...

Gold Price Today: ಚಿನ್ನದ ದರದಲ್ಲಿ ಭಾರಿ ಕುಸಿತ; ಬೆಂಗಳೂರಿನಲ್ಲಿ ಇಂದು ಎಷ್ಟಿದೆ ದರ?

Gold Price Today: ಚಿನ್ನದ ದರದಲ್ಲಿ ಭಾರಿ ಕುಸಿತ; ಬೆಂಗಳೂರಿನಲ್ಲಿ ಇಂದು...

ಬೆಂಗಳೂರಿನಲ್ಲಿ ತೀವ್ರ ಕುಸಿತ ಕಂಡ ಗಾಳಿಯ ಗುಣಮಟ್ಟ: ಹೆಚ್ಚಿದ ಆರೋಗ್ಯ ಸಮಸ್ಯೆ

ಬೆಂಗಳೂರಿನಲ್ಲಿ ತೀವ್ರ ಕುಸಿತ ಕಂಡ ಗಾಳಿಯ ಗುಣಮಟ್ಟ: ಹೆಚ್ಚಿದ ಆರೋಗ್ಯ ಸಮಸ್ಯೆ ಬೆಂಗಳೂರು:...

ನಿಂಬೆ ಬಳಸಿದ ನಂತರ ಸಿಪ್ಪೆ ಎಸೆಯಬೇಡಿ, ಪ್ರಯೋಜನ ಸಾಕಷ್ಟಿವೆ!

ನಿಂಬೆ ಬಳಸಿದ ನಂತರ ಸಿಪ್ಪೆ ಎಸೆಯಬೇಡಿ, ಪ್ರಯೋಜನ ಸಾಕಷ್ಟಿವೆ! ನಿಂಬೆಹಣ್ಣು ಕೇವಲ ರಸಕ್ಕಾಗಿ...