ಕೊಹ್ಲಿ ಅನುಪಸ್ಥಿತಿಯಲ್ಲಿ ರಹಾನೆ ನಾಯಕತ್ವದ ಬಗ್ಗೆ ಗವಾಸ್ಕರ್ ಏನಂದ್ರು?

Date:

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಇನ್ನು ನಾಯಕತ್ವದ ಒತ್ತಡದಿಂದ ರಹಾನೆ ತತ್ತರಿಸುವುದಿಲ್ಲ ಎಂದು ಬ್ಯಾಟಿಂಗ್ ಶ್ರೇಷ್ಠ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಹಗಲು-ರಾತ್ರಿ ಟೆಸ್ಟ್ ನಂತರ ಕೊಹ್ಲಿ ಪಿತೃತ್ವ ರಜೆ ತೆಗೆದುಕೊಳ್ಳುತ್ತಿದ್ದಾರೆ. ನಾಲ್ಕು ಟೆಸ್ಟ್ ಸರಣಿಯ ಉಳಿದ ಮೂರು ಪಂದ್ಯಗಳಲ್ಲಿ ತಂಡವನ್ನು ರಹಾನೆ ಮುನ್ನಡೆಸುವ ನಿರೀಕ್ಷೆಯಿದೆ.

“ಅಜಿಂಕ್ಯ ರಹಾನೆ ಅವರ ಮೇಲೆ ನಿಜವಾದ ಒತ್ತಡವಿಲ್ಲ, ಏಕೆಂದರೆ ಅವರು ತಂಡವನ್ನು ಎರಡೂ ಬಾರಿ ಮುನ್ನಡೆಸಿ ಗೆದ್ದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಧರ್ಮಶಾಲಾದಲ್ಲಿ ಮುನ್ನಡೆಸಿದ್ದಾಗ ಭಾರತ ಗೆದ್ದಿದೆ. ನಂತರ ಅಫ್ಘಾನಿಸ್ತಾನ ವಿರುದ್ಧ ಸಹ ತಂಡವನ್ನು ಮುನ್ನಡೆಸಿದ್ದು ಅಂದೂ ಭಾರತ ಗೆದ್ದಿತು ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್ ಸಂದರ್ಶನದಲ್ಲಿ ಹೇಳಿದ್ದಾರೆ.
ಹೀಗಾಗಿ ನಾಯಕತ್ವಕ್ಕೆ ಸಂಬಂಧಿಸಿದಂತೆ, ಯಾವುದೇ ಒತ್ತಡವಿಲ್ಲ, ಏಕೆಂದರೆ ರಹಾನೆ ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂದು ಅವರಿಗೆ ತಿಳಿದಿದೆ. “ಆದ್ದರಿಂದ, ಕ್ಯಾಪ್ಟನ್ ಆಗಿರುವುದು ಅಥವಾ ಕ್ಯಾಪ್ಟನ್ ಆಗಿ ಮುಂದುವರಿಯುವುದು ಅವರ ಚಿಂತನೆಯ ಭಾಗವಾಗಲಿದೆ ಎಂದು ನಾನು ಭಾವಿಸುವುದಿಲ್ಲ ಎಂದರು.
ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಡ್ರಾದಲ್ಲಿ ಕೊನೆಗೊಂಡ ಎರಡು ಅಭ್ಯಾಸ ಪಂದ್ಯಗಳಲ್ಲಿ ರಹಾನೆ ತಂಡದ ನಾಯಕತ್ವ ವಹಿಸಿದ್ದರು.

ಟಿವಿ ಇರದ ಮನೆಯ ಪೋರ ಇಂದು ಏನಾಗಿದ್ದಾರೆ ಗೊತ್ತಾ?

ಅವರ ಮನೆಯಲ್ಲಿ ಟಿವಿ ಇರಲಿಲ್ಲ. ಪ್ರತಿದಿನ ಬಸ್ ನಲ್ಲಿ ಪ್ರಯಾಣ. ಅಪ್ಪ ಯಾವಾಗಾಲಾದರೂ ಅಣ್ಣ, ತಮ್ಮ ಇಬ್ಬರನ್ನೂ ಅಮ್ಮನ ಜೊತೆ ಲ್ಯಾಂಬ್ರೆಟಾ ಸ್ಕೂಟರ್ ನಲ್ಲಿ ಹತ್ತಿಸಿದರೆ ಅದೇ ಸ್ವರ್ಗ..! ಅಣ್ಣ, ತಮ್ಮ ಇಬ್ಬರೂ ಮಲಗುತ್ತಿದ್ದುದು ಮನೆಯ ಹಾಲ್ ನಲ್ಲಿ. ಕಷ್ಟಪಟ್ಟು ಓದಿ ಬೆಳೆದ ಹುಡುಗ ಇಷ್ಟು ಬಹು ಎತ್ತರಕ್ಕೆ ಬೆಳೆಯುತ್ತಾನೆಂದು ಯಾರೂ ಊಹಿಸಿರಲಿಲ್ಲ. ಅವರೀಗ ಪ್ರತಿಷ್ಠಿತ ಕಂಪನಿಯ ಸಿಇಒ, ವಿಶ್ವಾದ್ಯಂತ ಕೋಟ್ಯಂತರ ಯುವ ಜನರ ಸ್ಫೂರ್ತಿಯ ಚಿಲುಮೆ..! ಬಾಲ್ಯದಲ್ಲಿ ಟಿವಿ ಕಾಣದ ಪೋರನನ್ನು ಜಗತ್ತೇ ಠೀವಿಯಿಂದ ಗೌರವಿಸುತ್ತಿದೆ..!

ಯಸ್, ಹೀ ಈಸ್ ಅವರ್ ಪ್ರೌಡ್ ಇಂಡಿಯನ್ ಮಿಸ್ಟರ್ ಸುಂದರ್ ಪಿಚ್ಚೈ. ಪ್ರತಿಷ್ಠಿತ ಗೂಗಲ್ ಕಂಪನಿಯ ಸಿಇಒ. ಇತ್ತೀಚೆಗೆ ಇಂಜಿನಿಯರಿಂಗ್ ಮುಗಿಸಿದ ಯಾರನ್ನೇ ಕೇಳಿ ನೋಡಿ, ನನಗೆ ಗೂಗಲ್ ನಲ್ಲಿ ಕೆಲಸ ಸಿಗಬೇಕು ಅಂತ ಹೇಳ್ತಾರೆ. ಅಂತದ್ರಲ್ಲಿ ಗೂಗಲ್ ಕಂಪನಿಯ ಸಿಇಒ ಆಗೋದು ತಮಾಷೆನಾ? ಆದರೆ, ಆ ತಮಾಷೆ, ಊಹೆಯ ಆಚೆಗೆ ಪರಿಶ್ರಮವಿದ್ದರೆ ಯಶಸ್ಸು ನಮ್ಮ ಕೈಬಿಡುವುದಿಲ್ಲ ಅನ್ನೋದನ್ನು ಸಾಬೀತು ಮಾಡಿ ತೋರಿಸಿದ್ದಾರೆ ಸುಂದರ್.

ಅಂದಹಾಗೇ ಪಿಚ್ಚೈ ಹುಟ್ಟಿದ್ದು, ತಮಿಳುನಾಡಿನ ಮಧುರೈನಲ್ಲಿ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬ ಇವರದ್ದು. ಅಪ್ಪ, ಅಮ್ಮ ಹಾಗೂ ಅಣ್ಣ, ಇಷ್ಟೇ ಪ್ರಪಂಚ. ಆದ್ರೆ, ಅವರ ಫ್ಯಾಮಿಲಿ ಚೆನ್ನೈನಲ್ಲಿ ನೆಲೆ ನಿಂತಿದ್ದರಿಂದ ಪಿಚ್ಚೈ ಕೂಡ ಅಲ್ಲೇ ಆಡಿ ಬೆಳೆದರು. ಇದನ್ನು ಬಿಟ್ಟರೆ ಓದು, ಕ್ರಿಕೆಟ್ ಆಡುವುದು. ಎಂದೂ ಅದರಾಚೆ ಯೋಚಿಸಿದವರಲ್ಲ ಸುಂದರ್.

ಸುಂದರ್ ಮನೆಗೆ ತಡವಾಗಿ ಬರುತ್ತಿರಲಿಲ್ಲ. ಕುಂಟು ನೆಪ ಹೇಳಿ ಶಾಲೆ ತಪ್ಪಿಸಿಕೊಳ್ಳುತ್ತಿರಲಿಲ್ಲ. ಮಾರ್ಕ್ಸ್ ಕಾರ್ಡ್ ಗ್ರೇಡ್ ಯಾವತ್ತೂ ಕಡಿಮೆಯಾಗಲಿಲ್ಲ. ಮನೆಯಲ್ಲಿ ಟಿವಿ ಇಲ್ಲದಿದ್ರೂ ಆ ಬಗ್ಗೆ ಕೊರಗಲಿಲ್ಲ. ಗೆಳೆಯರು ತಮ್ಮ ತಂದೆ, ತಾಯಿ ಜೊತೆ ಕಾರಿನಲ್ಲಿ ಬಂದಾಗಲೂ ಇವರಿಗೆ ಕಾರು ಇರಬೇಕಿತ್ತು ಎಂದನಿಸಲಿಲ್ಲ.

ಓದಿನಲ್ಲಿ ಆಸಕ್ತಿ ಹೊಂದಿದ್ದ ಸುಂದರ್ ಏನಾದರೂ ಸಾಧಿಸಬೇಕೆಂಬ ಕನಸು ಕಂಡಿದ್ದರು. ಅವರು ತೆಗೆದ ಅಂಕಗಳಿಂದ ಖರಗ್ ಪುರ ಐಐಟಿ ಸೇರಿದರು. ಸ್ಕಾಲರ್ ಶಿಪ್ ಪಡೆದು ಓದು ಮುಂದುವರಿಸಿದ್ರು.

ಐಐಟಿ ಯಲ್ಲಿ ಓದು, ಓದು, ಓದುವುದಷ್ಟೇ ಅವರ ಕೆಲಸ. ಅಲ್ಲಿಂದ ಉನ್ನತ ವ್ಯಾಸಂಗಕ್ಕೆ ಪ್ರಯಾಣ ಬೆಳೆಸಿದ್ದು ಅಮೆರಿಕಕ್ಕೆ. ಅಲ್ಲಿಯೂ ಸ್ಕಾಲರ್ ಶಿಪ್ ಅವರ ಜೊತೆಗಿತ್ತು. ಅಮ್ಮನಿಗೆ ಮಗನನ್ನು ಅಲ್ಲಿಗೆ ಕಳಿಸಲು ಇಷ್ಟವಿರಲಿಲ್ಲ. ಸುಲಭವೂ ಇರಲಿಲ್ಲ. ಕಷ್ಟಪಟ್ಟ ಮಗನ ಜೀವನ ಚೆನ್ನಾಗಿರಲಿ ಎಂದು ಹಣ ಕೂಡಿಸಿಕೊಟ್ಟರು. ತ್ಯಾಗವನ್ನೂ ಮಾಡಿದರು. ಅಮೆರಿಕದ ಸ್ಪ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಸೇರಿದರು.

ಅಮೆರಿಕದ ಜೀವನ ಅಷ್ಟು ಸುಲಭವಿರಲಿಲ್ಲ. ಆರಂಭದಲ್ಲಿ ಆಶ್ರಯ ಪಡೆಯಲು ಕಷ್ಟವಿತ್ತು. ಪಿಜಿ ಯಲ್ಲಿದ್ದುಕೊಂಡು ಶಿಕ್ಷಣ ಮುಂದುವರೆಸಿದರು. ಸ್ಕಾಲರ್ಶಿಪ್ ಜೀವನ ನಡೆಸಲು ಕೈಹಿಡಿಯಿತು. ಅಲ್ಲಿ ಶಿಕ್ಷಣ ಮುಗಿಸಿದ ನಂತ್ರ ಮೆಕ್ ಕಿನ್ಲೆ ಕಂಪನಿಯಲ್ಲಿ ಕೆಲಸ ಆರಂಭಿಸಿದ್ರು. ನಂತರ ಗೂಗಲ್ ಕಂಪನಿಯಿಂದ ಆಫರ್ ಬಂದಿತು. ಅಲ್ಲಿಂದ ಜೀವನ ತಿರುವು ಪಡೆಯಿತು.

ಆರಂಭದಲ್ಲಿ ಗೂಗಲ್ ಕ್ರೋಮ್ ನಲ್ಲಿ ಮಹತ್ವದ ಪಾತ್ರ ವಹಿಸಿದರು. ಗೂಗಲ್ ಕ್ರೋಮ್ ಇಂದು ಪ್ರತಿ ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಗಳಲ್ಲಿ ಇನ್ ಸ್ಟಾಲ್ ಆಗಿದ್ದರೆ ಅದರಲ್ಲಿ ಸುಂದರ್ ಪಾತ್ರ ಮುಖ್ಯವಾದುದು.

ನಂತರದಲ್ಲಿ ಗೂಗಲ್ ಡ್ರೈವ್ ಜವಾಬ್ದಾರಿ ವಹಿಸಿಕೊಂಡು ಸಮರ್ಥವಾಗಿ ನಿರ್ವಹಿಸಿದ ಅವರ ಕೆಲಸದ ಬಗ್ಗೆ ಸಂಸ್ಥೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇದ್ರಿಂದ ಮತ್ತಷ್ಟು ಉತ್ತೇಜರಾದ ಸುಂದರ್ ಜಿ ಮೇಲ್, ಗೂಗಲ್ ಮ್ಯಾಪ್ ಡೆವಲಪ್ ಮಾಡುವಲ್ಲಿ ಶ್ರಮ ವಹಿಸಿ ಸೈ ಎನಿಸಿಕೊಂಡರು.

ಒಟ್ಟಾರೆ, ಇಂದು ಜಗತ್ತಿನ ಮೂಲೆಮೂಲೆಯಲ್ಲಿ ಗೂಗಲ್ ವ್ಯಾಪಿಸುವಂತೆ ಕೆಲಸ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದಾರೆ ಸುಂದರ್. ಹೀಗೆ ಗೂಗಲ್ ಕಂಪನಿಯ ವಿವಿಧ ಪ್ರಾಡೆಕ್ಟ್ ಗಳನ್ನ ರೂಪಿಸಿದ ಫಲ ಅವರೀಗ ಅದೇ ಕಂಪನಿಯಲ್ಲಿ ಸಿಇಓ ಹುದ್ದೆಗೆ ಹೇರುವಂತೆ ಆಗಿದೆ. ಏನೇ ಮಾಡಿದರೂ ಶ್ರದ್ಧೆಯಿಂದ ಮಾಡಬೇಕು ಅನ್ನೋದು ಸುಂದರ್ ಅವರ ಕಿವಿಮಾತು. ಅದೇನೆ ಇರಲಿ. ಕಷ್ಟಪಟ್ಟು ಓದಿ, ಯುವಕರ ಐಕಾನ್ ಆಗಿರುವ ಸುಂದರ್ ಪಿಚೈ ಸಾಧನೆ ಎಲ್ಲರಿಗೂ ಪ್ರೇರಣೆ.

 

Share post:

Subscribe

spot_imgspot_img

Popular

More like this
Related

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ ಸ್ಯಾಂಡಲ್‌ವುಡ್‌ನ ಖ್ಯಾತ ನಟ...

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ವಜಾ

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ...

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ? ಇಲ್ಲಿ ತಿಳಿಯಿರಿ

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ?...

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....